Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಜುಲೈ 25ರಿಂದ 31ರ ವರೆಗೆ “ಏಳದೆ ಮಂದಾರ ರಾಮಾಯಣ ಪಾರಾಯಣ”



ಆಟಿ ತಿಂಗಳು ತುಳುನಾಡಿನ ಧಾರ್ಮಿಕ ಸಂಸ್ಕøತಿಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಆಟಿ ತಿಂಗಳು ಅನಿಷ್ಠಗಳ ಕಾಲ, ರೋಗರುಜಿನಗಳ ಕಾಲ, ಪ್ರಾಕೃತಿಕ ವಿಕೋಪಗಳು ಉಂಟಾಗುವ ಕಾಲ. ಈ ಸಮಯದಲ್ಲಿ  ಜನರ ಕಷ್ಟಕಾರ್ಪಣ್ಯಗಳನ್ನು ಕಳೆಯಲು ಮತ್ತು ಧೈರ್ಯ ಯಶಸ್ಸು ಲಭಿಸಲು ಪ್ರತಿ ಮನೆಗಳಲ್ಲಿ ರಾಮನಾಮ ಜಪ- ರಾಮಾಯಣ ಪಾರಾಯಣಗಳು ನಡೆಯುತ್ತಿತ್ತು. ಈಗಲೂ ಹಲವು ಕಡೆ ಈ ಸಂಪ್ರದಾಯ ನಡೆದು ಬರುತ್ತಿದೆ. ಅದರೆ ಅನ್ಯ ಭಾಷಾ ವ್ಯಾಖ್ಯಾನ-ವಾಚನಗಳು ತುಳುನಾಡಿಗರಿಗೆ ಅರಗಿಸಿಕೋಳ್ಳಲು ಕಷ್ಟ. ಈ ನಿಟ್ಟಿನಲ್ಲಿ ತುಳುವ ವಾಲ್ಮೀಕಿ ಎಂದೇ ಪ್ರಸಿಧ್ಧರಾದ ಮಂದಾರ ಕೇಶವ ಭಟ್ಟರು ಬರೆದ ಪ್ರಸಿದ್ದ ತುಳು ಕಾವ್ಯ ಮಂದಾರ ರಾಮಾಯಣ ತುಳುನಾಡಿಗೆ ದೊಡ್ಡ ಕೊಡುಗೆ. ಅಲ್ಲದೆ ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಮಹಾ ಕಾವ್ಯಕ್ಕೆ ಮನ್ನಣೆ ನೀಡಬೇಕೆಂಬ ಉದ್ದೇಶದಿಂದ  ತುಳುವರ್ಲ್ಡ್ ಕುಡ್ಲ ತುಳುವೆರೆ ಕೂಟ ಶಕ್ತಿನಗರ ಇದರ ಸಹಯೋಗದೊಂದಿಗೆ (ಏಳದೆ ಮಂದಾರ ರಾಮಾಯಣ) ಮಂದಾರ ರಾಮಾಯಣ ಪಾರಾಯಣ ಸಾಪ್ತಾಹ ತುಳು ವ್ಯಾಖ್ಯಾನ-ವಾಚನ ಆಯೋಜಿಸಲಾಗಿದೆ.

ಜುಲೈ 25ರಿಂದ 31ರ ವರೆಗೆ ತುಳುವ ಚಾವಡಿ -ತುಳುವೆರೆ ಕೂಟ ಶಕ್ತಿನಗರದಲ್ಲಿ ಜರಗುವ “ಏಳದೆ ಮಂದಾರ ರಾಮಾಯಣ”ದಲ್ಲಿ ನಾಡಿನ ಹೆಸರಾಂತ ವಿವಿಧ ವಾಚನಕಾರರು ಮತ್ತು ವ್ಯಾಖ್ಯಾನಕಾರರಿಂದ ವ್ಯಾಖ್ಯಾನ-ವಾಚನ ನಡೆಯಲಿದೆ, ಜುಲೈ 25ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು  ಜುಲೈ 31ರಂದು ಸಮಾರೋಪಗೊಳ್ಳಲಿದೆ, ಸಮಾರಂಭದಲ್ಲಿ ಧಾರ್ಮಿಕ, ಸಾಹಿತ್ಯಿಕ ಚಿಂತಕರಾದ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾಗೂ ಮಂದಾರ ರಾಮಾಯಣದ ಪ್ರಸಾರಕ್ಕೆ ಶ್ರಮಿಸುತ್ತಿರುವವರಿಗೆ ಮಂದಾರ ಸನ್ಮಾನ ನೀಡಿ ಗೌರವಿಸಲಾಗುವುದು. ಈ ಬಗ್ಗೆ ಶಕ್ತಿನಗರ ತುಳುವೆರೆ ಚಾವಡಿಯಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಭಾರತಿ ಜಿ. ಅಮಿನ್ ವಹಿಸಿದರು, ಡಾ. ರಾಜೇಶ್ ಆಳ್ವ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದರು. ಸಭೆಯಲ್ಲಿ ಎನ್. ವಿಶ್ವನಾಥ್, ಎಸ್. ಸುಧಾಕರ ಜೋಗಿ, ರಮೇಶ್ ಕುಮಾರ್, ಶ್ರೀಮತಿ ಸುಂದರಿ, ಶ್ರೀಮತಿ ವಿಮಲ, ಉದಯ ಕುಮಾರ್ ನಾಯ್ಕ್, ಸುರೇಶ್ ಕುಕ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Share on :

SUDDI

 

Copyright © 2011 Tuluworld - All Rights Reserved