Google

ICHARO

YEDDE PATHERA
Naramaniyagh ovven Kalpane malppere sadiyoundo.. Aven Padeyarala Sadhya undu.

ತಲವು ಲಪ್ಪುನು

 ಉಂದೊಂಜಿ ಬಾರಿ ಮಲ್ಲ ಸಾಪ, ತುಲುವೆರೆನ: "ಆಯಗ್/ಆಲೆಗ್ ತಲವು ಲಪ್ಪರೆ". ಕೊರಿನ ಅರಿ ಬಾರಾ, ದೊಡ್ಡಾ, ಪಿರ ಕೊರ್ಜೆರ್ ಡ, ಅತ್ತ್ ಡ ಕೊರಿನ ಪಡಿ (ಸಂಬಲ) ಕ್ ಸರಿಯಾಯಿನ ಬೇಲೆ ಬೆಂದ್ ಜೆರ್ಡ "ಆಯಗ್ ತಲವು ಲಪ್ಪರೆ ಆಂಡ್" ಇಂಚ ಮುರಿಯ ದೀವೊಂದು ಇತ್ತ. ಅಪಗಂಡಾ ಇ ತಲವು ಪಂಡ ದಾದ? 
      ತಲವು ಪಂಡ ಸೂತಿಗ. ತಲವು ಕಲೆಪಿನ ಬೊಜ್ಜ (ಸುದ್ದ)ದ ಕೆಲಸ ಮಲ್ತಿನ ಮಡ್ಡೆಲಗ್ ಕೊರ್ಪಿನ ಪಡಿ (ಸಂಬಲ)ನ್ ಲಪ್ಪುನೈವೆನ್ (ಮಾಪುನು, measuring) 'ತಲವು ಲಪ್ಪುನು' ಪನ್ಪೆರ್. ಬವುಸ ದುಂಬುಡು ಕಿಲೇಸಿಗ್ ಲಾ 'ತಲವು ಲತ್ತ್ ದ್' ಕೊರೊಂದು ಇತ್ತೆರ್. ಸುಡಲೆಗ್ ನುಪ್ಪು ಪಾಡ್ದ್, ಜಾಲ್ ಗ್ ಬತ್ತ್ ದ್, ತೆಂಕಾಯ ಬಡಕಾಯ (ದಕ್ಷಿಣೋತ್ತರವಾಗಿ) ಪಜೆ ಬುಡ್ಪ ಪಾಡ್ ದ್, ಪಜೆತ ಕೊಡಿಟ್, ನಡುಟು, ಕಡೆಟ್ ಮೂಜಿ ಮೂಜಿ ಸರ್ತಿ ಬಾರ್ ದೊರ್ಪುನು (ಕುರುವೆಡ್ದ್). ದುಂಬುಡು ಕಲಸೆಡ್ದ್ ಬಾರ್ ದೊರ್ಪುನು ಪಂದ್ ಕೇಂದಿನ ನಿನೆಪು. ದಾಯೆಗ್ ಪಂಡ ಲಪ್ಪರೆ (to measure) ಸೇರ್, ಕಲಸೆದಂಚಿನ ಲಪ್ಪು (measuring device) ಬೋಡು. ಅಂಚ ಪಾಡಿನ ಬಾರ್ ನ್ ಮಡ್ಡೆಲೆ ಪಸೊಂದು ಪೋಪಿನಿ. ತುಲುವೆರೆಡ್ ಅಮೆ ಸೂತಿಕದ ಸುದ್ದ ಮಲ್ಪುನು ಮಡ್ಡೆಲೆರ್. ಅಪಗಾಂಡ 'ಪಡಿ ಲಪ್ಪುನು' ಉಂದು ಸಾಪ ಎಂಚ ಆಪುಂಡು? 
     ನಮ ಏರೆಗ್ಲಾ ಕೊರಿನ ಅರಿ ಬಾರ್, ದೊಡ್ಡು ಕಾಸ್ ಪಿರ ಬತ್ತ್ ಜಿಡ, ಅವ್ವೆನ್ ಗೆತೊಂದಿನ ನರಮಾನಿನ 'ತಲವು ಲಪ್ಪರೆ' ಗ್ ಆವಡ್ ಪಂದ್ ಸಾಪಿನು. ಐತ ಅರ್ತ್ ಗೆತೊಂದಿನಾಯೆ/ ಆಲ್ ಸೈಯ್ತ್ ದ್ ಪೋವಡ್ ಪಂದ್ ಬಯಕುನು.
     ತಲವು ಲತ್ತಿ ಬೊಕ್ಕ, ಬಚ್ಚಿರೆ ಬಜ್ಜೆಯಿ ಪಗಪರೆ ಉಂಡು. ಪಜೆನ್ ಮುಡಾಯಿ ಪಡ್ಡಾಯಿ ಪಾಡ್ದ್, ಐತ ಮಿತ್ತ್ ಉಂತುದು ಕಿರಿಯ ಪತಿನಾಯೆ ಪರವೂರ್ದ ಅತ್ತ್ ಡ ಊರ್ದ ಹಿರಿಯೆರ್ ಒರಿಯಡ 'ಬುಡಿ ತರೆ ಕಟ್ಟಾದ್ ಕೊರೊಡು' ಪಂದ್ ಬಚ್ಚಿರೆ ಬಜ್ಜೆಯಿ ಕೊರ್ದ್ ಬಿನ್ನಯ ಮಲ್ಪುವೆ (ಕೇನೊಂಬೆ). ಆ ಹಿರಿಯೆರ್, ಕಿರಿಯ ಪತಿನಾಯಡ ಬಚ್ಚಿರೆ ಬಜ್ಜೆಯಿ ಪಗತೊಂದು 'ನಮ ಸಂತಾನ ಸಂತೇಸಿಗ್ ಬೊಡ್ಚಿ' ಪಂದ್ ಪನ್ಪೆರ್. ಇಂಚ ಮುಕ್ಕೊಲು ಮುಕ್ಕೊಲು ಪನ್ಪೆರ್. ನಮನ ಸಂತಾನ ಸಂತೇಸಿಡ್ ಸಾವು ಬತ್ತ್ಂಡ, ಬೊಜ್ಜದಾನಿ ಪೊಂಜೋವು ತರೆ ಬುಡ್ದ್, ಚಂಡಿ ಕುಂಟುಡು ಉಂತುವೆರ್. ಆನ್ ಬಾಲೆಲು ತರೆಗೀಸ್ ದ್ ಇಪ್ಪುವೆರ್, ದೂಲಪ್ಪದಾನಿ. ಬೊಜ್ದದಾನಿ ಮುರ್ಕು ಮೀದ್, ಚಂಡಿ ಕುಂಟುಡು ಉಂತುವೆರ್. ನಮನ ಸಂತೇಸಿ ಸಂತಾನೊಗು ಇ ಪರಿಸ್ಥಿತಿ ಬರ್ಪಿನಿ ಬೊಡ್ಚಿ ಪನ್ಪಿನ ಎಡ್ಡೆಪ್ಪುನು ಬಯಕ್ ದ್, ಬುಡಿ ತರೆ ಕಟ್ಟರೆ, ಶೋಕಾಚರಣೆ ಕೈದ್ ಮಲ್ಪೆರ್ ಅಪ್ಪನೆ ಕೊರ್ಪೆರ್ ಮಾತ ಊರ್ದಗಲೆನ, ಪರವೂರ್ ದಗಲೆನ, ಪೊದ್ದೆರೆನ, ಇಷ್ಟೆರೆನ ಪರವಾದ್.
     ಆಯನ/ಆಲೆನ 'ತಲವು ಲಪ್ಪರೆ ಆಂಡ್', ಅಂಚೆನೆ ಆಯನ 'ಮೇಲ್ ಗ್ ಪಾಡರೆ ಆಂಡ್' ಪಂದ್ ಲಾ ಒಂಜಿ ಸಾಪ ದೀಪಿನಿ. ಆ ಆಯನ/ ಆಲೆನ ಪುನತ ಮೇಲ್ ಗ್ ಪಾಡುನ ಬೊಲ್ದು ಕುಂಟುಗು ಪಂದ್ ಅರ್ತ. ಆಯನ 'ತಿಗಲೆಗ್ ದೀಂಡ್', 'ಸುಡಲೆಗ್ ಪಾಡರೆ', 'ಪುಲ್ಲೇಲ್ ಗ್' 'ಮರೇಡುನು' ಉಂದು ಪೂರ ಒರಿಯನ ಸಾವುನ ಬಯಕುನ ಸಾಪೊಲು. ಅಂಚೆನೆ ಪೊಂಜೋವೆಗ್ ಆಲೆನ ಕಂಡನೆ ಸೈತ್ ಪೋವಡ್ ಪಂದ್ ಸಾಪಿವುನ ನೆರಡೆ ನೆಟೆ ಪನರೆ ಸರಿ ಆಪುಜಿ. (010123)

✍️ ಕೌಡೂರು ನಾರಾಯಣ ಶೆಟ್ಟಿ, ಇಟೆಲಿ

Read Post | comments

ದೈವಾಚರಣೆಯ ಮೂಲಕ್ರಮ ಏನು ?

ದೈವಾಚರಣೆಯ ಮೂಲಕ್ರಮ ಏನು ? ಈಗ ವೈದೀಕರಣವಾಗಿದೆಯಾ ಎಂದು ಕೇಳಿದರೆ ...!

ಉತ್ತರಕ್ಕೆ ದಿಕ್ಕಿಗೆ ಬಾಗಿರುವ ತೆಂಗಿನಮರದಿಂದ ತೆಂಗಿನಕಾಯಿಯನ್ನು ಭೂಮಿಗೆ ಸ್ಪರ್ಶ ಆಗದಂತೆ ಕಿತ್ತು , ಅದನ್ನ ಸಿಪ್ಪೆ ಬಿಡಿಸದೆ ಶುದ್ಧ ಬಾವಿಯ ನೀರಿಂದ ತೊಳೆದು ರುಂದನದ ಕಟ್ಟೆ ಅಥವಾ ತುಳಸಿಕಟ್ಟೆಯ ಮುಂದೆ ಒಂದು ಮಣೆ ಇಟ್ಟು ಅದರ ಮೇಲೆ ಬಾಳೆ ಕೊಡಿ ಇರಿಸಿ ತದನಂತರ ಆ ತೆಂಗಿನಕಾಯಿಯ ಸಣ್ಣ ಸಿಪ್ಪೆ ತೆಗೆದು ಜುಟ್ಟು ಮಾಡಿ ಬಾಳೆ ಎಲೆಯ ಮೇಲೆ ಇಡಲಾಗುತ್ತದೆ.

ನಂತರ ಊರಿನಲ್ಲೇ ಸಿಗುವ ಕಾಡ ಕೇಪುಲ ಹೂವನ್ನು ಅದಕ್ಕೆ ಹಾಕಿ, ಯಾವ ದೈವವನ್ನ ನಮಗೆ ನಂಬಬೇಕಿದೆಯೋ ಅದರ ಹೆಸರನ್ನ ಕರೆದು ಉದಾಹರಣೆಗೆ ಸ್ವಾಮಿ ಪಂಜುರ್ಲಿ ಅಥವಾ ಸ್ವಾಮಿ ಜಿಮಾದಿ ಎಂದು ಕರೆದು ಮದಿಪುವಿನ ಮೂಲಕ ದೈವವನ್ನ ಆ ತೆಂಗಿನಕಾಯಿಗೆ ಆಕರ್ಷಣೆ ಮಾಡಲಾಗುತ್ತದೆ. ಇಲ್ಲಿ ರಾಜಂದೈವವಾದರೆ ಎರಡು ತೆಂಗಿನಕಾಯಿ ಹಾಗೂ ಬೇರೆ ದೈವವಾದರೆ ಒಂದು ತೆಂಗಿನಕಾಯಿ.ಗುಳಿಗ ಸುಲಭದಲ್ಲಿ ಬರುವವನಲ್ಲದ ಕಾರಣ ಆತನಿಗೆ ಜೊತೆಯಲ್ಲಿ ಒಂದು ಕರ್ಕ್ ಪುಳಿಯನ್ನ ಇಡಲಾಗುತ್ತದೆ.

ನಂತರದಲ್ಲಿ ದೈವಕ್ಕೆ ಆವೇಶ ಬರಿಸುವ ಪೂಜಾರಿಯನ್ನ ಕರೆದು ಆತನಿಗೆ ಮನೆಯ ಅಥವಾ ಊರ ಹಿರಿಯರು ಎಣ್ಣೆ ನೀಡಿ ನಂತರ , ಒಂದು ಇಡೀಯ ಅಡಕೆ ಹಿಂಗಾರ ನೀಡಿ ಆತನ ಮೇಲೆ ಜೋಗ (ದರ್ಶನ) ಬರುವಂತೆ ಮಾಡಲಾಗುತ್ತದೆ‌. ಆ ದರ್ಶನದಲ್ಲಿ ದೈವ ಅಲ್ಲಿಗೆ ಬಂದಿರುವ ಬಗ್ಗೆ ಖಾತರಿಪಡಿಸಲಾಗುತ್ತದೆ. ನಂತರ ಜೋಗದ ಮಾಣಿಯ ಮೂಲಕ ದೈವದಲ್ಲಿ ಅರಿಕೆ ಮಾಡಿ, ದೈವಕ್ಕೆ ಮನೆಮಂಚವಿನ ಮೂಲಕ ಆರಾಧನೆಯೋ ಅಥವಾ ಕಲ್ಲಿನ ಮೂಲಕ ಆರಾಧನೆ ಮಾಡಬೇಕೋ ಎಂದು ಕೇಳಲಾಗುತ್ತದೆ. ನಂತರ ಆ ಶಕ್ತಿ ಕಾಯ ಬಿಟ್ಟು ಪುನಃ ತೆಂಗಿನಕಾಯಿಗೆ ಸೇರುತ್ತದೆ. ಜೋಗ ಭರಿಸಲು ಶಕ್ತರಿಲ್ಲದ ಬಡವರು ಕೇವಲ ಪ್ರಾರ್ಥನೆಯ ಮೂಲಕವೇ ಆ ವಿಧಿಯನ್ನ ಪೂರೈಸುತ್ತಿದ್ದರು.

ನಂತರದಲ್ಲಿ ಒಂದು ಸಣ್ಣ ತೆಂಗಿನಗರಿಯ ಕೊಟ್ಯ ( ತೆಂಗಿನ ಗರಿಯಿಂದ ನಿರ್ಮಿಸಿದ ಕೋಣೆಯಲ್ಲಿ ) ಅಥವಾ ಹಾಲು ಬರುವ ಮರದಲ್ಲಿ  ಆ ತೆಂಗಿನಕಾಯಿಯನ್ನ ನೇತಾಡಿಸಿ ದೈವಕ್ಕೆ ಪ್ರಾರ್ಥನೆ ಮಾಡುತ್ತಾ ನಂಬಲಾಗುತ್ತದೆ. ನಂತರ ಅನುಕೂಲವಾದಾಗ ಒಳ್ಳೆಯ ದಿನ ನಿರ್ಧರಿಸಿ ದೈವಕ್ಕೆ ಮುಗ,ಖಡ್ಸಲೆ ನಿರ್ಮಾಣ ಮಾಡಿ ನಂತರ ಅದನ್ನ ಮನೆಗೆ ತಂದು ತುಳಸಿಕಟ್ಟೆಯ ಎದುರಿರಿಸಿ ಅದರ ಮೇಲೆ, ಭತ್ತ ಚೆಲ್ಲಿ ತೆಂಗಿನಕಾಯಿ ಇರಿಸಿ ನಂತರ ಬಟ್ಟೆಯಿಂದ ಮುಚ್ಚಿ ಇಡಲಾಗುತ್ತದೆ.

ಆ ಬಟ್ಟೆ ಯಾವುದು ಗೊತ್ತೇ ? ಹೆಣಕ್ಕೆ ಹೊದಿಸಲಾದ ಬಟ್ಟೆಯನ್ನ ಸ್ಮಶಾನದಿಂದ ಹಿಂದಿರುಗಿಸಿ ತಂದು ಅದನ್ನ ಮಡಿವಾಳರು ಸೆಗಣಿ‌ ನೀರಲ್ಲಿ ಒಂದುದಿನ ಅದ್ದಿಟ್ಟು ಶುದ್ಧಗೊಳಿಸಿ ನಂತರದಲ್ಲಿ ಆ ಬಟ್ಟೆಯನ್ನು ದೈವಗಳ ಕಲಶ ಪ್ರತಿಷ್ಠೆಯ ದಿನ ಮುಗ,ಖಡ್ಸಲೆ ,ಗಂಟೆ ಮುಚ್ಚಲು ಹಾಗೂ ಜೀಟಿಗೆಯ ಬಟ್ಟೆಯಾಗಿ ಬಳಸುತ್ತಿದ್ದರು. ತುಳುನಾಡಲ್ಲಿ ಮಡಿವಾಳರಿಗೆ ದೈವಸ್ಥಾನದಲ್ಲಿ ಅರ್ಚಕರ ಸ್ಥಾನ. ತುಳುವರ ಹುಟ್ಟು ಸಾವು ಹಾಗೂ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಮಡಿವಾಳ ಜನಾಂಗದ ಪಾತ್ರ ದೊಡ್ಡದು , ಅವರನ್ನ ಶುದ್ಧದ ದಲ್ಯಂತೆರ್ ಎಂದು ಕರೆಯಲಾಗುತ್ತದೆ.

ಶಾಶ್ವತವಾಗಿ ದೈವವನ್ನು ನೆಲೆಯಾಗಿಸಲು ಮರುದಿನ ಪಂಚಭೂತಗಳಿಗೆ ದೈವಸ್ಥಾನದಲ್ಲಿ ಪಂಚ ತ್ರಿಕೋನವನ್ನ ದೈವದ ಪೂಜಾರಿಗಳು ಬಿಡಿಸುತ್ತಾರೆ. ಶೇಡಿ ಹುಡಿ ಬಳಸಿ ಮಂಡಲ ಬರೆದು, ಅದರಮೇಲೆ ಕಲಶವಿರಿಸಲಾಗುತ್ತದೆ. ದೈವ ಸ್ಥಾನದ ಒಕ್ಕೆಲ್ಗೆ ಮೂರು, ಐದು ಅಥವಾ ಗರಿಷ್ಠ ಒಂಭತ್ತು ಕಲಶಗಳು ಮಾತ್ರ ಅದಕ್ಕಿಂತ ಮೇಲಿನ ಕಲಶವೆಲ್ಲಾ ದೇವರಿಗೆ. 

ಈ ಕಲಶವನ್ನ ಪ್ರತಿಷ್ಠಾಪಿಸಿ ನಂತರದಲ್ಲಿ ಮನೆಮಂಚವು ಅಥವಾ ಕಲ್ಲಿನ ಮೇಲೆ ಕಲಶಶುದ್ಧಿ ಮಾಡಲಾಗುತ್ತದೆ.ಇದೆಲ್ಲವನ್ನು ಮಾಡುವುದು ನೇಮಿತ ಪೂಜಾರಿಯೇ ಹೊರತು ಬ್ರಾಹ್ಮಣರಲ್ಲ , ದೈವಕ್ಕೆ ಹೋಮ ಇಡುವುದು ಕೂಡಾ ಪೂಜಾರಿ. ಬಿಡಿಸಿದ ತ್ರಿಕೋನಗಳ ಮುಂದೆ ಒಂದು ಸೀಯಾಳ ಇಡಲಾಗುತ್ತದೆ ಅದು ಭೂತಗಳ ಅಧಿಪತಿ ತುಳುನಾಡ ಬೆರ್ಮೆರಿಗೆ. ಬಾಳೆ ಎಲೆಯಲ್ಲಿ ಅಕ್ಕಿ ಹಾಗೂ ತೆಂಗಿನಕಾಯಿ ಬಡಿಸಿ ಇಡುವುದು ತುಳುವರ ಆದಿದೇವ ಬಾಮಕುಮಾರನಿಗೆ. ಕಲಶದ ಜೊತೆ ಕೇಪುಲ ಹೂ, ತುಳಸಿ ದಳ ,ತುಂಬೆ ಹೂ, ಪಿಂಗಾರ , ಗರಿಕೆ ಕೊಡಿ ಹಾಗೂ ಮಾವಿನಕೊಡಿ ,ಹಲಸಿನಕೊಡಿ ಬಳಸಲಾಗುತ್ತದೆ ಹಾಗೂ ಕಲಶಕ್ಕೆ ಹಾಲು,ಶುದ್ಧ ಬಾವಿಯ ನೀರು, ತುಪ್ಪ ಹಾಗೂ ಎಳನೀರು ತುಂಬಲಾಗುತ್ತದೆ. 

ಕಲಶವನ್ನ ಭೂತೊಕ್ಕೆಲು ಮಾಡುವ ದಿನ ಈ ಮುಗಮೂರ್ತಿ ಇಡಲಾದ ಜಾಗಕ್ಕೆ ತಂದು ಅದರ ಮೇಲೆ ಪ್ರೋಕ್ಷಿಸಿ ಜೊತೆಗೆ ಕುರ್ದಿನೀರು ಪ್ರೋಕ್ಷಿಸಿ , ತೆಂಗಿನಕಾಯಿಯನ್ನ ಒಡೆದು ಶಕ್ತಿಯನ್ನು ಮುಗಕ್ಕೆ ವರ್ಗಾಯಿಸಲಾಗುತ್ತದೆ. ನಂತರ ದೈವದ ಪಾತ್ರಿಗೆ ಜೋಗ ಭರಿಸಲಾಗುತ್ತದೆ ಆ ಸಂಧರ್ಭದಲ್ಲಿ ಕುಟುಂಬಿಕರ ಮಧ್ಯೆ ಅಥವಾ ಊರವರ ಮಧ್ಯೆ ಯಾವುದಾದರೂ ನ್ಯಾಯದ (ಭಿನ್ನಾಭಿಪ್ರಾಯ) ವಿಚಾರವಿದ್ದರೆ ಅದನ್ನೆಲ್ಲಾ ಪರಿಹರಿಸಿ ನಂತರ ಜೋಗದ ಅಂದರೆ ದರ್ಶನದ ಮೂಲಕ ಪೂಜಾರಿ ಆ ಪರಿಕರಗಳನ್ನ ಒಳಗಿರುವ ಮನೆಮಂಚಾವಿಗೆ ತಂದು ಇರಿಸುತ್ತಾರೆ  ಇದನ್ನ ಒಟ್ಟಾಗಿ ದೈವಮಂಡಲ ಅನ್ನುತ್ತಾರೆ.ಅಲ್ಲಿಗೆ ದೈವದ ಪ್ರತಿಷ್ಠೆ ಮುಗಿಯಿತು.

 ಇಲ್ಲೆಲ್ಲೂ ಬ್ರಾಹ್ಮಣರ ಉಪಯೊಗ ಬರುವುದೇ ಇಲ್ಲ. ದೈವಾರಾಧನೆಗೆ ಮುಗ ಸೇರಿಕೊಂಡಿದ್ದು ವಿಶ್ವಕರ್ಮ ಸಮುದಾಯ ತುಳುನಾಡಿಗೆ ಬಂದಮೇಲೆ ಅದರ ಮೊದಲು ಮುಗವಿಲ್ಲದೇ ಕೇವಲ ತೆಂಗಿನಕಾಯಿಯ ಮೂಲಕವೇ ಹಾಗೂ ಕಲ್ಲಿನ ಮುಖಾಂತರ ಆರಾಧನೆ ನಡೆಯುತ್ತಿತ್ತು ಅದು ಒಂದರ್ಥದ ಪ್ರಕೃತಿಯ ಆರಾಧನೆ. ತೆಂಗಿನಕಾಯಿಯ ಸಿಪ್ಪೆಗೆ ಎಣ್ಣೆ ಹಾಕಿ ಹೊಗೆ ಏಳಿಸಿ ಧೂಪ ನೀಡಲಾಗುತ್ತಿತ್ತು.ತಾಸೆ ,ಡೋಲು ಸೇರಿಕೊಂಡಿದ್ದು ಕೂಡಾ ನಂತರದಲ್ಲಿ ಮೊದಲು ಕೇವಲ ತೆಂಬರೆ ಮಾತ್ರ ಕೋಲಕ್ಕೆ ಬಳಕೆಯಾಗುತ್ತಿತ್ತು, ಈಗೀಗ ಬಂಗಾರದ ,ಬೆಳ್ಳಿಯ ಅಣಿ ,ಲೋಹದ ಪರಿಕರಗಳು ಸೇರಿಕೊಂಡಿವೆಯಾದರೂ ಮೊದಲು ದೈವಾರಾಧನೆ ಅನ್ನುವುದು ಬಹಳ ಸಿಂಪಲ್ ಆಗಿದ್ದು ಯಾವ ಬಡವನೂ ಆರಾಧಿಸುವ ಸ್ಥಿತಿಯಲ್ಲಿತ್ತು.

ಇತ್ತೀಚಿಗೆ ಅಂದರೆ ದೈವಾರಾಧನೆಯ ಬಗ್ಗೆ ಅರಿವಿಲ್ಲದ ಜನ ಯಾವಾಗ ತಾಂಬೂಲ ಪ್ರಶ್ನೆ ಇಡಲು ಶುರು ಮಾಡಿದರೋ ಅಂದಿನಿಂದ ಸ್ವಲ್ಪ ಹಳಿತಪ್ಪಲು ಶುರುವಾಗಿದೆ.ತುಳುನಾಡಲ್ಲಿ ತಾಂಬೂಲ ಪ್ರಶ್ನೆ ಇಡುವುದಕ್ಕೆ ಒಂದು ನಿರ್ಧಿಷ್ಟ ವರ್ಗಕ್ಕೆ ಅಂದರೆ ಬಲ್ಯಾಯರಿಗೆ ಮಾತ್ರ ಅಧಿಕಾರವಿತ್ತು ಆದರೆ ಇಂದು ಜ್ಯೋತಿಷ್ಯ ಕಲಿತ ಬ್ರಾಹ್ಮಣರೂ ಜೊತೆಗೆ ಕೇರಳದ ತೈಯಂ ಆಚರಣೆ ಕಂಡ ಪೊದುವಾಳರು ಪ್ರಶ್ನೆ ಇಡಲು ಶುರುಮಾಡಿದ್ದರಿಂದ ಹಾಗೂ ಹಿರಿಯ ತುಳುವರ ಸಲಹೆ ಸ್ವೀಕರಿಸಲು ಅವರು ನಿರಾಕರಿಸಿದ್ದರಿಂದ ಅದು ದಾರಿತಪ್ಪಲು ಶುರುವಾಯಿತು , ಪೊದುವಾಳರಿಂದ ಪ್ರಶ್ನೆ ಇಟ್ಟ ಜಾಗದಲ್ಲಿ , ದೈವಾರಾಧನೆ ತೈಯಂ ಹಾಡಿ ಹಿಡಿದಿದೆ ಹಾಗಾಗಿ ಕೆಲ ಮೂಲ ತುಳುವರ ಬಾಯಲ್ಲಿ ವೈದೀಕರಣ ಎಂಬ ಶಬ್ದ ಕೇಳಿಬರುತ್ತದೆ. ಇದು ಕೆಲವೇ ಕೆಲವು ಜ್ಯೋತಿಷಿಗಳ ಜೊತೆಗೆ ಪೊದುವಾಳರ ತಪ್ಪಾದರೂ ದೂಷಣೆ ಹೊತ್ತುಕೊಳ್ಳಬೇಕಾದ ಕರ್ಮ ಬ್ರಾಹ್ಮಣ ಸಮುದಾಯದ್ದು ಆಗಿದೆ ಇದು ಹೇಗೆ ಅಂದರೆ ಇಲ್ಲಿ ದೀಕ್ಷಿತ್ ಯಾರಿಗಾದರೂ ಬೈದರೆ ಅದಕ್ಕೆ ಶೆಟ್ಟಿಗಾರ ಸಮುದಾಯ ಹೊಣೆ ಎಂಬಂತೆ !

ಹಿಂದೆ ದೇವಸ್ಥಾನವನ್ನು ಮೂಲದಿಂದ ತಂದು ಬೇರೆಡೆ ನಂಬಬೇಕಿದ್ದರೆ ಅಥವಾ ದೈವಸ್ಥಾನವನ್ನ ಜೀರ್ಣೋದ್ಧಾರ ಮಾಡಬೇಕಿದ್ದರೆ "ದೈವಮಂಡಲ" ಮಾಡುವ ಕ್ರಮವಿತ್ತಂತೆ. ಮೂಲದಿಂದ ಯಾಕೆ ಬದಲಾವಣೆ ಮಾಡ್ತಾರೆ ಅಂದರೆ ಉದಾಹರಣೆಗೆ ಪಣಂಬೂರಿನ ಹಾರ್ಬರ್ ನಿರ್ಮಾಣ ವೇಳೆ ವೀರಭದ್ರ ದೇವಸ್ಥಾನವನ್ನ ಸಿದ್ಧಕಟ್ಟೆಗೆ ಸ್ಥಳಾಂತರಗೊಳಿಸುವಾಗ ಅಲ್ಲಿನ ವಿಗ್ರಹದ ಪ್ರಾಣ ವರ್ಗಾವಣೆಯನ್ನ ವೈದಿಕ ವಿಧಾನಗಳಲ್ಲಿ ಮಾಡಲಾಯಿತು, ದೈವವನ್ನ ಜಾಗದ ಮಣ್ಣು ತೆಗೆದುಕೊಂಡು ಹೋಗುವ ಕ್ರಮದಲ್ಲಿ ಹೋದರೂ, ದೈವ ಮಾತ್ರ ಹೋಗಲು ಕೇಳಲೇ ಇಲ್ಲ .ಅಲ್ಲಿ ದೈವಮಂಡಲ ಮಾಡಿದ್ದರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ ಆದರೆ ಇಂದಿಗೂ ಜುಮಾದಿಬಂಟ ತನ್ನ ಇರುವಿಕೆಯನ್ನ ಹಾರ್ಬಾರ್ ಒಳಗಡೆ ತೋರಿಸಿದ್ದಾನೆ.

ನಾಗಮಂಡಲ ಯಾವಾಗಿನಿಂದ ಶುರುವಾಯಿತು ಎಂಬ ಬಗ್ಗೆ ನಾನು ಯಾರಲ್ಲೂ ಕೇಳಿದರೂ ಮಾಹಿತಿ ಸಿಗಲಿಲ್ಲ ಹಾಗಾಗಿ ನನಗೆ ಆ ಆಚರಣೆಯ ಬಗ್ಗೆ ಅಷ್ಟೊಂದು ಒಲವು ಇಲ್ಲ ಆದರೆ ಕಾಡ್ಯನಾಟ ಅಥವಾ ಬಡಗು ದಿಕ್ಕಲ್ಲಿ ನಡೆಯುವ ಮಂಡ್ಲಭೋಗ ಅಥವಾ ಢಕ್ಕೆಬಲಿಯ ರೂಪಾಂತರವೇ ನಾಗಮಂಡಲ ಅನ್ನಲಾಗುತ್ತದೆ. ತುಳುವರಿಗೆ ನಾಗನೂ ದೈವ ಆಗಿರುವುದರಿಂದ ಆತನಿಗೆ ನಾಗದರ್ಶನ ಮಾಡುತ್ತಾರೆ ಹಾಗೂ ಆತನಿಗೆ ತನು ತಂಬಿಲ ನೀಡುವ ಕ್ರಮವಿತ್ತು ಆದರೆ ಕಾಲ ಕಳೆದಂತೆ ಅದು ನಾಗನ ಕಲ್ಲಿಗೆ ಹಾಲೆರೆಯುವ ಕ್ರಮವಾಗಿ ಬದಲಾವಣೆ ಆಯಿತು.

ದೈವಮಂಡಲ ಹಾಗೂ ದೈವಹೋಮ ಮರೆಯಾಗಿ ಬ್ರಹ್ಮಕಲಶ ಹಾಗೂ ಗಣಹೋಮ ಮಾಡಲು ಶುರುಮಾಡಿದ್ದು ತುಳುವರು ತಮ್ಮ ಮೂಲಾಚರಣೆಯನ್ನು ಮರೆಯುವಂತಾಯಿತು. ಈಗ ದೈವಮಂಡಲ ಯಾರಿಗೆ ಗೊತ್ತಿದೆ ಎಂದರೆ ಗ್ರಾಮೀಣ ಭಾಗದಲ್ಲಿರುವ ಕೆಲವೇ ಕೆಲವು ಜನಗಳಿಗೆ ಮಾತ್ರ ಇದನ್ನು ಯಾರಾದರೂ ಅಧ್ಯಯನ ಮಾಡಿ ಮುಂದುವರಿಸಿದರೆ ಮಾತ್ರ ಮುಂದಿನ ಜನಾಂಗಕ್ಕೂ ಮಾಹಿತಿ ಸಿಗಬಹುದು.

ದೈವಕ್ಕೆ ಹೋಮ ಶೇಡಿಯ ರಂಗೋಲಿ ಹಾಕಿ ಹಲಸಿನ ಕಟ್ಟಿಗೆಯಲ್ಲಿ ಇಡುವುದನ್ನ  ನಾನು ಸಣ್ಣಂದಿನಲ್ಲಿ ನೋಡಿದ್ದೆ ಈಗ ಬಹುತೇಕ ಕಡೆ ಗಣಹೋಮವಾಗಿ ಬದಲಾಗಿದೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ದೈವದ ಮುಗಕ್ಕೆ ಆರತಿ ಬೆಳಗಲು ಶುರುಮಾಡಿದ್ದಾರೆ ಅದು ಕೂಡಾ ಅರ್ಚಕರಿಂದ ಆರತಿಗಳು ಆಗುತ್ತಿವೆ. ಅಸಲಿಗೆ ದೈವಕ್ಕೆ  ಧೂಪ ಮಾತ್ರ ಎತ್ತಲು ಅವಕಾಶವಿರುವುದು ಅದರೆ ಈಗ ಆರತಿ ಹಿಡಿಯಲು ಶುರುಮಾಡಿದ್ದಾರೆ. 

 ಪ್ರಾಣಪ್ರತಿಷ್ಟಾಪನೆ ಮೂಲಕ ಕೂರಿಸಲಾದ ದೇವರ ವಿಗ್ರಹದ ಸುತ್ತ ಇರುವ ಚೈತನ್ಯವನ್ನ ಆರತಿಗೆ ಆಕರ್ಷಿಸಿ ಅದನ್ನ ಅಂಗೈ ಮೂಲಕ ಧನಾತ್ಮಕ ಶಕ್ತಿ ನಮ್ಮ ದೇಹ ಸೇರುವಂತೆ ಮಾಡಲು ಆರತಿ ಎತ್ತುವುದು ಆದರೆ ದೈವದ ಶಕ್ತಿ ಇರುವುದು ಆ ಮಣ್ಣಲ್ಲಿ. ಮುಗ ದೈವಾಭರಣವಾದರೂ ಅದಕ್ಕೆ ವಿಶೇಷ ಸಂಧರ್ಭದಲ್ಲಿ ಮಾತ್ರ ದೈವ ಆವಾಹನೆಯಾಗುವಂಥದ್ದು ಹಾಗಾಗಿಯೇ ದೈವದ ಮುಗಗಳನ್ನ ಭಂಡಾರಮನೆಯಲ್ಲಿ ಇಟ್ಟು , ಉತ್ಸವ ಸಂಧರ್ಭದಲ್ಲಿ ಭಂಡಾರ ಮೆರವಣಿಗೆ ಮೂಲಕ ಸಾಗಿ , ದೈವಸ್ಥಾನ ಸೇರುವ ಕ್ರಮ ಇರುವುದು. ಹಾಗಾಗಿ ಆರತಿ ಎತ್ತುವ ಕ್ರಮ ಎಷ್ಟು ಸರಿ ಅಂತಾ ನೀವೇ ಯೋಚಿಸಿ.

ಉಜೆ ಭಸ್ಮ ಪ್ರೋಕ್ಷಣೆ ಮಾಡಿ ದೈವಸ್ಥಾನವನ್ನ ಮಡಿವಾಳರು ಶುದ್ಧ ಮಾಡುತಿದ್ದರು ಅದೇ ರೀತಿ ದೈವಕ್ಕೆ ಧೂಪ ಎತ್ತುವ ಅಧಿಕಾರ ದೈವಕ್ಕೆ  ನೇಮಿತ ಪೂಜಾರಿಗೆ ಮಾತ್ರ ,ಆದರೆ ಆಪತ್ಕಾಲದಲ್ಲಿ ಶುದ್ಧಾಚಾರದಲ್ಲಿರುವ ಬಿಲ್ಲವ ಸಮುದಾಯದ ವ್ಯಕ್ತಿಗೆ ಯಾವುದೇ ದೈವಕ್ಕೆ ಸೇವೆ ಮಾಡುವ ಅಧಿಕಾರ ಇರುತ್ತದೆ ಆದರೆ ಕೆಲವು ಕಡೆ ಬ್ರಾಹ್ಮಣರು ಅಂದರೆ ವೇದಮೂರ್ತಿಗಳಾದ ಗ್ರಾಮದ ತಂತ್ರಿಗಳ ಹೊರತಾಗಿ ದೈವಸ್ಥಾನದ ಒಳಗಡೆ ಹೋಗುತ್ತಿರುವುದು ನಿಜಕ್ಕೂ ತುಳುವರ ನಂಬಿಕೆಗೆ ವಿರುದ್ಧ. ಮೂಲ್ಯ ವರ್ಗಕ್ಕೆ , ಪೂಜಾರಿ ವರ್ಗಕ್ಕೆ  ,ಮಡಿವಾಳ ವರ್ಗಕ್ಕೆ ಎಲ್ಲರಿಗೂ ಅವರದೇ ಆದ ಜವಾಬ್ದಾರಿಗಳಿವೆ ಅದನ್ನು ಯಾರಾದರೂ  ಬದಲಾಯಿಸುವುದು ಹಿತವಲ್ಲದ ವಿಚಾರ.

ನಾನು ಯಾವುದೇ ಸಮುದಾಯದ ವಿರೋಧಿ ಅಲ್ಲ ಆದರೆ ಇರುವುದನ್ನ ಇರುವ ಹಾಗೆ ಹೇಳಿದ್ದೇನೆ. ನನ್ನ ಕುಟುಂಬದಲ್ಲಿ ದೈವಗಳಿವೆ ಆದರೆ ನಾನು ಕೂಡಾ ನೂಲು ಹಾಕುವ ವರ್ಗದವ , ಮೂಲ ತುಳುವರಲ್ಲಿ ನಾನೂ ಬರುವುದಿಲ್ಲ ಯಾಕೆಂದರೆ ಮೂಲ ತುಳುವರ ಪಧ್ಧತಿ ಅಳಿಯಕಟ್ಟು ನಾವು ಮಕ್ಕಳಕಟ್ಟು ನಂಬಿಕೆಯವರು.ಬ್ರಾಹ್ಮಣರು , ವಿಶ್ವಕರ್ಮ, ಕೊಂಕಣರು ಇವರೆಲ್ಲಾ ಇದೇ ಆಚರಣೆ ಇಟ್ಟುಕೊಂಡವರು ಹಾಗಾಗಿ ಸ್ವಲ್ಪ ಅಧ್ಯಯನ ಮಾಡಿ ಮುಂದಿನ ಡಿಜಿಟಲ್ ಪ್ಲಾಟ್ ಫಾರಂ ನಂಬಿರುವ ತುಳುವ ತಲೆಮಾರಿಗೆ ಸರಿಯಾದ ಮಾಹಿತಿ  ಒದಗಿಸುವ ಪ್ರಯತ್ನ ಮಾಡಿದ್ದೇನೆ. ಆ ಮೂಲ ಆಚರಣೆಗಳನ್ನು ತಮ್ಮ ಕುಟುಂಬ ಸ್ಥಾನದಲ್ಲಿ ಮಾಡಲು ಬಯಸುವಿರಾದರೆ ನಿಮಗೆ ಸೂಕ್ತ ಮಾರ್ಗದರ್ಶಕರ ಮಾಹಿತಿಯನ್ನು ಇನ್ಬಾಕ್ಸ್ ಮೂಲಕ ನೀಡಬಲ್ಲೆ. ನಾನು ಬರೆದದ್ದುರಲ್ಲಿ ತಪ್ಪಿದೆ ಅಂತಾ ಅನಿಸಿದರೆ ಹಿರಿಯರು ತಿದ್ದಬಹುದು. 

ಬರಹ : *ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ*
Read Post | comments

ಆಟಿ ಪೆಲಕಾಯಿ ನಂಜಿ ಜೋರುಗೆ ಗಾಳಿ ಬರ್ಸಗ್ ಇಲ್ ತೋರುಗೆ...ಆಟಿ ಪಂಡ ದಾದೆ ಒಂಜಾ ತ್ತ್ ವಿಷಯನ್ ತೆರಿಯೋನಗ

                                                                                                                                                      ಪವಿತ್ರ 

                                                                                                                                                  ಕಲ್ಲಬೆಟ್ಟು



ಆಟಿ ಪೆಲಕಾಯಿ ನಂಜಿ ಜೋರುಗೆ ಗಾಳಿ ಬರ್ಸಗ್ ಇಲ್ ತೋರುಗೆ ನಮ್ಮ್ ಹಿರಿಯಕುಲು ಪಂತಿನ ಗಾದೆದ ಪ್ರಕಾರ ತುಳುವೆರೆಗ್ ಬಡವುದ ತಿಂಗೋಲೆ ಈ ಆಟಿ. ಆಟಿ ತಿಂಗೊಲ್ಡ್ ತುಳುವೆರೆಗ್ ಬಾರಿ ಬಂಗದ ದಿನ ಗಾಳಿ ಬರ್ಸ ಗ್ ತರೆ ಪಿದಾಯಿ ಪಡೆರೆ ಆವಂದಿನ ಪೊರ್ತುಡು ಇಲ್ಲಡ್ ಕುಲ್ಲುದು ಕಿರೆಂಗ್, ಸಾಂತಾನಿ, ತಪ್ಪು ತಾಜಾಕ್ಲೆನ್ ತಿಂದ್ ಬದುಕೊಂದುದಿತ್ತೆರ್. ಆಯಿಟ್ಲಾ ಆಟಿ ಅಮಾಸೆದ ದಿನ ಕಷಾಯ ಪರ್ಪಿನ ಗತ್ತೆ ಬೇತೆ.... ಈ ಆಟಿ ಪಂಡ ದಾದೆ ಒಂಜಾ ತ್ತ್ ವಿಷಯನ್ ತೆರಿಯೋನಗ ಬಲೇ

ಆಟಿ ಅಮಾಸೆ ಸೋಣ ಬರ್ಪಿ ಸಂಕ್ರಾಂತಿ ಬೊಂತೆಲ್ ಡು ಮೂಜಿದ ಬಲಿ ದೇತೊಂದು ಪೊಲ ಓ ಬಲಿಯೇಂದ್ರ ಕೂ..... ತುಳುನಾಡ ಬಲಿಯೇಂದ್ರನು ಲೆತ್ಡ್ ಭೂಮಿದ ಒಡೆಯ ಆಯಿನ ಬಲಿಯೇಂದ್ರ ಗ್ ವರ್ಷಡ್ ಮೂಜಿ ಸರ್ತಿ ಋಣ ಸಂದಾಯ ಮಲ್ಪಿನ ತುಳುನಾಡ್ ದ ಮಲ್ಲ ಕಟ್ಟ್  ಪುರಾತನ ಕಾಲಡ್ ನಮ್ಮ್ ಹಿರಿಯೆರ್ ಮಲ್ತ್oದು ಬೈದಿನ ಪದ್ಧತಿನ್ ಇತ್ತೆಲಾ ಪಾಲಿಸಾವೊಂದುಲ್ಲಾ ಪೀರಾಕ್ಡ್

ಬಲಿಯೇಂದ್ರನ ಅಪ್ಪೆ ದಿತಿ ದೇವಿ ಭೂಮಿಗ್ ಬತ್ತ್ ದು ಈ ಆಟಿ ಅಮಾಸೆ ನಮಕ್ ತೆರಿಪಾಯೆರ್ ಪನ್ಪಿ ವಾಡಿಕೆ.



ಈ ಆಟಿ ಅಮಾಸೆದ ದುಂಬುನಾನಿ ಕಾಡ್ಗ್ ಪೂದು ಪಾಲೆದ ಮರನ್ ನಾಡುದು ಅವೆಕ್ ಬರೆದ ಬಳ್ಳಿನ್ ಕಟ್ಟಡ್ ಬರೊಡು ಮೋನದಾನಿ ಪುಲ್ಯಕಾಂಡೆ ಸೂರ್ಯ ತೋಜೋಡು ದುಂಬು ದಿವ್ಯ ಔಷದಿ ದಿಂಜಿನ ಪಾಲೆದ ಮರ ತ್ತ ಕೆತ್ತೆನ್ ಕಲ್ಲ್ಡೇ ಗುದ್ದುದು ಆ ಕೆತ್ತೆನ್ ಇಲ್ಲಗ್ ಕನವೊಡು ತುಳಸಿ ಕಟ್ಟೆ ಅತ್ತ್oಡಾ ದೇವರ್ ನ ಎದುರು ದೀದು ಮೀದ್ ಶುದ್ಧ ಆದ್ ದೇವೆರೆಗ್ ಅಡ್ಡ ಬುರುದು ಅಂಗಾಯಿದಾತ್ತ್ ಮಲ್ಲ 2 ಪಾಲೆದ ಕೆತ್ತೆನ್ ಪಾಡುದ್ ಒಂತೆ ಎಡ್ಡೆಮುಂಚಿ, ಓಮನ್ ಆಯಿತಾ ಒಟ್ಟಿಗೆ ಪಾಡುದ್ ಅರೆಪೋಡ್ ಬೊಕ್ಕ ಎಡ್ಡೆ ಕುಂಟುಡು ಪಂಟುದು ಕೆಂಪು ಬೊಲ್ಕಲ್ಲ್ನ್ ಕೆಂಪು ಕೆಂಡ ಆಪಿಲೆಕ ದಿಕ್ಕೇಲ್ಡ್ ಬೆಚ್ಚ ಮಲ್ತ್ ದು ಆ ಕಷಾಯಗ್ ಪಾಡೋಡು 

ಈ ಪಲೆದ ಮರಟ್ಟು ಔಷದಿ ಗುಣ ಉಂಡು  ಈ ಮರತ್ತ ಕೆಲುವು ಭಾಗಲೆನ್ ಆಯುರ್ವೇದಡ್ ಉಪಯೋಗಿಸವೆರ್.  ಈ ಕಷಾಯ ಪರ್ನೈದಾತ್ರ ದೇಹಡು ಉಷ್ಟ ಜಾಸ್ತಿ ಆಪುಂಡು ಆಯ್ಕೆ ಅವೆನ್ ತಂಪು ಮಲ್ಪರೆ ಮೆತ್ತೆದ ಗಂಜಿನ್ ಉನುಪೆರ್. ಈ ಕಷಾಯನ್ ಪರ್ನೈದಾತ್ರ ಮಲೇರಿಯಾ, ಅತಿಸಾರ ಚರ್ಮದ ಸಮಸ್ಯೆಲು ಕಮ್ಮಿ ಆಪುಂಡು ಅಂಚನೆ ಆಸ್ತಾಮ ಸಿಕ್ ನ್ ಗುಣ ಮಲ್ಪುನಂಚಿನ ಶಕ್ತಿ ಈ ಕಷಾಯಡ್ ಉಂಡು.

ಇಂಚನೇ ನಮ್ಮ ತುಳುನಾಡ್ದ ಸಂಸ್ಕೃತಿ  ದುಂಬುದ ಪೀಳಿಗೆಗ್ಲಾ ತೆರಿಪಾವುನ ನಮ್ಮ ಕರ್ತವ್ಯ

ನಮ್ಮ ತುಳುನಾಡ್ ನಮ್ಮ ಪೆರ್ಮೆ.

Read Post | comments

"ಅಸ್ತಂಗತರಾದ ಸುಪ್ರಸಿದ್ಧ ಎದುರು ವೇಷಧಾರಿ ಸಂಪಾಜೆ ಶೀನಪ್ಪ ರೈ"


ಬರಹ - ಎಂ.ಶಾಂತರಾಮ ಕುಡ್ವ

ಸಂಚಾಲಕರು , ಯಕ್ಷಸಂಗಮ
ಮೂಡುಬಿದಿರೆ
ಯಕ್ಷಗಾನದ "ಎದುರು ವೇಷಧಾರಿ"ಯಾಗಿ ಸುಪ್ರಸಿದ್ಧರಾದ ಸಂಪಾಜೆ ಶೀನಪ್ಪ ರೈಯವರು ಅಪ್ರತಿಮ ಕಲಾವಿದರು ಹಾಗೂ ಸಾಧಕರು . ಸರಳ , ಸಜ್ಜನಿಕೆಯನ್ನೇ ಮೈಗೂಡಿಸಿಕೊಂಡು, ಎಲ್ಲರೊಂದಿಗೂ ಆತ್ಮೀಯತೆಯನ್ನೇ ಬೆಳೆಸಿಕೊಂಡು "ಅಜಾತಶತ್ರು" ಎನಿಸಿಕೊಂಡವರು. ತಮ್ಮ ಆರು ದಶಕಗಳಿಗೂ ಮೀರಿದ ತಿರುಗಾಟದಲ್ಲಿ ರಂಗಸ್ಥಳದಲ್ಲೂ , ಚೌಕಿಯಲ್ಲೂ ಚೌಕಟ್ಟನ್ನು ಮೀರದ ಕಲಾವಿದರು .ಅವರ ಸಹ ಕಲಾವಿದರೇ ನೆನಪಿಸುವಂತೆ ರೈಗಳು ಯಾರೊಂದಿಗೂ ನಿಷ್ಟುರ ಕಟ್ಟಿಕೊಂಡವರಲ್ಲ , ತಾಳ್ಮೆಯ ಸಾಕಾರಮೂರ್ತಿಗಳೇ ಆಗಿದ್ದು , ಸಹ ಕಲಾವಿದರನ್ನು ಹಿರಿಯ ಕಿರಿಯ ಎಂಬ ಭೇದವಿಲ್ಲದೇ ಸಮಾನವಾಗಿ ಗೌರವಿಸುತ್ತಿದ್ದರು ಎಂಬುದು ಅವರ ವ್ಯಕ್ತಿತ್ವದ ಔನ್ನತ್ಯಕ್ಕೊಂದು ಸ್ಪಷ್ಟ ಉದಾಹರಣೆ.


ಸಂಪಾಜೆ ಸಮೀಪದ ಮದೇಪಾಲು ಎಂಬಲ್ಲಿ ರಾಮಣ್ಣ ರೈ - ಕಾವೇರಿ ರೈ ದಂಪತಿಯ ಮೊದಲ ಪುತ್ರರಾಗಿ 07.06.1943 ರಲ್ಲಿ ಜನಿಸಿದ ಶೀನಪ್ಪ ರೈಯವರು ಬಡತನದಲ್ಲೇ ಬಾಲ್ಯವನ್ನು ಕಳೆದವರು . ತಮ್ಮ 4 ನೇ ತರಗತಿಯ ವಿದ್ಯಾಭ್ಯಾಸ ಪೂರೈಸಿದ ನಂತರ , ತಮ್ಮ ತಂದೆಯವರೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು . ತಂದೆ ರಾಮಣ್ಣ ರೈಗಳು ಕಲ್ಲುಗುಂಡಿಯ ಯಕ್ಷಗಾನ ಪೋಷಕರಾದ ಕೀಲಾರು ಗೋಪಾಲಕೃಷ್ಣರ ಒಕ್ಕಲಾಗಿದ್ದು , ಅವರ ಜಮೀನನ್ನು ಗೇಣಿಗೆ ಪಡೆದು ಕೃಷಿಕರಾಗಿದ್ದು , ಅಂದಿನ ಕಾಲದ ತಾಳಮದ್ದಳೆ ಅರ್ಥಧಾರಿಗಳೂ , ಕಲಾವಿದರೂ ಆಗಿದ್ದ ಕಾರಣ , ಶೀನಪ್ಪ ರೈಯವರಿಗೂ ಯಕ್ಷಗಾನದ ನಂಟು ಅಂಟಿತು . ತಮ್ಮ ತಂದೆಯವರಲ್ಲೇ ಅರ್ಥಗಾರಿಕೆಯನ್ನೂ , ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನೂ ಕಲಿತರು .ಪುಟ್ಟ ಬಾಲಕ ಶೀನಪ್ಪ ರೈಯವರ ಯಕ್ಷಗಾನದ ಆಸಕ್ತಿ ಗಮನಿಸಿದ , ಅಂದಿನ ಕಾಲದ ಯಕ್ಷಗಾನದ ಪೋಷಕರಾದ ಶಾಂತರಾಮ ಶೆಟ್ಟಿ ಎಂಬವರು , ರಾಮಣ್ಣ ರೈಯರನ್ನು ಒಪ್ಪಿಸಿ ಶೀನಪ್ಪ ರೈಗಳನ್ನು ಕುಂಡಾವು ಮೇಳದ ಯಜಮಾನರಾದ ಕಲ್ಲಾಡಿ ಕೊರಗ ಶೆಟ್ಟರಲ್ಲಿ ಮಾತಾಡಿ , ಕಲ್ಲಾಡಿಯವರೇ ನಡೆಸುತ್ತಿದ್ದ ಯಕ್ಷಗಾನ ನಾಟ್ಯ ತರಗತಿಗೆ ಸೇರಿಸಿದರು .ಅಲ್ಲಿ ಅಂದಿನ ಸುಪ್ರಸಿದ್ಧ ಗುರುಗಳಾದ ಕಾವು ಕಣ್ಣರಲ್ಲಿ ಯಕ್ಷಗಾನದ ಸಂಪೂರ್ಣ ಹೆಜ್ಜೆಗಾರಿಕೆಯನ್ನೂ , ಮಾಸ್ತರ್ ಕೇಶವರಲ್ಲಿ ಭರತನಾಟ್ಯವನ್ನೂ ಅಭ್ಯಸಿಸಿದರು . ಬಣ್ಣಗಾರಿಕೆಯನ್ನು ಅಂದಿನ ಸುಪ್ರಸಿದ್ಧ ಬಣ್ಣದ ವೇಷಧಾರಿ ಕುಂಬಳೆ ಕುಟ್ಯಪ್ಪುರಿಂದ ಕರಗತ ಮಾಡಿಕೊಂಡರು . ಅದೇ ವರ್ಷ ಕಲ್ಲಾಡಿಯವರ ಯಾಜಮಾನ್ಯದ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿಗೆ ಸೇರಿ ತಿರುಗಾಟ ಮಾಡಿದರು .



ಇರಾದಲ್ಲಿ 3 ವರ್ಷಗಳ ತಿರುಗಾಟ ಪೂರೈಸಿದ ಹಂತದಲ್ಲಿ ತಂದೆಯವರು ಅಸೌಖ್ಯರಾದಾಗ , ಯಕ್ಷಗಾನ ಬಿಟ್ಟು 5 ವರ್ಷಗಳ ಕಾಲ ಕೃಷಿ ಕಾರ್ಯವನ್ನು ಕೈಗೊಂಡರು . ಒಮ್ಮೆ ಕಲ್ಲುಗುಂಡಿಯಲ್ಲಿ ಪುತ್ತೂರು ಶೀನಪ್ಪ ಭಂಡಾರಿಯವರ ಸುಬ್ರಹ್ಮಣ್ಯ ಮೇಳ ಬಂದಾಗ , ಅಂದು ಮೇಳದಲ್ಲಿ ಮೇನಕೆ ಪಾತ್ರ ಮಾಡಬೇಕಾದ ಕಲಾವಿದರು ಗೈರು ಹಾಜರಾಗಿದ್ದರು . ಶೀನಪ್ಪ ಭಂಡಾರಿಯವರ ಒತ್ತಾಯಕ್ಕೆ ರೈಗಳು ಮೇನಕೆ ಪಾತ್ರ ನಿರ್ವಹಿಸಿದರು . ಈ ಘಟನೆ ಶೀನಪ್ಪ ರೈಯವರ ಬದುಕಿಗೆ ತಿರುವು ತಂದು ಕೊಟ್ಟಿತು . ನಂತರ ಆ ವರ್ಷ ಇಡೀ ಸುಬ್ರಹ್ಮಣ್ಯ ಮೇಳದಲ್ಲೇ ತಿರುಗಾಟ ಮಾಡಿ ಪುನಃ ಯಕ್ಷಗಾನದತ್ತ ಹೊರಳಿದರು . ನಂತರದಲ್ಲಿ ವೇಣೂರು ಮೇಳದಲ್ಲಿ 3 ವರ್ಷ , ಕಾವೂರು ಕೇಶವ ಶೆಟ್ಟಿಗಾರರ ನೇತೃತ್ವದ ಇರುವೈಲು ಮೇಳದಲ್ಲಿ 3 ವರ್ಷ , ಮಡಿಕೇರಿಯ ಚೌಡೇಶ್ವರಿ ಮೇಳದಲ್ಲಿ 3 ವರ್ಷ ತಿರುಗಾಟ ನಡೆಸಿದರು ‌.1974 ರ ಮಳೆಗಾಲದಲ್ಲಿ ಸುಪ್ರಸಿದ್ಧ ಬಣ್ಣದ ವೇಷಧಾರಿ ಗಾಂಧಿ ಮಾಲಿಂಗರ ಒತ್ತಾಯದಿಂದಾಗಿ ಭೀಮ ಭಟ್ಟರ ಯಕ್ಷಗಾನ ತಂಡಕ್ಕೆ ಸೇರಿ ಊರೂರು ಪ್ರದರ್ಶನ ನೀಡಿದರು . ಈ ಸಂದರ್ಭದಲ್ಲಿ ಕಟೀಲು ಮೇಳದ ಸುಪ್ರಸಿದ್ಧ ವೇಷಧಾರಿಗಳಾದ ಕೇದಗಡಿ ಗುಡ್ಡಪ್ಪ ಗೌಡರೂ ಭೀಮ ಭಟ್ಟರ ತಂಡದಲ್ಲಿದ್ದವರು , ರೈಗಳ ರಂಗದ ನಡೆ , ನಾಟ್ಯ ವಿಧಾನ ಎಲ್ಲಾ ಮೆಚ್ಚಿ "ಮುಂದಿನ ತಿರುಗಾಟದಲ್ಲಿ ಕಟೀಲು ಕ್ಷೇತ್ರದಿಂದ ಎರಡನೇ ಮೇಳ ಹೊರಡಲಿದೆ . ನೀನೂ ಸೇರು " ಎಂದು ಹೇಳಿ ರೈಗಳನ್ನು ಕಲ್ಲಾಡಿ ವಿಠಲ ಶೆಟ್ಟರ ಬಳಿ ಕರೆದೊಯ್ದರು .


ಶೀನಪ್ಪ ರೈಗಳು 1974 ರಲ್ಲಿ ಆ ವರ್ಷದ ತಿರುಗಾಟದಲ್ಲಿ ಕಟೀಲು ಒಂದನೇ ಮೇಳ ಸೇರಿದರು . ಆ ಕಾಲದಲ್ಲಿ ಕಟೀಲು ಒಂದನೇ ಮೇಳವು " ಇರಾ ಭಾಗವತರ ಮೇಳ " , ಎರಡನೇ ಮೇಳವು " ಬಲಿಪ ಭಾಗವತರ ಮೇಳ " ಎಂದೇ ಪ್ರಸಿದ್ಧಿಯಾಗಿತ್ತು . ಒಂದನೇ ಮೇಳದಲ್ಲಿ ಇರುವಾಗ ಕೇದಿಗಡಿ ಗುಡ್ಡಪ್ಪ ಗೌಡರು ಎದುರು ವೇಷಧಾರಿ ( ರಕ್ತಬೀಜನ ಪಾತ್ರ ) , ರೈಗಳು ಪೀಠಿಕೆ ವೇಷಧಾರಿ ( ದೇವೇಂದ್ರನ ಪಾತ್ರ ) ಆಗಿದ್ದರು . ಆದರೆ , ಎರಡು ತಿಂಗಳಲ್ಲೇ ಬಲಿಪರ ಮೇಳಕ್ಕೆ ಎದುರು ವೇಷಧಾರಿಯ ಅವಶ್ಯಕತೆ ಬಂದಾಗ ,ವಿಠಲ ಶೆಟ್ಟರು ರೈಯವರನ್ನು ಎರಡನೇ ಮೇಳಕ್ಕೆ ( ಬಲಿಪರ ) ವರ್ಗಾಯಿಸಿದರು . ಬಲಿಪರ ಮಾರ್ಗದರ್ಶನ , ರಂಗದ ನಡೆಯ ಮಾಹಿತಿ , ಸಲಹೆಯೊಂದಿಗೆ ಶೀನಪ್ಪ ರೈಗಳು ಕಟೀಲು ಎರಡನೇ ಮೇಳದಲ್ಲಿ ಮಿಂಚಿದರು . ವಿಠಲ ಶೆಟ್ಟರ ಹಾಗೂ ಬಲಿಪರ ದೂರ ದೃಷ್ಠಿಯಿಂದಾಗಿ ರೈಗಳಿಗೆ ಪ್ರಾಮುಖ್ಯ ಪಾತ್ರಗಳು ದೊರಕಿತು . ರೈಯವರ ರಕ್ತಬೀಜ‌ , ಹಿರಣ್ಯಾಕ್ಷ , ಇಂದ್ರಜಿತು , ಅರುಣಾಸುರ , ಕಾರ್ತವೀರ್ಯ , ಕೌಶಿಕ , ಅರ್ಜುನ , ಕರ್ಣ , ಭಾನುಕೋಪ , ಶಿಶುಪಾಲ , ಕೌರವ , ಬಲರಾಮ , ವಾಲಿ , ತಾಮ್ರಧ್ವಜ , ಭೀಮ , ವೀರಮಣಿ , ಕೌಂಡ್ಲೀಕ ಮುಂತಾದ ಪಾತ್ರಗಳು ವಿಜೃಂಭಿಸಲಾರಂಭಿಸಿತು . ಈ ಅವಧಿಯಲ್ಲಿ ಒಂದು ದಾಖಲಾರ್ಹ ಘಟನೆ ನಡೆಯಿತು . ಕಟೀಲು ಎರಡನೇ ಮೇಳದಲ್ಲಿ ಮಹಿಷಾಸುರನಾಗಿ ವಿಜೃಂಭಿಸಿದ ಬಣ್ಣದ ಕುಟ್ಯಪ್ಪುರವರು ನಿವೃತ್ತರಾದ ನಂತರ ಕುಂಞಣ್ಣ ಶೆಟ್ಟರು ಮಹಿಷಾಸುರ ಪಾತ್ರ ನಿರ್ವಹಿಸುತ್ತಿದ್ದರು . ಒಮ್ಮೆ ಕುಂಞಣ್ಣ ಶೆಟ್ಟರು ಅಸೌಖ್ಯರಾದರು . ಆ ಸಂದರ್ಭದಲ್ಲಿ ವಿಠಲ ಶೆಟ್ಟರ ಸೂಚನೆಯಂತೆ ಶೀನಪ್ಪ ರೈಯವರು ಮಹಿಷಾಸುರ ಪಾತ್ರ ಮಾಡಿ ನಂತರ ರಕ್ತಬೀಜನ ಪಾತ್ರವನ್ನೂ ಚೆನ್ನಾಗಿ ನಿರ್ವಹಿಸಿ ಯಕ್ಷಗಾನ ರಸಿಕರು ಹುಬ್ಬೇರಿಸುವಂತೆ ಮಾಡಿದ್ದರು . ಹೀಗೆ ಕಟೀಲು ಮೇಳದಲ್ಲಿ ನಿರಂತರ 33 ವರ್ಷಗಳ ತಿರುಗಾಟ ಮಾಡಿ ನಂತರ ಟಿ.ಶಾಮಭಟ್ಟರ ಪೋಷಕತ್ವದ ಎಡನೀರು ,ಹೊಸನಗರ , ಹನುಮಗಿರಿ ಮೇಳಗಳಲ್ಲಿ 12 ವರ್ಷ ತಿರುಗಾಟ ನಡೆಸಿದ್ದರು . ಶಾಮ ಭಟ್ಟರು ಸಂಪಾಜೆಯವರಿಗೆ ಅಪಾರವಾದ ಪ್ರೀತಿ , ಗೌರವ , ಪ್ರೋತ್ಸಾಹ ನೀಡುತ್ತಿರುವುದಾಗಿ ರೈಗಳು ಒಂದು ವರ್ಷದ ಹಿಂದೆ ನನ್ನಲ್ಲಿ ತಿಳಿಸಿದ್ದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ . ಕಳೆದ ವರ್ಷ ರೈಗಳು ಯಕ್ಷರಂಗದಿಂದ ನಿವೃತ್ತರಾಗಿದ್ದರು .
ಸಂಪಾಜೆ ಶೀನಪ್ಪ ರೈಯವರಿಗೆ ಅಂದಿನ ಕಾಲದಲ್ಲಿ , ಅಂದರೆ 1975 - 1980 ರಲ್ಲಿ ಅತ್ಯಂತ ಹೆಸರು ತಂದ ಪಾತ್ರ ಅಂದರೆ " ಹಿರಣ್ಯಾಕ್ಷ " . ಅಂದಿನ ಕಾಲದಲ್ಲಿ ಶ್ರೀ ದೇವಿಮಹಾತ್ಮೆ ಪ್ರಸಂಗವು ಈಗಿನಷ್ಟು ಪ್ರಮಾಣದಲ್ಲಿ ಜರುಗುತ್ತಿರಲಿಲ್ಲ . " ಅತಿಕಾಯ -ಇಂದ್ರಜಿತು - ಮೈರಾವಣ " , ತ್ರಿಜನ್ಮ ಮೋಕ್ಷ , ಶ್ರೀಕೃಷ್ಣ ಲೀಲೆ , ಚತುರ್ಜನ್ಮ ಮೋಕ್ಷ , ಸಮಗ್ರ ವಾಲಿ , ಸಮಗ್ರ ರಾವಣ ಇಂತಹ ಪ್ರಸಂಗಗಳೇ ಚಾಲ್ತಿಯಲ್ಲಿತ್ತು . ತ್ರಿಜನ್ಮ ಮೋಕ್ಷ ಪ್ರಸಂಗ ಬಂದಾಗ ಸಂಪಾಜೆಯವರಿಗೇ ಹಿರಣ್ಯಾಕ್ಷ . ಇದು ಎರಡನೇ ಮೇಳದಲ್ಲಿ ಮಾತ್ರವಲ್ಲ ,ಒಂದನೇ ಮೇಳದವರದ್ದು ತ್ರಿಜನ್ಮ ಮೋಕ್ಷ ಪ್ರಸಂಗವಾದರೆ , ರೈಗಳು ಒಂದನೇ ಮೇಳಕ್ಕೆ ಹಿರಣ್ಯಾಕ್ಷ ಪಾತ್ರ ನಿರ್ವಹಿಸಲು ಹೋಗಬೇಕಾಗಿತ್ತು . ಹಿರಣ್ಯಾಕ್ಷ ಪಾತ್ರ ರೈಗಳನ್ನು ಅಷ್ಟು ಪ್ರಸಿದ್ಧಿಯನ್ನಾಗಿ ಮಾಡಿತ್ತು . ಶೀನಪ್ಪ ರೈಗಳನ್ನು ನನ್ನ ಮಿತ್ರರಾದ ಗಿರಿಧರ್ ನಾಯಕರು 2015 ರಲ್ಲಿ ಮೂಡುಬಿದಿರೆ ಸಮೀಪದ ಮಿತ್ತಬೈಲಿನಲ್ಲಿ ಹೊಸನಗರ ಮೇಳದ ವೇದಿಕೆಯಲ್ಲಿ ಸಂಮಾನ ಮಾಡಿದಾಗ , ಅವರ ಅಭಿನಂದನಾ ಭಾಷಣದಲ್ಲಿ ನಾನು ಈ ಅಂಶವನ್ನು ಉಲ್ಲೇಖಿಸಿದಾಗ , ಸಂಪಾಜೆಯವರು ,
" ಅಣ್ಣೆರೇ , ಉಂದು ಮಾತಾ ಈರೆಗ್ ನನಲಾ ನೆಂಪು ಉಂಡತ್ತೇ ? ಇತ್ತೆದಕ್ಲೇಗ್ ಏರೆಗ್ಲಾ ಈ ವಿಷೊಯೊನೇ ಗೊತ್ತುಜ್ಜಿ . ಉಂದೇನ್ ಯಾನ್ಲಾ ಮದೆತಿತ್ತೆ . ಇನಿ ನೆಂಪು ಮಲ್ತರ್ " ಎಂದು ನನ್ನಲ್ಲಿ ಮುಗ್ದತೆಯಿಂದಲೇ ಹೇಳಿದ್ದರು . ನನ್ನೊಂದಿಗೆ ಆತ್ಮೀಯರಾಗಿದ್ದ ರೈಗಳು ನಾನು ಹನುಮಗಿರಿ ಮೇಳದ ಚೌಕಿಗೆ ಹೋದಾಗ ಅತ್ಯಂತ ವಿನೀತರಾಗಿ ಮಾತಾಡಿಸುತ್ತಿದ್ದರು . ಒಮ್ಮೆ ಮಳೆಗಾಲದ ಪ್ರದರ್ಶನಕ್ಕೆ ಮೂಡಬಿದಿರೆಗೆ ಬಂದಾಗ ,
" ಅಣ್ಣೆರೇ , ಎಂಕ್ ಈರ್ನ ಇಲ್ಲಾಗ್ ಬರೋಡು " ಎಂದಾಗ ಅವರನ್ನು ನನ್ನ ಮನೆಗೆ ಕರೆದು ಸತ್ಕರಿಸಿದಾಗ ನನ್ನ ಪತ್ನಿಯಲ್ಲಿ ,
" ಅಮ್ಮ , ಮೇರ್ ಯಕ್ಷೊಗಾನೊಗು ಬೋಡಾದ್ ಮಸ್ತ್ ಬೆನ್ತಿನಾರ್ . ನಿಕ್ಲೆಗ್ ದೇವೆರ್ ಎಡ್ಡೆನೇ ಮಲ್ಪುವೆರ್ ಆವೇ " ಎಂದು ಹರಸಿದ್ದರು .
ರೈಗಳು ಪರಂಪರೆಯ ನಾಟ್ಯವಿಧಾನ ಅರಿತವರು . ಪ್ರತೀ ಪಾತ್ರದ ಪ್ರವೇಶ , ರಂಗ ವಿಧಾನ ಇವೆಲ್ಲವನ್ನೂ ಸೂಕ್ಷ್ಮವಾಗಿ ಅರಿತಿದ್ದರು . ಹಿತ ಮಿತವಾದ ಮಾತುಗಾರಿಕೆಯಾದರೂ , ಅದರಲ್ಲಿ ಭಾಷಾ ಶುದ್ಧಿಯಿತ್ತು .
ಅರ್ಥಗಾರಿಕೆಯಲ್ಲಿ‌ ಆಯಾಯ ಪದ್ಯದ ರಸಭಾವವನ್ನು ಅರಿತು ಶ್ರುತಿಬದ್ಧವಾಗಿಯೇ ಸಂಭಾಷಣೆ ನಡೆಸುವ ಕೌಶಲ್ಯವಿತ್ತು . ದೀರ್ಘ ಮಾತುಗಾರಿಕೆ ಅಲ್ಲದಿದ್ದರೂ , ಪಾತ್ರಗಳು ಹೇಳಬೇಕಾದ ಯಾವುದೇ ಅಂಶಗಳನ್ನೂ , ಪದ್ಯದ ಪರಿಧಿಯಲ್ಲೇ ಒಂದಿನಿತೂ ಬಿಡದೇ ಪ್ರೇಕ್ಷಕರಿಗೆ ತಲುಪಿಸುವ ಚಾಕಚಕ್ಯತೆಯಿತ್ತು . ವಾದಕ್ಕೆ ನಿಂತರಂತೂ ಅಂದಿನ ಯಕ್ಷಗಾನ ಪ್ರದರ್ಶನದ ವೈಖರಿಯೇ ಬದಲಾಗುತ್ತಿತ್ತು . ಪುರಾಣಲೋಕವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಸಾಹಿತ್ಯ ಜ್ಞಾನವಿತ್ತು . ಸಂಪಾಜೆಯವರ ಕಲಾ ಪ್ರತಿಭೆಯನ್ನು ಲಕ್ಷಿಸಿ ಹಲವಾರು , ಪ್ರಶಸ್ತಿ , ಪುರಸ್ಕಾರ. ಸಂಮಾನಗಳು ಲಭಿಸಿವೆ . " ಕರ್ನಾಟಕ ರಾಜ್ಯ ಪ್ರಶಸ್ತಿ " , ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಳ ಪ್ರಶಸ್ತಿ ಸಹಿತ ನೂರಾರು ಸಂಮಾನಗಳನ್ನು ಅರ್ಹವಾಗಿ ಪಡಿದಿದ್ದಾರೆ .
ಸಂಪಾಜೆಯವರಿಗೆ ಎಂಟು ವರ್ಷಗಳ ಹಿಂದೆಯೇ ಆರೋಗ್ಯದ ಸಮಸ್ಯೆ ಇದ್ದು , ಆಗ ಡಾ.ಪದ್ಮನಾಭ ಕಾಮತರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಾಗ , ಡಾ . ಕಾಮತರು ಅದಕ್ಕೆ ಸಂಬಂಧಪಟ್ಟ ವೈದ್ಯರನ್ನು ಸೂಚಿಸಿದ್ದರು .ಆಗ ನಿವೃತ್ತಿಯ ಯೋಚನೆಯನ್ನೂ ಮಾಡಿದ್ದರು . ಆದರೂ , ತಮ್ಮ ಮನೋಧೈರ್ಯದಿಂದಾಗಿ ಸುಧಾರಿಸಿಕೊಂಡು ಮುಂದೆಯೂ ಏಳೆಂಟು ವರ್ಷಗಳ ತಿರುಗಾಟಗಳನ್ನು ಮಾಡಿ , ತಮ್ಮ ಕ್ಷಮತೆ ತೋರಿದ್ದರು . ಇತ್ತೀಚೆಗೆ ಕಾಲಿನ ನರಗಳಿಗೆ ರಕ್ತ ಸಂಚಾರದ ವ್ಯತ್ಯಯ ಉಂಟಾಗಿತ್ತು . ನಿನ್ನೆ ತಮ್ಮ ಮಗನಾದ ಜಯರಾಮ ರೈಯವರಲ್ಲಿ ತಮಗೆ ಡಾ.ಪದ್ಮನಾಭ ಕಾಮತರಲ್ಲಿ ಕರೆದೊಯ್ಯಲು ತಿಳಿಸಿದ್ದರಂತೆ . ಡಾ.ಕಾಮತರು ಹೃದ್ರೋಗ ತಜ್ಞರಾಗಿದ್ದು , ರೈಯವರಿಗೆ ಹೃದಯದ ಸಮಸ್ಯೆ ಇರಲಿಲ್ಲ . ಆದರೂ , ರೈಯವರ ಅಪೇಕ್ಷೆಯಂತೆ ಅವರನ್ನು ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯ್ದಿದ್ದರು . ಡಾ.ಕಾಮತರನ್ನು ಕಂಡು ಮುಗುಳ್ನಕ್ಕು ವಂದಿಸಿದ್ದರು . ಡಾ.ಕಾಮತರೂ ಅವರಿಗೆ ವಂದಿಸಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸಂಬಂಧಪಟ್ಟ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು . ಆದರೂ , ಇಂದು ಮುಂಜಾನೆ ರೈಯವರು ಇಹಲೋಕ ತ್ಯಜಿಸಿದ್ದುದು ಯಕ್ಷರಂಗದ ದುರಂತಗಳಲ್ಲೊಂದು .
ಸಂಪಾಜೆಯವರು ಇತ್ತೀಚೆಗೆ ಸಂಪಾಜೆಯಿಂದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ತಮ್ಮ ಮಗ ಜಯರಾಮ ರೈಯವರ ಮನೆಯಲ್ಲಿ ವಾಸಿಸುತ್ತಿದ್ದರು . ಧರ್ಮಪತ್ನಿ ಶ್ರೀಮತಿ ಗಿರಿಜಾವತಿ , ಸುಪುತ್ರ ಜಯರಾಮ ರೈ , ಪುತ್ರಿಯರಾದ ರೇವತಿ ಶೆಟ್ಟಿ , ರಜನಿ ರೈಯವರನ್ನೂ , ಅಪಾರ ಬಂಧುಬಳಗ ಸಹಿತ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ . ರೈಯವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .




19
2 shares
Like
Comment
Share
Read Post | comments

ಕುಟುಂಬದ ಮನೆ

ಬರವು..ಚಂದು

ತುಳುನಾಡಿನಲ್ಲಿ ಕುಟುಂಬದ ಮನೆ ಇಲ್ಲದ ಊರು ಇಲ್ಲ.ಕುಟುಂಬದ ಮನೆ ಇಲ್ಲದ ವ್ಯಕ್ತಿ ಇಲ್ಲ.
ಒಬ್ಬ ಮನುಷ್ಯನ ಹುಟ್ಟು ಮತ್ತು ಸಾವಿನಿಂದ ಹಿಡಿದು ಕೌಟುಂಬಿಕವಾಗಿ ಎಲ್ಲಾ ಕಾರ್ಯಗಳಿಗೆ ಈ "ಕುಟುಂಬದ ಮನೆ" ಎಂಬುವುದು ಅವಶ್ಯಕ ಬೇಕು.ಒಂದೊಮ್ಮೆ ನಿಮ್ಮ ಮನೆಯ ಹೆಣ್ಮಗಳಿಗೆ ಮದುವೆ ವಿಚಾರ ಬಂದಾಗಲೂ ಅವಳು ಯಾವ ಮನೆತನದ ಹೆಣ್ಣು ಎಂದು ಚರ್ಚಿಸುವವರೂ ಇದ್ದಾರೆ.ಕಡುಬಡವನಿಂದ ಹಿಡಿದು ಆಗರ್ಭ ಶ್ರೀಮಂತ ಕೂಡ ವರ್ಷದಲ್ಲಿ ಒಂದು ದಿನ ತನ್ನ ಕುಟುಂಬದ ಮನೆಗೆ ಹೋಗಲು ಹಾತೊರೆಯುತ್ತಾನೆ.ಅಂತಹ ಶಕ್ತಿ ಕುಟುಂಬದ ಮನೆಗೆ ಇದೆ.ಕುಟುಂಬದ ಮನೆಗೆ ಹೋಗುವುದಿಲ್ಲ ಎಂದು ಹಠಮಾಡಿ ಕುಳಿತವರನ್ನು ಕೂಡ ರಾತ್ರೊ ರಾತ್ರಿ ಎಬ್ಬಿಸಿಕೊಂಡು ಕರ್ಕೊಂಡು ಹೋದ ಉದಾಹರಣೆ ಕೂಡ ನಮ್ಮಲ್ಲಿ ಇದೆ.
ಈ ನಾಡಿನಲ್ಲಿ ಎಲ್ಲಾ ಜಾತಿ ಸಮುದಾಯಕ್ಕೂ ಜಾತಿರೀವಾಜಿನಂತೆ ಇಂತಹುದೇ ಆದಂತಹ ಕುಟುಂಬದ ಮನೆಗಳು ಇವೆ.ಉದಾಹರಣೆಗೆ ಬೂಡು,ಜನಾನಂದ ಮನೆ, ತಳಮನೆ,ಕಟ್ಟಮನೆ,ಬಾರೀಕೆಗಳು,ಗುತ್ತುಗಳು,ಗುರಿಕಾರ ಮನೆ,ಗರಡಿ ಮನೆಗಳು,
ಭಂಡಾರ ಮನೆಗಳು, ಬೊಂಟ್ರಮನೆಗಳು,ಲೆಪ್ಪುದ ಮನೆಗಳು,
ಮಡಸಾನದ ಮನೆಗಳು,ಶುದ್ದ ಮೂಡಣಬಾಗಿಲಿನ ಮನೆಗಳು ಇವೆಲ್ಲಾ ತುಳುನಾಡಿನ ಅಂದಿನ ಕಾಲದಲ್ಲಿ ಗತವೈಭವ ಮೆರೆದ ಮನೆಗಳು.
ಅಣ್ಣ ತಮ್ಮಂದಿರ,ಅಕ್ಕ ತಂಗಿಯಂದಿರ,ಗಂಡ ಹೆಂಡತಿಯ ಎಂಥಹ ಗಲಾಟೆ ಅಂತಃ ಕಲಹ ಇದ್ದರೂ ಅಜ್ಜ,ಮಾವಂದಿರು ಕರೆದು ಪಂಚಾಯಿತಿ ಮಾಡಿ ಸರಿ ಮಾಡಿ ಕಳುಹಿಸಿದ ಮನೆ ಅದು.
ಎಷ್ಟೋ ಕುಟುಂಬದ ಮಕ್ಕಳು ಶಾಲೆಗೆ ಅಲ್ಲಿಂದಲೇ ಹೋಗಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಹಕಾರಿಯಾದ ಮನೆ ಅದು.
ಅಗಿನ ಕಾಲದಲ್ಲಿ ಗ್ರಾಮದಲ್ಲಿ ಗುತ್ತು,ಬಾರೀಕೆ,ಬೂಡಿನ ಅಧಿಕಾರ ಹಿಡಿದ ಈ ಮನೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕುಟುಂಬದ ಮನೆಗಳಾಗಿ ಪರಿವರ್ತನೆಗೊಂಡಿದೆ.
ಹಿರಿಯರಿಂದ ಬಳುವಳಿಯಾಗಿ ಬಂದ ಮೂಲವರ್ಗದ ಭೂಮಿ,ಯಾವುದೊ ಮಹತ್ಕಾರ್ಯಕ್ಕೆ ಅರಸರಿಂದ,
ಉಂಬಲಿಯಾಗಿ ಸಿಕ್ಕ ಭೂಮಿ,
ಅಂತಃಕಲಹದಲ್ಲಿ
ಮತ್ತೊಬ್ಬರ ಕೈಯಿಂದ ನಮಗೆ ದಕ್ಕಿದ ಭೂಮಿ,ಹಣ ಕೊಟ್ಟು ಖರೀದಿ ಮಾಡಿದ ಭೂಮಿ,ಒಕ್ಕಲುತನದಲ್ಲಿ ಸಿಕ್ಕಿದ‌ ಭೂಮಿ‌ ಈ ರೀತಿಯಲ್ಲಿ ಹಿಂದೆ ಸಿಕ್ಕಿದ ಭೂಮಿಗಳು ಮತ್ತು ಅದರಲ್ಲಿದ್ದ ಮನೆಗಳು ಈಗ ಕುಟುಂಬದ ಮನೆಗಳಾಗಿವೆ.ಕುಟುಂಬದ ಮನೆಗಳು ಎಲ್ಲಾವೂ ಬರಿಬಾಂದ್ರದ ಕಟ್ಟುಪಾಡಿನಲ್ಲಿ ಇಂತಹದೇ ಬರಿಯ ಕುಟುಂಬದ ಮನೆ ಎಂದು ರೂಪುಗೊಂಡಿದೆ. ಅದನ್ನು ನಾವು ಇಂತಹ ಜಾತಿಯಲ್ಲಿ ಇಂತಹ ಬರಿಯವರ ಕುಟುಂಬದ ಮನೆ ಎಂದು ನಾವು ಸಂಬೋಧಿಸುತ್ತೆವೆ.
ಕುಟುಂಬದ ಮನೆಗಳಿಗೆ ಜಮ್ಮದ ಇಲ್ಲು,ಕುಟುಂಬದ ಇಲ್ಲು,ಮಡತಾನದ ಇಲ್ಲು ಎಂಬುದರ 
ಜೊತೆಗೆ "ತರವಾಡು ಇಲ್ಲು" ಎಂಬ ಹೊಸದಾಗಿ ಕೇರಳ ಶೈಲಿಯ ಹೆಸರುಗಳಿಂದ ಮತ್ತು ಇತರ ನಾನಾ ಹೆಸರುಗಳಿಂದ ಈಗ ಕರೆಯಲಾಗುತ್ತದೆ.
ಹತ್ತು ಜನ ಸೇರಿದ್ರೆ ಕುಟುಂಬದ ಮನೆ ಆಗುವುದಕ್ಕೆ ಸಾಧ್ಯವಿಲ್ಲ,ಒಂದು ಬರಿಯ,ಒಂದು ಗುಂಪಿನ ಐದಾರು ಕವಳು ಸಮೂಹ ಸೇರಿದ್ರೆ,ಒಂದು ಕುಟುಂಬದ ಮನೆ ಅಗುವುದು.ಒಂದು ವೇಳೆ ಹತ್ತಿಪ್ಪತ್ತು ಜನ ಸೇರಿ ಒಂದು ಕುಟುಂಬದ ಮನೆ ಅಗಿದ್ರೆ,ಅವರ ಮೂಲ ಕುಟುಂಬದ ಮನೆಯೆ ಬೇರೆ ಎಲ್ಲಿಯೊ ಇದೆ ಎನ್ನುವ ಅರ್ಥ ಇದೆ.ಹಾಗೆಂದು ಮಾತ್ರಕ್ಕೆ ಇಲ್ಲವೆಂದಲ್ಲ,ಅಳಿಯ ಕಟ್ಟಿನಲ್ಲಿ ಹೆಣ್ಣು ಸಂತಾನ ಮತ್ತು ಮಕ್ಕಳ್ ಕಟ್ಟಿನಲ್ಲಿ ಗಂಡು ಸಂತಾನ ಕಮ್ಮಿಯಾಗುತ್ತಾ ಬಂದ್ರೆ ಕುಟುಂಬ ನಶಿಸಿ ಹೋಗುತ್ತದೆ.ಆಗ ಕುಟುಂಬವು ಸಣ್ಣದಾಗುತ್ತ ಕೊನೆಗೆ ನಶಿಸಿಯೂ ಹೋಗುತ್ತದೆ.ಉಳಿದರೆ ಹತ್ತಿಪ್ಪತ್ತು ಜನರ ಸಣ್ಣ ಕುಟುಂಬವಾಗಿ ಇರುತ್ತದೆ.
 ಇದಕ್ಕೆ ಇನ್ನೂ ಬೇರೆ ಕಾರಣವೂ ಸಿಗುವುದುಂಟು. ಹಿಂದೆ ತುಲುವರಲ್ಲಿ ಒಂದು ಅನಿಷ್ಟ ಪದ್ದತಿ ಇತ್ತು.ಕೂಡು ಕುಟುಂಬದ ಅ ಕಾಲದಲ್ಲಿ ಮನೆಯ ಯಜಮಾನನಲ್ಲಿ ಕುಟುಂಬದ ಇನ್ನೊಂದು ಕವಳಿನ ಅಂದ್ರೆ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಲ್ಲಿ ಏನಾದರೂ ಆಸ್ತಿ ಕಲಹ,ದೈವಗಳ ವಿಚಾರದಲ್ಲಿ,ಇನ್ನಿತರ ಕೆಲಸಗಳ ವಿಚಾರಗಳಲ್ಲಿ ಜಗಳ ಅಗಿ ಮನೆಯ ಯಜಮಾನ ಕೊನೆಗೆ ಬಿಡುವ ಅಸ್ತ್ರ "ಅರಿವೆ ಪರ್ತ್ ಬುಡ್ಪುನ" ಕ್ರಮ.ಅಂದ್ರೆ ಕುಟುಂಬದಿಂದ ಬಿಟ್ಟು ಬಿಡುವುದು.
ಈ ಅರಿವೆ ಅರಿದು ಬಿಟ್ಟ ಮೇಲೆ ಮತ್ತೆ ಅವರು ಮೂಲ ಕುಟುಂಬ ಸೇರಲು ಅಷ್ಟು ಸುಲಭವಿಲ್ಲ.
ಆಗ ಅವರು ಅನ್ಯಮಾರ್ಗವಿಲ್ಲದೇ ಸ್ವಂತವಾಗಿ ಸ್ವಾತಂತ್ರ್ಯವಾಗಿ ಕುಟುಂಬದ ದೈವಗಳನ್ನು ಬೇರೆ ಎಲ್ಲೊ ಒಂದು ಕಡೆ ಬಂದು ನೆಲೆ ನಿಂತು ನಂಬುತ್ತಾರೆ.ಇಂತಹ ಒಂದು ಸಣ್ಣ ಕುಟುಂಬ ಹುಟ್ಟಿ ಕೊಳ್ಳುತ್ತದೆ.ಮುಂದೆ ಅದರಲ್ಲಿ ಜನಸಂಖ್ಯೆ ಸ್ವಲ್ಪ ಮಟ್ಟಿಗೆ ಜಾಸ್ತಿ ಆಗುತ್ತಾ ಹೋಗುತ್ತದೆ.
ಎರಡು ಮೂರು ತಲೆಮಾರು ಕಳೆದ ನಂತರ ಅ ಕುಟುಂಬದ ಕಿರಿಯರಿಗೆ ತಮ್ಮ ಮೂಲ ಮನೆ,ಮೂಲ ನಾಗ ಎಲ್ಲಿ ಎಂದು ತಿಳಿದಿರುವುದಿಲ್ಲ.ಅವಾಗ ಅವರು ಮೂಲ ಕುಟುಂಬದ ಮನೆಯ ಹುಡುಕಾಟದಲ್ಲಿ ತೊಡಗುತ್ತಾರೆ.
ದೊಡ್ಡದಾದ ಕುಟುಂಬದ ಮನೆ ಬೆಂಕಿಗಾಹುತಿಯಾದಾಗ ಎಷ್ಟೋ ಕುಟುಂಬಗಳು ಚೆಲ್ಲಾಪಿಲ್ಲಿಯಾಗಿ ಬೇರೆ ಬೇರೆ ಕಡೆ ದೈವಗಳನ್ನು ನಂಬಿ,ಸಣ್ಣ ಸಣ್ಣ ಕುಟುಂಬಗಳು ಹುಟ್ಟಿಕೊಂಡ ಉದಾಹರಣೆ ಇದೆ.
ಇಂತಹ ಎಷ್ಟೋ ಘಟನೆಗಳು ನಡೆದು ಹೋಗಿವೆ.ಈಗಲೂ ಇಂತಹ ಸಣ್ಣ ಸಣ್ಣ ಕುಟುಂಬದ ಸದಸ್ಯರು ತಮ್ಮ‌ ಮೂಲ ಕುಟುಂಬದ ನಾಗನನ್ನು ಮತ್ತು ಮನೆಯನ್ನು ಹುಡುಕುತ್ತಲೇ ಇದ್ದಾರೆ‌.

ಕುಟುಂಬದ ಮನೆ ಅಂದ ಮೇಲೆ ಅದಕ್ಕೆ ಅದರದೇ ಆದ ಕೆಲವೊಂದು ಶಿಸ್ತು, ನಿಯಮ ನಿಷ್ಠೆ, ಸಂಪ್ರದಾಯಗಳು,ಕಟ್ಟುಪಾಡುಗಳು ಇವೆ.ಅದನ್ನು ಪಾಲಿಸಿಕೊಂಡು ಬಂದರಷ್ಟೆ ಕುಟುಂಬದ ಮನೆಯ ಘನತೆ ಗೌರವ ಪ್ರತಿಷ್ಠೆ ಉಳಿಯುತ್ತದೆ.
ಈ ಭೂಮಿ ಯಾರಿಗೂ ಕೂಡ ಶಾಶ್ವತ ಅಲ್ಲ.
ಒಂದು ಕಾಲದಲ್ಲಿ ಒಬ್ಬರಿಂದ ಒಬ್ಬರು ವಲಸಿಗರಾಗಿ ಒಂದು ಭೂಮಿಯಿಂದ ಇನ್ನೊಂದು ಭೂಮಿಗೆ ಬಂದು ನೆಲೆಯಾಗಿ ಬೇಸಾಯ ಮಾಡುತ್ತ,ಒಕ್ಕಲುತನದಲ್ಲಿ ಜೀವನ ತೇಯ್ದರೆ,ಇನ್ನು ಕೆಲವೊಂದು ಜನರು ಹಣ ಕೊಟ್ಟು‌ ಖರೀದಿ ಮಾಡಿದ ಭೂಮಿ,
ಕೆಲವೊಬ್ಬರು ಧರ್ಪದಿಂದ ಇನ್ನೊಬ್ಬರನ್ನು ಓಡಿಸಿ ವಶಪಡಿಸಿಕೊಂಡು ಕುಳಿತು, ನಂತರ ನಿರ್ಸಂತಾನವಾಗಿ ಬಿಟ್ಟು ಹೋಗಿ, ಬೇರೆ ಕಡೆ ಹೋಗಿ ನೆಲೆಯಾಗಿ, ಅ ಜಾಗಕ್ಕೆ ಮತ್ತೆ ಬೇರೆ
ಕೆಲವೊಂದು ಜನರು ಬಂದು ನೆಲೆಯಾಗುವುದು, 
ಇನ್ನು ಬೇರೆ ಬೇರೆ ಕಾರ್ಯಕ್ಕೆ ಅರಸರಿಂದ, ದೇವಸ್ಥಾನದಿಂದ,ಮಠದಿಂದ,
ಗರಡಿಯಿಂದ ಉಂಬಲಿಯಾಗಿ ಸಿಕ್ಕಿದ ಭೂಮಿಯಲ್ಲಿ ನೆಲೆಗೊಂಡು,
ಕೊನೆಗೊಮ್ಮೆ ಅಲ್ಲಿಯೇ ಶಾಶ್ವತವಾಗಿ‌ ಉಳಿದುಕೊಂಡ ನೆಲ,ಮುಂದಕ್ಕೆ ಗ್ರಾಮದಲ್ಲಿ ಉತ್ತಮ ಹೆಸರು,ಅಂತಸ್ತಿಗೆ ಗಳಿಸಿ ಗುತ್ತು, ಬಾರೀಕೆಗಳಾಗಿ ಮಾರ್ಪಾಡುಗೊಂಡವು.ಇವೇ
ಈಗ ಹೆಚ್ಚಿನವರ ಕುಟುಂಬದ ಮನೆ ಅಗಿದೆ.
ನಾಗನಮೂಲ ಬನ ಎಲ್ಲಿ ಇರುವುದು?
ನಮಗೆ ಮೂಲ ನಾಗ ಎಂಬುದು ನಮ್ಮ ಮೂಲ ಹಿರಿಯರು ನೆಲೆಸಿದ ಆದಿ ಮೂಲ ಜಾಗದಲ್ಲೆ ಇರುವುದು.ಅದು ಬದಲಾಗಲೂ ಸಾದ್ಯವಿಲ್ಲ.
ಈ ಆದಿಮೂಲ ಜಾಗವನ್ನು ಹುಡುಕಲು ಸಾಧ್ಯವೇ ಎಂಬ ಪ್ರಶ್ನೆಗೆ,ಈಚಿನ ಮೂರು ನಾಲ್ಕು ತಲೆಮಾರಿನ ಕುಟುಂಬವಾದರೆ ಹುಡುಕಲು ಸಾದ್ಯ,ಆದರೆ ಐದಾರು ತಲೆಮಾರು ಕಳೆದು ಹೋಗಿ,ಸಂಪರ್ಕ ಕಡಿದು ಹೋದ ಕುಟುಂಬವಾದರೆ ಹುಡುಕುವುದು ತುಂಬಾ ಕಷ್ಟ.ಇಂತಹ ವಿಚಾರಗಳನ್ನು  ಮನಗಂಡು ಕೆಲವೊಂದು ಕಡೆ ಹಿರಿಯರು ತಾವು ನೆಲೆನಿಂತ ಜಾಗದಲ್ಲೆ ಇರುವ ನಾಗಬನವನ್ನು ಕುಟುಂಬದ ನಾಗಬನವಾಗಿ‌ ಪರಿವರ್ತನೆ ಮಾಡಿ ಕೊಂಡಿದ್ದನ್ನು ನಾವು ಕಾಣುತ್ತೆವೆ.ಇನ್ನೂ ಕೆಲವರು ಮೂಲ ಕುಟುಂಬದ ನಾಗಬನ ಸಿಗದೇ ಇದ್ದಾಗ ಅವರದೇ ಬಳಿಯ ಕೆಲವೊಂದು ಮೂಲ ನಾಗಬನಕ್ಕೆ ಹಾಲೆರೆದು ಬರುತ್ತಾರೆ.ಇನ್ನೂ ಕೆಲವರು ನಾಗ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ.
ಆದರೆ ನಮ್ಮ ಮೂಲನಾಗ ಬನಕ್ಕೆ ಸಂದಾಯವಾಗುವ ನಮ್ಮ ತನುತಂಬಿಲ ಸಂದಾಯ ಆಗಲೇಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಕುಟುಂಬದ ನಾಗದೋಷ ನಮಗೆ ಕಾಣುತ್ತಲೇ ಇರುತ್ತದೆ.
ಕುಟುಂಬದ ಮನೆಗಳಲ್ಲಿ ನಾಗನಿಗೆ  ಹೆಚ್ಚಾಗಿ ಎರಡು ಸಲ ಹಾಲೆರೆದು ತಂಬಿಲ ಮಾಡಲಾಗುತ್ತದೆ. ಒಂದು ನಾಗರ ಪಂಚಮಿ ದಿನವಾದರೆ ಇನ್ನೊಂದು ಕಾಲಾವಧಿಯ ದೈವ ದೇವರ ಕಾರ್ಯಕ್ರಮದ ದಿನ.
ನಾಗನಿಗೆ ತನು ತಂಬಿಲ ಸಲ್ಲಿಸದಿದ್ದರೆ ಕುಟುಂಬದ ಕೆಲವರಿಗೆ ಕಣ್ಣುದೃಷ್ಠಿ ಸಂಬಂಧಿಸಿದ ದೋಷಗಳು,ನರಗಳ ದೋಷ, ಮಕ್ಕಳಾಗದೇ ಇರುವುದು,ಚರ್ಮ ಸಂಬಂಧಿಸಿದ ಖಾಯಿಲೆಗಳು,ಮದುವೆಯಾಗದೇ ಉಳಿಯುವುದು,
ಇನ್ನಿತರ ಭಾದೆಗಳು ಗೋಚಾರ ಅಗುತ್ತದೆ. ಅದಕ್ಕಾಗಿ ವರ್ಷಕ್ಕೊಂದು ಸಾರಿ ಕುಟುಂಬದ ನಾಗನಿಗೆ ತನುತಂಬಿಲದ ಸೇವೆ ಪ್ರತಿಯೊಬ್ಬ ಕುಟುಂಬದ ಸದಸ್ಯ ಸಲ್ಲಿಸಿದರೆ ಉತ್ತಮ.ಯಾಕೆಂದರೆ ತುಳುನಾಡು ನಾಗಭೂಮಿ.ಇಲ್ಲಿನ ಮಣ್ಣೆ ನಾಗ.
ಅದಕ್ಕಾಗಿ ಕೆಲವರು ಕೋಪದಿಂದ ಒಂದು ಮಾತು ಹೇಳುತ್ತಾರೆ "ಅಯಗ್ ಮಣ್ಣೆ ಮರಿಯಾದ್ ತುಚ್ಚು" ಎಂದು.

ಕುಟುಂಬದ ಮನೆಯಲ್ಲಿ ಜಾಗದ ದೈವಗಳು ಮತ್ತು ಚಾವಡಿಯ ದೈವಗಳನ್ನು ನಾವು ಕಾಣುತ್ತೆವೆ.
ಯಾವುದು ಇದರಲ್ಲಿ ಜಾಗದ ದೈವಗಳು?
ಇದನ್ನೆ ನಾನು ಈ ಮೊದಲು ಹೇಳಿದ್ದು. ನಮಗಿಂತ ಮುಂಚಿನ ಇನ್ನೊಂದು ಜನಾಂಗ ನೆಲೆ ನಿಂತು,ಅವರು ದೈವಗಳನ್ನು ನಂಬಿ ನಂತ್ರ ಬಿಟ್ಟು ವಲಸೆ ಹೋಗಿದ್ದು,ಅವರು ಬಿಟ್ಟು ಹೋದ ದೈವ,ನಾವು ಅ ಜಾಗದಲ್ಲಿ ಮತ್ತೆ ನೆಲೆ ನಿಂತಾಗ ನಮಗೆ ಅವು ಜಾಗದ ದೈವಗಳ ಹೆಸರಲ್ಲಿ ಬಳುವಳಿಯಾಗಿ ಬಂದದ್ದು.
ಮತ್ತು ಆದಿಯಿಂದಲೇ ಅ ಭೂಮಿಯ ನೆಲಮೂಲದಿಂದ ಬಂದು ನಮಗೆ ನಂಬಲು ಸಿಕ್ಕಂತಹ ಕೆಲವೊಂದು ದೈವೊಗಳು ಮತ್ತು ಕೆಲವೊಂದು ಗ್ರಾಮ ಇಳಿದು ನೇಮ ತೆಗೆದುಕೊಂಡ ದೈವಗಳು.ಉದಾಹರಣೆಗೆ ಹೆಚ್ಚಾಗಿ ಲೆಕ್ಕೆಸಿರಿ,ಮೈಸೊಂದಾಯ,ಜಾಗದ ಗುಳಿಗ,ಜಾಗದ ಪಂಜುರ್ಲಿ,ಪಿಲ್ಚಂಡಿ,ಜುಮಾದಿ,ದೈವೊಂಕ್ಲು ಇಂತಹ ಹಲವು ಜಾಗದ ದೈವಗಳು.ಇದನ್ನು ಕುಟುಂಬದ ದೈವಗಳು ಎಂದು ಪರಿಗಣಿಸಲಾಗುವುದಿಲ್ಲ.ನೆಲಮೂಲದಲ್ಲಿ ಉದಿಪನ ಆದ ದೈವಗಳು ಇವು,ಗ್ರಾಮ ಸಂಬಂಧಿಸಿದ ರಾಜನ್ ದೈವಗಳು,ಗ್ರಾಮ ದೈವಗಳು,ಅರಸು ದೈವಗಳು ಇವು, 
ಆದ ಕಾರಣ ಜಾಗಕ್ಕೆ ಇರುವ ಗೌರವದಲ್ಲಿ  ಕುಟುಂಬದ ಮನೆಯಲ್ಲಿ ಈ ದೈವಗಳಿಗೆ ಮೊದಲ ಪೂಪೂಜನೆ ತಂಬಿಲ ಸೇವೆ ಇವಕ್ಕೆ ನಡೆಯಬೇಕು ಮತ್ತು ನಡೆಯುತ್ತದೆ.ಈ ದೈವಗಳು ನಮ್ಮ ಭೂಮಿಯ ಹೆಸರನ್ನು ಗ್ರಾಮದಲ್ಲಿ,ಮಾಗಣೆಯಲ್ಲಿ ಗುತ್ತು,ಬಾರೀಕೆಯ ಹೆಸರಲ್ಲಿ ಕರೆಸಿ, ಪ್ರಸಿದ್ಧಿ ತಂದು ಕೊಟ್ಟ ದೈವಗಳು.ಆದ್ದರಿಂದ ಕುಟುಂಬದ ಮನೆಯಲ್ಲಿರುವ ಜಾಗದ ಮತ್ತು ಧರ್ಮಚಾವಡಿಯ ದೈವಗಳನ್ನು ಯಾವತ್ತಿಗೂ ಕಡೆಗಣಿಸುವಂತಿಲ್ಲ.ಕುಟುಂಬದ ಕಾರ್ಯಕ್ರಮ ಆಗುವಾಗ ಮೊದಲ ಅರಾಧನೆ ಅ ದೈವಗಳಿಗೆ.ಆನಂತರ ಉಳಿದ ಕುಟುಂಬದ ದೈವಗಳಿಗೆ‌ ಸೇವೆ ಕೊಡುವ ಕ್ರಮ ಇರುವುದು.
ಕುಟುಂಬ ಪದ್ದತಿ ಹೇಗೆ?
ತುಳುನಾಡಿನಲ್ಲಿ ಕುಟುಂಬದ ಪದ್ಧತಿಯಲ್ಲಿ ಎರಡು ವಿಧದಲ್ಲಿ ಇವೆ.
ಆಳಿಯ ಕಟ್ಟು(ಅಪ್ಪೆ ಕಟ್ಟು)
ಮಕ್ಕಳ ಕಟ್ಟು(ಮಗನ ಕಟ್ಟು)
ಇಲ್ಲಿ ಆಳಿಯ ಕಟ್ಟು ಅಂದ್ರೆ ಅಮ್ಮನ ಮೂಲ ಕುಟುಂಬದ ಮನೆಗೆ ಹೋಗುವುದು.ಅಲ್ಲಿಯೆ ಕುಟುಂಬದ ದೈವಗಳನ್ನು ನಂಬುವುದು.
ಮಕ್ಕಳ ಕಟ್ಟು ಎಂದರೆ ತಂದೆಯ ಮೂಲ ಕುಟುಂಬದ ಮನೆ ನಮಗೆ ಕುಟುಂಬದ ಮನೆ ಅಗುವುದು.ತಂದೆಯ ಪಾಲಿನ ಕುಟುಂಬದ ದೈವಗಳು ನಮಗೆ ಕುಟುಂಬದ ದೈವ ಅಗುವುದು.(ಸೂಚನೆ:- ಮೂಲ ನಾಗ ಬೇರೆ ಅಲ್ಲಯೆ ಇರಬಹುದು ಅಥವಾ ಬೇರೆ ಎಲ್ಲಿಯೊ ಇರಬಹುದು)
ಹೆಚ್ಚಾಗಿ ಜೈನ,ಬಿಲ್ಲವ,ಬಂಟ,ಮೂಲ್ಯ, ಮಡಿವಾಳ,ದ್ರಾವಿಡ ಇನ್ನಿತರ ಜನಾಂಗಕ್ಕೆ ಆಳಿಯ ಕಟ್ಟಿನ ಪದ್ದತಿಯಾದರೆ,ವಿಶ್ವಕರ್ಮ, ಗೌಡ,ಕೊಂಕಣಿ,ಬ್ರಾಹ್ಮಣ, ಮೊಗೆರ,ಕುಂಬಾರ ಇನ್ನಿತರ ಸಮುದಾಯಕ್ಕೆ ಮಕ್ಕಳ ಕಟ್ಟು ಪದ್ಧತಿ.

ಕುಟುಂಬದ ಮನೆ ನಮಗೆ ಯಾಕೆ ಅವಶ್ಯಕ?
ಹಿಂದೊಮ್ಮೆ ಕೂಡು ಕುಟುಂಬ ಎಂಬ ಕಟ್ಟು ಪಾಡಿನ ಒಳಗೆ ಎಲ್ಲಾ ಕುಟುಂಬಗಳ ಕವಳುಗಳು ಒಂದೇ ಮನೆಯಲ್ಲಿ ಇತ್ತು.ನೂರು ಜನ ಸದಸ್ಯರು,ಎಂಟು ಹತ್ತು ತೊಟ್ಟಿಲು ಕಟ್ಟಿದ ಮನೆ,ಎಕರೆಗಟ್ಟಲೆ ಗದ್ದೆ ಬೇಸಾಯ ಇದ್ದ ಇಂತಹ  ಪ್ರಸಿದ್ದ ಮನೆಗಳು ಗ್ರಾಮದಲ್ಲಿ ಮೂರು ನಾಲ್ಕು ಮಾತ್ರ ಇದ್ದವು. 
ಮನೆಯಲ್ಲಿ ಹಿರಿಯಜ್ಜಿ  ಇಲ್ಲವೇ ಹಿರಿಯ ಅಮ್ಮ ರಾಜಮಾತೆ ಅ ಮನೆಗೆ.
ಮನೆಯ ಗಂಡುಮಗ ಇಲ್ಲವೇ ಮೊಮ್ಮಗ ಅ ಮನೆಗೆ ಯಜಮಾನನ ಸ್ಥಾನವನ್ನು ಅಲಂಕರಿಸುತ್ತಿದ್ದ.ಉಳಿದವರು ಕೃಷಿ ಬೇಸಾಯ, ಹೈನುಗಾರಿಕೆಯಲ್ಲಿ,ಕೆಲವರು ಕುಲವೃತ್ತಿಯಲ್ಲಿ,ನಾಟಿ ಪಂಡಿತರಾಗಿ,ಮಂತ್ರತಂತ್ರಗಳಲ್ಲಿ ನಿರತರಾಗುತ್ತಿದ್ದರು.ಒಂದೇ ಮನೆಯ ಹಲವು ಕೊಠಡಿಯಲ್ಲಿ ಹಲವಾರು ಸಂಸಾರಗಳು ಅಲ್ಲಿದ್ದವು.ಒಂದೇ ಅಡುಗೆಯ ಮನೆಯಲ್ಲಿ ತಯಾರಾದ ಊಟ ಎಲ್ಲರಿಗು ಬಡಿಸುತ್ತಿದ್ದರು.ಅಲ್ಲಿ ಅಷ್ಟೊಂದು ಅನ್ಯೊನ್ಯತೆ ಇತ್ತು,ನಂಜಿ ಮತ್ಸರ ಒಂದು ಹೊತ್ತು ಬಂದು ಹೊಗುತ್ತಿತ್ತು ಕೂಡ.ಆದರೂ ರಕ್ತಸಂಬಂಧದ ಒಳಗೆ ಅದಕ್ಕೆ ಯಾರು ಕೂಡ ಸೊಪ್ಪು ಹಾಕುತ್ತಿರಲ್ಲಿಲ್ಲ.ಮತ್ತು ಕೆಲವರು ಕೂಡು ಕುಟುಂಬದಿಂದ ಹೊರಬಂದು ಇನ್ನೊಂದು ಕಡೆ ಒಕ್ಕಲುತನಕ್ಕೆ ಕೂತರೂ ಮೂಲ ಮನೆಯ ಎಲ್ಲಾ ಕಾರ್ಯಗಳಿಗೆ ಹೋಗಿ ಬರುತ್ತಿದ್ದರು.
ಕುಟುಂಬದ ದೈವಗಳು ಕೂಡ ಅಲ್ಲಿ ಒಂದೇ ರಕ್ತ ಹಂಚಿಕೊಂಡವರಿಗೆ ಯಾರು ಬಿಡಿಸಲಾಗದ ಗಟ್ಟಿಯಾದ ಕೊಂಡಿ ಅಗಿತ್ತು.
ಅಂತಹ ಮನೆಗಳಲ್ಲಿ ಅನುಕೂಲವಂತನ ಕುಟುಂಬದ ದೈವಗಳು,ಜಾಗದ ದೈವಗಳ ಧರ್ಮ ಚಾವಡಿಯ ಒಟ್ಟಿನಲ್ಲಿ ಇನ್ನೊಂದು ಮಂಚದಲ್ಲಿ ಇದ್ದರೆ,ಬಡವನ ಅಥವಾ ವಲಸೆ ಕುಟುಂಬಿಕನ ದೈವ ಮತ್ತು ಮುಡಿಪು ಬಿಳಳಿನ ಬುಟ್ಟಿಯಲ್ಲಿ( ತುಳುವಿನಲ್ಲಿ ಬೂರುದ ಬುಟ್ಟಿ) ಸೇರಿ ಮನೆಯ ಅಟ್ಟದಲ್ಲಿ ಜೋಪಾನವಾಗಿ ಇತ್ತು.ವರ್ಷಕ್ಕೊಂದು ಸಾರಿ ಕುಟುಂಬಿಕರನ್ನು ಕರೆದು, ಅದನ್ನು ಕೆಳಗೆ ತೆಗೆದು ಚೆನ್ನಾಗಿ ತೊಳೆದು ಪರ್ವ ತಂಬಿಲ ಅಗೆಲು ಬಡಿಸಲಾಗುತ್ತಿತ್ತು.ಅದರ ಜೊತೆಗೆ ನಮ್ಮೊಂದಿಗೆ ಇದ್ದು ಅನಂತರದ ಪರಲೋಕ ಗೈದವರಿಗೂ ಅ ದಿನ ಸಮ್ಮನ ಅಗೆಲು ಬಡಿಸುವ ಕ್ರಮವೂ ಇತ್ತು.ಅ ದಿನ ಕುಟುಂಬದ ದೈವ ಮನೆಯ ಕುಟುಂಬದ ಕೆಲ ಸದಸ್ಯನಿಗೆ ಬರುವುದು,ಕುಟುಂಬದಲ್ಲಿರುವ ಲೋಪ ದೋಷ ಹೇಳುವುದು,ಕೆಲ ಹೆಂಗಸರಿಗೆ ಹೆಣ್ಣು ದೈವ ಮತ್ತು ಹಿರಿಯರು ಬರುವುದು ಕುಟುಂಬವನ್ನು ಚೆನ್ನಾಗಿ ನಡೆಸುಕೊಂಡು ಹೋಗುವಂತೆ ಬುದ್ದಿಮಾತು ಹೇಳಿ ಅಸರು,ಬೊಂಡ ಕುಡಿದು‌ ಹೋಗುವುದು ಮಾಮೂಲಿ ಅಗಿತ್ತು.ಒಂದೊಂದು ಮನೆಯಲ್ಲಿ ಐದಾರು ಜನಕ್ಕೆ ದೈವ ಬಂದು ಹೋಗುವುದು ಮಾಮೂಲಿಯೂ ಅಗಿತ್ತು ಅ ಕಾಲದಲ್ಲಿ. ಇದೊಂದು ರೀತಿ‌ ಕುಟುಂಬ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟು ಕೊಂಡಿತ್ತು, ನಂಬಿಕೆಯನ್ನು ಕೂಡ ಉಳಿಸಿಕೊಂಡು ಬಂದಿತ್ತು ಅನ್ನೊದು ಮಾತ್ರ ಸುಳ್ಳಲ್ಲ.

ಕುಟುಂಬಕ್ಕೊಂದು ಅಲಡೆ ಯಾಕೆ ಬೇಕು?
ತುಳುನಾಡಿನಲ್ಲಿ ಸಿರಿ ಸೂಕೆಬಾಧೆ ಇಲ್ಲದ ಕುಟುಂಬಗಳು ಇರಲು ಸಾಧ್ಯವಿಲ್ಲ. ಅದ್ದರಿಂದ
ಪ್ರತಿಯೊಂದು ಕುಟುಂಬದ ಮನೆಗೆ ಆಲಡೆ ಎಂಬುದು ಮುಖ್ಯವಾಗಿರುತ್ತದೆ.ಎಲ್ಲಾ ಕುಟುಂಬಗಳಿಗೆ ಒಂದೇ ಆಲಡೆ ಅಗಿರುವುದಿಲ್ಲ.ಬೇರೆ ಬೇರೆ ಅಲಡೆಗಳು ಅಗಿರುತ್ತವೆ.ನಮ್ಮ ಹಿರಿಯರು ಯಾವ ದಿಕ್ಕಿನಿಂದ ವಲಸೆ ಬಂದಿದ್ದರೊ, ಅ ಕಡೆಗೆ ನಮ್ಮ ಆಲಡೆಗಳು ಇರುತ್ತವೆ ಅನ್ನೊದರಲ್ಲಿ ಸಂಶಯ ಇಲ್ಲ.ಯಾಕೆಂದರೆ ಮೂಡಾಣ ಭಾಗದ ಜನರಿಗೆ ಮೂಡಾಣದಲ್ಲಿಯೆ ಆಲಡೆಗಳಿವೆ.ಒಂದು ವೇಳೆ ಮೂಡಾಣದ ಒಬ್ಬಿಬ್ಬರು ಪಡುವಣ ದಿಕ್ಕಿನಲ್ಲಿರುವ ಯಾವುದಾದರೂ ಅಲಡೆಗೆ ಹೋಗುತ್ತಿದ್ದರೆ ಅವರ ಹಿರಿಯರು ಅ ಕಡೆಯಿಂದಲೇ  ಈ ಕಡೆ ಬಂದವರು ಅನ್ನೊದು ಸ್ಪಷ್ಟವಾಗುತ್ತದೆ‌.ಹಿರಿಯರು ಹೋಗುತ್ತಿದ್ದ  ಅಲಡೆಗಳನ್ನು ಬದಲಿಸಿ ಇನ್ನೊಂದು ಅಲಡೆಗೆ ಹೋಗುವಂತೆಯೂ ಇಲ್ಲ.
ಆಲಡೆಯಲ್ಲಿ ಈಗ ಈಶ್ವರ ದೇವರು ಲಿಂಗ ರೂಪದಲ್ಲಿ‌ ಇದ್ದರೆ,ಉರಿ ಬೆರ್ಮರು,ಜಯವುಳ್ಳ ಬೆರ್ಮರು ಈ ರೀತಿಯ ಹೆಸರಿನ ಬೆರ್ಮರು ಪ್ರಧಾನವಾಗಿ ಇರುತ್ತಾರೆ.ತುಳುನಾಡಿನ ಸತ್ಯನಾಪುರದ ಸಿರಿಗಳಿಗೆ,ಕುಮಾರನಿಗೆ ಅಲಡೆಯಲ್ಲಿ ಅರಾಧನೆ ಇದೆ.
ಜೊತೆಗೆ ಪರಿವಾರ ಶಕ್ತಿಗಳಾದ ನಾಗ, ಲೆಕ್ಕೆಸಿರಿ, ನಂದಿಗೊಣ,ಪಂಜುರ್ಲಿ,ಪಿಲ್ಚಂಡಿ ಇವುಗಳು ಇರುತ್ತವೆ.ಇವಕ್ಕೆಲ್ಲ ಒಟ್ಟಿಗೆ ಸೇರಿ ಪ್ರತಿ ಕುಟುಂಬದ ಮನೆಯಿಂದ ಬಲಿವಾಡು,ಪುಂಡಿಪನವು,ಹರಕೆ ಸೇವೆಯನ್ನು ಆಲಡೆಗೆ ಒಪ್ಪಿಸುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ಬಲಿವಾಡು ಅಂದರೆ ಒಂದು ಸೇರು ಅಕ್ಕಿ,ಒಂದು ತೆಂಗಿನಕಾಯಿ,ಹುರುಳಿ,ಗರೀಕೆ,ಹಿಂಗಾರದ ಜೊತೆಗೆ ಮುಷ್ಟಿ ಹಣ ಸಂದಾಯ.
ಬಲಿವಾಡು ಹರಕೆ ಒಪ್ಪಿಸದಿದ್ದರೆ ಏನಾಗುತ್ತದೆ?
ಹರಕೆ ಒಪ್ಪಿಸದಿದ್ದರೆ ಕುಟುಂಬದ ಹೆಣ್ಣುಮಕ್ಕಳಿಗೆ ಸಿರಿಗಳು ಸೂಕೆ ಭಾದಗದಲ್ಲಿ ಕಾಣುತ್ತಾರೆ. ಈ ಸೂಕೆ ಅನ್ನೊದು ತುಲುನಾಡಿನ ಸಿರಿಗಳು ಜೊಗಕ್ಕೆ ಬರುವುದು.ಏಳ್ವರು ಸಿರಿಗಳಲ್ಲಿ ಒಂದು ಸಿರಿ ಬಂದು ಹೆಣ್ಣುಮಗಳನ್ನು ಪೀಡಿಸುತ್ತಿರುವುದು.ಇದರ ಲಕ್ಷಣಗಳು ಹೇಗೆ ಎಂದರೆ ಯಾರಲ್ಲೂ ಮಾತಾನಾಡದೇ ಮೌನಕ್ಕೆ ಶರಣಗುವುದು,ಯಾರೊಂದಿಗೂ ಬೆರೆಯದೇ ಇರುವುದು,ಗಂಡನ ಸಣ್ಣ ಮಾತಿಗೂ ಬಾಯಿಗೆ ಬಾಯಿ ಮಾತನಾಡುವುದು,ತಗಾದೆ ತೆಗೆಯುವುದು,
ಯಾವುದಾದರೂ ಕುಟುಂಬದ ಕಾರ್ಯಕ್ರಮದಲ್ಲಿ ದರ್ಶನ ಬರುವುದು ಈ ರೀತಿ.
ಇಲ್ಲಿ ಗಮನಿಸಿಕೊಳ್ಳಬೇಕಾದ ವಿಷಯ ಅಂದ್ರೆ ಸ್ಯೊ...! ಎಂದೂ ಮತ್ತು ನಾರಾಯಣ ದೇವರ ಹೆಸರನ್ನು ಹೇಳಿ ದರ್ಶನ ಬಂದರೆ ಇದು ಸಿರಿಸೂಕೆ ಎಂದು ದೃಡವಾಗುತ್ತದೆ.ಇಂತಹ ಹೆಣ್ಮಕ್ಳ ಮೇಲೆ ಸೂಕೆ ಬಾಧಗಗಳನ್ನು ಮೊದಲೆಲ್ಲ ಮನೆಗೆ ಕುಮಾರನನ್ನು ತರಿಸಿಕೊಂಡು ಸಂದಿ ಹೇಳಿಸಿ ನಂತರ ಅದಕ್ಕಾಗುವ ಪರಿಹಾರ ಮಾಡಿಸಿ ಸರಿಪಡಿಸಿ ನಂತರ ಮತ್ತೆ ಶರೀರದ ಮೇಲೆ ಬಾರದ ಹಾಗೆ ಆಲಡೆಗೆ ವರ್ಷಕ್ಕೊಮ್ಮೆ ಹೋಗಿ ಹರಕೆ ಒಪ್ಪಿಸಿ,ಅಲ್ಲಿಯ ಮಣ್ಣು ಪ್ರಸಾದ ಹಾಕಲು ಹೇಳುತ್ತಿದ್ದರು.ಹಾಗೆ ಮಾಡಿದ್ರೆ ಸೂಕೆಬಾಧೆ ಬರುವುದಿಲ್ಲ.ಮತ್ತೊಂದು ವಿಚಾರ ಅಂದ್ರೆ ಕುಟುಂಬದ ಎಲ್ಲಾರಿಗೂ ಸೂಕೆ ಬಾಧೆ ಬರುವುದಿಲ್ಲ,ಒಂದು ಕುಟುಂಬದಲ್ಲಿ ಏಳೆಂಟು ಕವಳುಗಳು ಇದ್ದರೆ ಅದರಲ್ಲಿ ಐದು ಕವಳಿನಲ್ಲಿ ಕುಟುಂಬಿಕರಿಗೆ ಈ ಬಾಧೆ ಇರುತ್ತದೆ.ಆದರೆ 
ಈಗ ಕಾಲ ಬದಲಾಗಿದೆ,ಮೊದಲು ಸೂಕ ಬಾದಗ ಇದ್ದ ಹಿರಿಯರ ಮನೆಯವರು ಮಾತ್ರ ಆಲಡೆಗೆ  ಹೋಗುವುದು ಈಗ ಕಾಣಬಹುದು.ಉಳಿದ ಹೆಚ್ಚಿನ ಕುಟುಂಬಗಳಿಗೆ ಅಲಡೆ ವಿಚಾರ ತಿಳಿದಿರುವುದಿಲ್ಲ.ಕಾರಣ ಈಗಿನ‌ ಕುಟುಂಬದ ಮನೆಗಳು ಟ್ರಸ್ಟ್, ಸಮಿತಿಗಳಾಗಿ ಹೋಗಿವೆ. ಇವರುಗಳು ಇದರ ಬಗ್ಗೆ ಅಷ್ಟೊಂದು ಗೋಜಿಗೆ ಹೋಗುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಹೆಣ್ಮಕ್ಳಿಗೆ ಮೈಮೇಲೆ ಸೂಕೆಬಾಧೆ ದರ್ಶನ ಬಾರದಿದ್ದರೂ, ಬೇರೆ ಬೇರೆ ರೂಪದಲ್ಲಿ ಇದರ ಭಾದಗಗಳು ತೋರುತ್ತವೆ.ಮದುವೆಯಾದ ಮೇಲೆ ಗಂಡು ಹೆಣ್ಣಿಗೆ ಸರಿಯಾಗಿ ಕೂಡಿ ಬಾಳದೇ ಇರುವುದು.ಮಾನಸಿಕ ಖಿನ್ನತೆಗೆ ಒಳಗಾಗುವುದು.ಹಠಮಾರಿ,ವಿಚಿತ್ರವಾಗಿ ವರ್ತಿಸುವುದು,ಮೌನವಾಗಿ ಇರುವುದು,ಮದುವೆ ತಪ್ಪುವುದು ಇವೆಲ್ಲವೂ.
ಒಟ್ಟಿನಲ್ಲಿ ಹೇಳುವುದಾದರೆ ಅ ಕಾಲದಲ್ಲಿ ಮಾನಸಿಕವಾಗಿ ನೊಂದು ಬೆಂದ ಜೀವಗಳಿಗೆ ಸಾಂತ್ವನದ ಮಾತುಗಳನ್ನು ಹೇಳಿ ಸಂತೈಸಿದ ಕೇಂದ್ರಗಳು ಇದ್ರೆ ಅದು ತುಳುನಾಡಿನ ಆದಿಆಲಡೆಗಳು. ಕುಟುಂಬದಲ್ಲಿ ಸಿರಿಸೂಕೆ ಹಿಡಿದ ಮಹಿಳೆಯರ(ದಲ್ಯಕ್ಕೆ ನಿಲ್ಲುತ್ತಿದ್ದವರ) ಪ್ರೆತಕ್ಕೆ ಆಲಡೆಗೆ ಹೋಗಿ ಮುಕ್ತಿ ಕೊಡಿಸುವ ಕ್ರಮ ಈಗಲೂ ಕೆಲವು ಕಡೆ ಇದೆ.
ಅದ್ದರಿಂದ ನಿಮ್ಮ ನಿಮ್ಮ ಆಲಡೆಗಳನ್ನು ಯಾವತ್ತಿಗೂ ಕಡೆಗಣಿಸಬೇಡಿ.ಕಾಲಕಾಲಕ್ಕೆ ಹರಕೆ ಒಪ್ಪಿಸುವ ಹಿರಿಯರ ಕ್ರಮ ನಿಮ್ಮ ಕುಟುಂಬದಲ್ಲಿ ಇದ್ದರೆ ಅದನ್ನು ಮುಂದುವರೆಸಿ.ವಿಜ್ಞಾನಯುಗ ಎಷ್ಟೇ ಮುಂದುವರೆದರೂ ಅದರಲ್ಲಿ ಸರಿಪಡಿಸಲಾಗ ಮಾನಸಿಕ ಸಮಸ್ಯೆಗಳನ್ನು, ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪರಿಹರಿಸಿದ ಉದಾಹರಣೆ ಎಷ್ಟೋ ಇದೆ.

ನಾವುಗಳು ಕುಟುಂಬದ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು.
ನಮ್ಮ ಹಿರಿಯರು ಎಲ್ಲಾದಕ್ಕೂ ಕ್ರಮ ಕಟ್ಟಲೆ,ಕಟ್ಟು ಪಾಡು ಎಂಬ ನಿಯಮಗಳನ್ನು ಮುಂದಿಟ್ಟು ದೈವಗಳ‌ ದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿದ್ದಾರೆ.ಸಿಕ್ಕ ಸಿಕ್ಕಲ್ಲಿ ಎಲ್ಲಾ ಕಡೆ ಕುಟುಂಬದ ದೈವಗಳನ್ನು ನಂಬುವ ಅಗಿಲ್ಲ.ಮುಡಿಪು ಕಟ್ಟುವ ಅಗಿಲ್ಲ.
ಒಂದೇ ಕಡೆ ನೆಲೆನಿಂತು ಕುಟುಂಬದ ದೈವಗಳನ್ನು,ಗತಿಸಿ ಹೋದ ನಮ್ಮ ಹಿರಿಯರನ್ನು ಸ್ಮರಿಸುವ ಒಂದು ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ.
ಕುಟುಂಬದಲ್ಲಿ ಅಜ್ಜ ಇದ್ದರೆ ಅಜ್ಜ,ಅಜ್ಜನ ಅನಂತರ ಮಾವ ಇದ್ದರೆ ಮಾಮ,ಅನಂತರ ಹಿರಿಯ ಅಕ್ಕನ ಹಿರಿಯ ಮಗ ದೈವಗಳ ಕಾರ್ಯಗಳನ್ನು ನಡೆಸುವ ಹಕ್ಕು ಹೊಂದಿರುವವ.ಅದಕ್ಕೆ ಹಿಂದಿನ ಕಾಲದ ಜನರು ಒಂದು ಗಾದೆಯನ್ನು ಹೇಳುತ್ತಾರೆ "ಮುಂಡಾಸುನು ತರೆಕ್ಕ್ ಕಟ್ಟೊಡು,ಕಾರುಗು ಕಟ್ಟುನ ಅತ್ತ್" ಅಂತ.ಅಂದ್ರೆ ಈ ಕಾರ್ಯಗಳನ್ನು ಎಲ್ಲಾ ಪ್ರಾಯದಲ್ಲಿ ಸಣ್ಣವರು ಮಾಡುವುದಲ್ಲ.ಹಿರಿಯರು ಮಾಡಬೇಕು.
ಕಿರಿಯರು ಅದಕ್ಕೆ ಸಂಪೂರ್ಣವಾಗಿ ಪ್ರೊತ್ಸಾಹ ಕೊಡುತ್ತ,ಮಾಡುವ ವಿಧಾನವನ್ನು ಕಳಿತು ಕೊಳ್ಳಬೇಕು.ಯಾಕೆಂದರೆ ಈ ಭೂಮಿಯಲ್ಲಿ ಯಾರು ಕೂಡ ದೀರ್ಘಾಯುಷ್ಯದ ಜನರಿಲ್ಲ,ಅಲ್ಪಾಯುಷ್ಯದ ಜನರು ಇರುವ ಇಲ್ಲಿ ಯಾರ ಜೀವನ ಎಷ್ಟು ದಿನ ಎಂದು ಹೇಳಲಾಗುವುದಿಲ್ಲ.ಯಾಜಮಾನ ಕಳೆದು ಹೋದರೆ ಅವನ ನಂತರದವ ಈ ಕಾರ್ಯಗಳನ್ನು ಮಾಡಲು ಸದೃಡನಿರಬೇಕು.ಎಲ್ಲಾ ವಿಚಾರಗಳು ಅವನಿಗೆ ತಿಳಿದಿರಬೇಕು. ಅದಕ್ಕಾಗಿ ಮುಂಚಿತವಾಗಿ ಬಂದು ನಿಂತು ಈ ಎಲ್ಲಾ ವಿಚಾರಗಳನ್ನು ಸಣ್ಣ ಪ್ರಾಯದ ಎಲ್ಲಾ ಕುಟುಂಬದ ಸದಸ್ಯರು ತಿಳಿದು ಕೊಳ್ಳಬೇಕು. ಮತ್ತೊಂದು ವಿಚಾರ ಅಂದರೆ ಊರಿಗೊಂದು ಕಟ್ಟು ಇರುವ ಈ ತುಲುನಾಡಿನಲ್ಲಿ ನಮ್ಮ ಕುಟುಂಬದ ಮನೆಯಲ್ಲಿ ನಡೆಯುವ ಕಾರ್ಯಗಳಿಗೂ ಮತ್ತು ನಮ್ಮ ಮನೆಯಲ್ಲಿ ನಡೆಯುವ ಕಾರ್ಯಗಳಿಗೂ ತುಂಬಾ ವ್ಯತ್ಯಾಸ ಇರಬಹುದು.ಅದಕ್ಕಾಗಿ ಅದನ್ನು ಚೆನ್ನಾಗಿ ತಿಳಿಯಲು ಕುಟುಂಬದ ಮನೆಗೆ ಮುಂಚಿತವಾಗಿ ಹೋಗಬೇಕು.ಅಲ್ಲಿನ ರೀತಿ ರೀವಾಜು ತಿಳಿದುಕೊಳ್ಳಬೇಕು.
ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು ನಾವು‌ ಪಾಲಿಸಿಕೊಂಡು ಬರಬೇಕು.
ಎಷ್ಟೋ ಸದಸ್ಯರು ತಮ್ಮ ಮೂಲ ಕುಟುಂಬದ ಮನೆ ಸಿಗದೇ ಹುಡುಕಾಟದಲ್ಲಿ ಕಂಗಾಲಾಗಿ ಹೋಗಿದ್ದಾರೆ.ಒಂದು ತಲೆಮಾರಲ್ಲಿ ಕುಟುಂಬದ ಕೊಂಡಿ ತಪ್ಪಿ ಹೋಗಿ, ಅದು ಮೂರು ತಲೆಮಾರು ದಾಟಿದ್ರೆ ಮತ್ತೆ ಹುಡುಕುವುದು ಕಷ್ಟ ಸಾದ್ಯ.ಅದಕ್ಕಾಗಿ ಕುಟುಂಬದ ಕೊಂಡಿಯನ್ನು ಯಾವತ್ತಿಗೂ ಮುರಿದು ಕೊಳ್ಳಬಾರದು.
ತುಳುನಾಡಿನಲ್ಲಿ ಸ್ವರ್ಗ ನರಕದ ಕಲ್ಪನೆ ಇಲ್ಲ(ಇತ್ತಿಚೆಗೆ ಬಂದಿದೆ) ಇಲ್ಲಿ ಆಳಿಯ ಕಟ್ಟಿನಲ್ಲಿ ಸತ್ತ ವ್ಯಕ್ತಿಯ ಉತ್ತರಕ್ರೀಯದಿಯನ್ನು ಮುಂಚೆ ನೀರನೆರಳು ಕಟ್ಟಿ "ಮುರಿಯೊ" ಎಂದು ಕೂಗಿ ಇನ್ನಿತ್ತರ ಕಾರ್ಯಗಳಲ್ಲಿ ಮುಗಿಸುವ ಕ್ರಮ.ಆನಂತರ ಕುಟುಂಬದ ಮನೆಯಲ್ಲಿ ಮಡಪಜೆ ಮತ್ತು ಹದಿನಾರು ಕೂಡಿಸುವ ಕ್ರಮ.ದೀಪಾವಳಿಯಂದು ಅ ಸತ್ತ ವ್ಯಕ್ತಿಗೆ ಕುಟುಂಬದ ಮನೆಯಲ್ಲಿ ಅವಲಕ್ಕಿ ಮತ್ತು ಅಗೆಲು ಹಾಕುವ ಕ್ರಮ.ಅದ್ದರಿಂದ ಅತ ಎಷ್ಟೇ ದೊಡ್ಡ ಬಂಗಲೆಯಲ್ಲಿ ಕುಳಿತ ಶ್ರೀಮಂತನಾದರೂ ಆತ ಸತ್ತಗ ಅತನ ಪ್ರೆತವನ್ನು ಹಂಚಿನ ಇಲ್ಲವೇ ಮನೆಯ ಮುಳಿಹುಲ್ಲಿನ ಹಳೆಯ ಕುಟುಂಬದ ಮನೆಗೆ ತಂದು ಕುಟುಂಬದ ಹಿರಿಯರ ಜತೆ ಸೇರಿಸುವ ಕ್ರಮ ನಮ್ಮದು.
ಇನ್ನು ಮುಡಿಪು ಇದು ಒಂದು ಕುಟುಂಬದಲ್ಲಿ ಒಂದೇ ಮುಡಿಪು ಎನ್ನುವ ಕ್ರಮ ಇದೆ.
ಒಂದು ವೇಳೆ ಕುಟುಂಬದ ಒಬ್ಬ ವ್ಯಕ್ತಿ ಮುಡಿಪಿಗೆ ಹಣ ಹಾಕದೇ ಇದ್ದರೆ ಅತ ಕುಟುಂಬದ ಸದಸ್ಯನಾಗಲು ಅನರ್ಹ.ಮತ್ತು ಆತ ಕುಟುಂಬದ ಪಾಲಿಗೆ ಸತ್ತ ವ್ಯಕ್ತಿ ಇದ್ದಂತೆ.ಅದ್ದರಿಂದ ಹಿರಿಯರು ತುಲುವರಿಗೆ ಕುಲ ದೇವರು ಯಾರು ಅಂದರೆ ತಿರುಪತಿ ತಿಮ್ಮಪ್ಪ ದೇವರು ಎನ್ನುತ್ತಿದ್ದರು.ಈ ದೇವರಿಗೆ ನಮ್ಮ ಕಡೆಯಿಂದ ಮುಡಿಪು ಹಣ ಎಂದು ಮೀಸಲು ಹಣವನ್ನು ಡಬ್ಬಿಯಲ್ಲೊ,ಬಿದಿರಿನ ವೊಂಟೆಯಲ್ಲೊ ಇರಿಸುತ್ತಿದ್ದಾರು.ಅದನ್ನು ಅಟ್ಟದಲ್ಲಿ ಜೋಪಾನವಾಗಿ ಇರಿಸುತ್ತಿದ್ದರು.
ಈ ಮುಡಿಪನ್ನು ದಾಸಯ್ಯರು ಬಿಟ್ರೆ ಯಾವೊಬ್ಬ ವ್ಯಕ್ತಿಗೂ,ಎಷ್ಟೇ ದೊಡ್ಡ ಬ್ರಾಹ್ಮಣ ಅರ್ಚಕನಿಗೂ ಮುಟ್ಟುವ ಮತ್ತು ಬಿಚ್ಚುವ ಅಧಿಕಾರ ಇಲ್ಲ.ವರ್ಷಕ್ಕೊಮ್ಮೆ ಕಾಲಾವಧಿ ಸಮಯದಲ್ಲಿ ದಾಸಯ್ಯರು ಬಂದು ಮುಡಿಪು ಬಿಚ್ಚಿ ತುಳಸಿ ಕಟ್ಟೆಯ ಎದುರಿಗೆ ಹರಿ ಸೇವೆ,ಮಣೆಪೂಜೆ ಕಾರ್ಯಕ್ರಮ ಮಾಡುವ ರೂಡಿ.ಇನ್ನೂ ಕೆಲವೊಂದು ಕಡೆ ಸೋಣ ಶನಿವಾರದಂದು ಮುಡಿಪಿಗೆ ಹಣ ತೆಗೆದು‌ ಇರಿಸುತ್ತಾರೆ.ಅದನ್ನು ಕಾಲಾವಧಿ ದಿನ ಕುಟುಂಬದ ಮನೆಗೆ ಕೊಂಡೊಗಿ ಮುಡಿಪಿಗೆ ಹಾಕುತ್ತಾರೆ. ಉಡುಪಿ ಭಾಗದಲ್ಲಿ ದೀಪಾವಳಿ ಸಮಯದಲ್ಲಿ‌ ಮುಡಿಪು ಬಿಚ್ಚುತ್ತಾರೆ.ಎಲ್ಲಾ ಕಡೆಯಲ್ಲಿ ಒಂದೇ ರೀತಿಯ ಕಟ್ ಕಟ್ಲೆ ಇರುವುದಿಲ್ಲ.
ಅದ್ದರಿಂದ ಹಿರಿಯರು ಯಾವ ರೀತಿ ಮಾಡಿಸಿಕೊಂಡು ಬಂದಿದ್ದಾರೊ ಅದೇ ರೀತಿಯಲ್ಲಿ ಮುಂದುವರೆಸಿ.
ಕುಟುಂಬದ ದೈವಗಳಿಗೆ ಬ್ರಹ್ಮಕಲಸ ಬೇಕೆ ಬೇಡವೇ ಎನ್ನುವುದು ಈಗ ಸಾಮಾನ್ಯವಾಗಿದೆ.
ಪ್ರಸ್ತುತ ಕಾಲದಲ್ಲಿ ಕುಟುಂಬದ ಮನೆಗಳು,ಕುಟುಂಬದ ಮನೆಗಳಾಗಿ ಇರದೇ ಚಾವಡಿ, ತರವಾಡು,ಟ್ರಸ್ಟ್, ಸಮಿತಿಗಳು ಎಂದು ನಾಮಾಂಕಿತ ಅಗಿವೆ.ಅಲ್ಲಿ ಯಾರು ವರ್ಷವೀಡಿ ಉಳಿದುಕೊಳ್ಳುವ ನಿಯಮ ಇಲ್ಲ.
ಕೂಡುಕುಟುಂಬದ ಯಾಜಮಾನ ಅಲ್ಲಿಲ್ಲ‌.ಅ ಸ್ಥಾನವನ್ನು ಗೌರವಾಧ್ಯಕ್ಷ ಎಂಬ ಸ್ಥಾನದಲ್ಲಿ ತುಂಬಿದ್ದಾರೆ.
ಮತ್ತು ಈಗೀಗ ಕುಟುಂಬದ ಮನೆಗಳಲ್ಲಿ ಗಡಿ ಅದ ವ್ಯಕ್ತಿಗಳು ಭಾರಿ ಅಪರೂಪ.ಹಾಗೂ ವರ್ಷದಲ್ಲಿ ಸಂಕ್ರಾಂತಿ ಮತ್ತು ಇನ್ನಿತರ ಕಾರ್ಯಕ್ರಮದಂದು‌ ಮಾತ್ರ ಚಾವಡಿ ಬಾಗಿಲು ತೆರೆಯುತ್ತಾರೆ.ಮತ್ತೆ ಇಡೀ ವರ್ಷ ಚಾವಡಿಗೆ ಬಾಗಿಲು ಬೀಗ.ಇಂತಹ ಪರಿಸ್ಥಿತಿಯಲ್ಲಿ ನಾವು ಇರುವಾಗ ಒಂದು ಕಡೆ ದೈವಗಳ ಚಾಕ್ರಿ ಮಾಡಲು ಹಿಂದೇಟು ಹಾಕುವ ಯುವಜನತೆ.ಕುಟುಂಬದ ಮನೆ ಎಂದರೆ ನಿರ್ಲಕ್ಷ್ಯ ಭಾವನೆ,
ಸಮಯದ ಕೊರತೆ ಎಂಬುದು ಈಗ ಎಲ್ಲಾರನ್ನು ಕಾಡುವ ವ್ಯಾಧಿ.ಇನ್ನು ನಮ್ಮ ಕೆಲವರಲ್ಲಿ
ದೈವಗಳ ಸರಿಯಾದ ಮಾಹಿತಿಯೆ ಇಲ್ಲ.
ಹಿಂದೆ ಹೆಚ್ಚಿನ ಕುಟುಂಬದ ಮನೆಯಲ್ಲಿ ಗಡಿ ಪಟ್ಟಿ ಅದವರು ಅರಸು ದೈವಗಳಿಗೆ ಪೂಪೂಜನೆ ಮಾಡುತ್ತಿದ್ದರು,ಕಲಸ ಕಟ್ಟುತ್ತಿದ್ದರು,ಶುದ್ದ ಹೋಮ ಇಡುತ್ತಿದ್ದರು. ಅದು ಅ ಕಾಲದಲ್ಲಿ ಒಂದು ರೀತಿಯ ಕ್ರಮ ಕಟ್ಟಲೆ ಕೂಡ ಅಗಿತ್ತು.ಆದರೆ ಈಗ ಒಂದೆರಡು ಜಾಗದಲ್ಲಿ‌ ಮಾತ್ರ ಅದು ಉಳಿದಿದೆ.
ಈಗೀಗ ಅರ್ಚಕರಿಂದ ಮಾಡಿಸಿದ್ರೆ ಎಲ್ಲಾವೂ ಸರಿ ಅಗುತ್ತೆ ಅನ್ನುವ ಅಭಿಪ್ರಾಯ ಎಲ್ಲಾ ಕುಟುಂಬಿಕರ ಒಕ್ಕೊರಲಿನ ಧ್ವನಿ. ಅದ್ದರಿಂದ
ಇಂದು ಅರ್ಚಕರು ಈ ಕೆಲಸ ಮಾಡುತ್ತಾರೆ.ನೆನಪಿರಲಿ ಯಾವುದೇ ಜಾತಿಯಲ್ಲಿರುವ್ಸ್ ಅರ್ಚಕನಾದರೂ ಅತ ಮಾಡುವುದು ದೇವತಾ ಕ್ರೀಯೆಯಲ್ಲಿ.ಅವನ ತಪ್ಪಿಲ್ಲ ಬಿಡಿ,ವೈಧಿಕ ಅರ್ಚನ ಪದ್ದತಿಯಲ್ಲಿ ಬ್ರಹ್ಮಕಲಸವು ಬರುತ್ತದೆ.ಹಾಗೆಯೇ ಕಲಸ ಕಟ್ಟುವ ಕ್ರಮ,ಹೋಮ ಇಡುವ ಕ್ರಮ ತುಲುವ ಪದ್ದತಿಯಲ್ಲೂ ಹಿಂದೆ ಇದ್ದದ್ದು ನಿಜ.ಆದರೆ 
ಜಿಜ್ಞಾಸೆ ಅಂದ್ರೆ ಅರಸು ದೈವಗಳಿಗೆ ಪೂಪೂಜಾನೆ ಮಾಡಲು ಅರ್ಚಕರಿಗೆ ಗಡಿಪಟ್ಟಿ ಅಗಿದೆಯೊ? ಅನ್ನೊದು.ಇಂತಹ ಯೋಚನೆಯನ್ನು ಒಮ್ಮೆ ಕೂಡ ನಾವು ಮಾಡಿಲ್ಲ.
ಇಂತಹ ತುಂಬಾ ಬದಲಾವಣೆಗಳು ಆಗಿರುವಾಗ,ಮತ್ತು ಇಂತಹ ಕಾರ್ಯಕ್ಕೆ ನಾವೇ ಅನುವು ಕೊಟ್ಟಿರುವಾಗ ಈ ಅವರು ಅವರ ವೈಧಿಕ ಕ್ರಮದಲ್ಲಿ ದೈವಗಳಿಗೆ ಬ್ರಹ್ಮಕಲಸ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅಭಿಪ್ರಾಯ.ನಾವು ಬದಲಾದರೆ ಮಾತ್ರ ಅದನ್ನು ಬದಲು ಮಾಡಬಹುದು.
ಹಿಂದೆ ಕುಟುಂಬದ ಜಾಗ ಕುಟುಂಬದ ಯಜಮಾನನ ಅಧೀನದಲ್ಲಿ ಇತ್ತು.ಅದು ಪರಂಪರಗತವಾಗಿ ಕುಟುಂಬದ ಸದಸ್ಯನಿಗೆ ಸೇರುತ್ತಿತ್ತು.ದೈವಗಳಿಗೆ ತಕ್ಕಮಟ್ಟಿನಲ್ಲಿ ಸೇವೆ ಕೊಟ್ಟರೂ ಸಂತೃಪ್ತಿ ಅಗುತ್ತಿತ್ತು.ಯಾರು ಆಡಂಭರಕ್ಕೆ ಮಣೆ ಕೂಡ ಹಾಕಿದ್ದಿಲ್ಲ.ಹಾಕಲು ಅವರಲ್ಲಿ ಅಷ್ಟೊಂದು ಅನುಕೂಲವೂ ಇರಲಿಲ್ಲ.ಈಗ ಅನುಕೂಲ ಇದ್ದವರು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ.ಇಂದು ಕಾಲ ಬದಲಾಗಿ ಕುಟುಂಬದ ಜಾಗ ಎಲ್ಲಾರಿಗೂ ಹರಿದು ಹಂಚಿ ಹೋಗಿದೆ. 
ದೈವಕ್ಕೆ ಹತ್ತು ಸೆನ್ಸ್,ಇಪ್ಪತ್ತು ಸೆನ್ಸ್ ಜಾಗ ಉಳಿದಿರುತ್ತದೆ.ಕೆಲವು ಕಡೆ ಜಾಗ ಖರೀದಿಸಿ ಕುಟುಂಬದ ದೈವಗಳನ್ನು ನಂಬಿದವರೂ ಇದ್ದಾರೆ.
ಆದರೆ ಈಗಿನ ಕಾಲದ ಅಡಂಭರದ ಖರ್ಚುಗಳಲ್ಲಿ,ಕಲಸ ಉತ್ಸವದ ಕಾರ್ಯಕ್ರಮಗಳಿಂದ ಕುಟುಂಬದ ಮನೆಯಲ್ಲಿ(ಬಂದವರ ಮಕ್ಕಳಿರಲಿ,ಕುಟುಂಬದ ಮಕ್ಕಳಿರಲಿ) ಇದ್ದವನಿಗೆ ಯಾವುದೇ ಒಂದೆರಡು ದೈವಕ್ಕೆ ಸೇವೆ ಕೊಡುವುದು ಕೂಡ ಭಾರಿ ಕಷ್ಟ.ಯಾಕೆಂದರೆ ಮೂಲ ಪರಂಪರೆಯ ಪದ್ದತಿಯನ್ನು ಬಳಸಲು ಈಗಿನ ಕಾಲದಲ್ಲಿ ಯಾರಿಗೂ ಇಷ್ಟವಿಲ್ಲ.ಇಷ್ಟವಿದ್ದರೂ ಅ ಪದ್ದತಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡವರೂ ಯಾರು ಇಲ್ಲ.
ಇಂತಹ ಪ್ರಕರಣದಿಂದಾಗಿ ಎಷ್ಟೋ ಕುಟುಂಬದ ಮನೆಗಳು ಈಗಲೂ ಅಜೀರ್ಣ ಅವಸ್ಥೆಯಲ್ಲಿ ಇದೆ.ಇನ್ನೂ ಕೆಲವು ಕಡೆ ಅರ್ಧಂಬರ್ಧವಾಗಿ ನಡೆಯುತ್ತವೆ.ಇನ್ನು ಕೆಲವು ಕುಟುಂಬದ ಮನೆಗಳಲ್ಲಿ ವ್ಯಾಜ್ಯಗಳು ನಡೆಯುತ್ತಲೇ ಇವೆ.
ಅದ್ದರಿಂದ ಕುಟುಂಬ ಸದಸ್ಯರು,ತಮ್ಮ ಕುಟುಂಬದ ಅಸ್ತಿ ಪಾಲಿನ ಮೇಲೆ ಕಣ್ಣಿಡದೇ ಎಲ್ಲಾ ಕುಟುಂಬಿಕರ ಶ್ರೇಯಸ್ಸಿಗಾಗಿ ವಂತಿಗೆ ಕೊಟ್ಟು ಸಹಕರಿಸುವುದು ಈಗಿನ ಕಾಲದಲ್ಲಿ ಅತೀ ಅವಶ್ಯಕ.ಯಾಕೆಂದರೆ ನಾವು ನಮ್ಮ ದೈವ ದೇವರಿಗೆ ಕಿಂಚಿತ್ತು ಮಟ್ಟದಲ್ಲಿಯಾದರೂ ಸೇವೆ ಕೊಟ್ಟರೆ ನಮಗೆ ಮತ್ತೊಂದು ಕಡೆ ಅದರ ಅನುಗ್ರಹವನ್ನು ದೈವ ದೇವರು ಪಾಲಿಸುತ್ತಾರೆ. ಮತ್ತೊಂದು ವಿಚಾರ ಅಂದ್ರೆ ಕುಟುಂಬದವರಿಗೆ ಮತ್ತು ಕುಟುಂಬದ ದೈವಗಳಿಗೆ ಮೋಸ ಮಾಡಿ ಅದು ಕುಟುಂಬದ ವ್ಯಕ್ತಿ ಅಗಿರಲೀ ಇಲ್ಲವೇ ಹೊರಗಿನ ವ್ಯಕ್ತಿ ಅಗಿರಲಿ ದೈವ ದೇವರ ಆಸ್ತಿ ಅನುಭವಿಸಿದವರು ಯಾರು ಎಲ್ಲೂ ಉದ್ದಾರ ಆಗಿದ್ದೂ ಕಾಣುತ್ತಿಲ್ಲ.

ಕುಟುಂಬದ ಮನೆಯಲ್ಲಿ ನಿಮ್ಮ ಯಾವ ಸೇವೆ?
ಯಾರೊ ಜ್ಯೊತೀಷ್ಯ,ಮಂತವಾದಿ ನಿಮ್ಮ ಸಮಸ್ಯೆಗೆ ಪರಿಹಾರ ಹೇಳುತ್ತಾರೆ ನಿಮ್ಮ ಕುಟುಂಬದ ಮನೆಗೆ ಘಂಟೆ ಕೊಡಿ,ಮಣಿ ಕೊಡಿ,ಆರತಿ ತಟ್ಟೆ ಕೊಡಿ,ಅದು ಕೊಡಿ,ಇದು ಕೊಡಿ ಎಂದು, 
ಆದರೆ ಯಾವು ಯಾವುದೋ ಉಪಯೋಗ ಅಗದೇ ಇರುವ ವಸ್ತುಗಳನ್ನು ಹರಕೆಯ ಸೇವಾ ರೂಪದಲ್ಲಿ ನಿಮ್ಮ ಕುಟುಂಬದ ಮನೆಗೆ ಕೊಡಬೇಡಿ. ಯಾಕೆಂದರೆ ನಮ್ಮ ದೈವಗಳು‌ ಘಂಟೆ,ಶಂಖನಾದಕ್ಕೆ,ತಟ್ಟೆ ಅರತಿಗೆ ತಲೆತೂಗುವ ಶಕ್ತಿಗಳು ಅಲ್ಲ.ಅವುಗಳು ನಮ್ಮ ನಿರ್ಮಲಾ ಭಕ್ತಿಗೆ ಮತ್ತು ಯಜಮಾನನ ಮದಿಪಿಗೆ,ನಾವು ಅಲ್ಲಿ ಮಾಡುವ ಕೆಲಸ ಕಾರ್ಯದ ಸೇವೆಗೆ ತಲೆತೂಗುವ ದೈವಗಳು.
ಹಾಗೆ ನಿಮಗೆ ಕೊಡಲು ಮನಸ್ಸಿದ್ದರೆ ಕುಟುಂಬದ ಮನೆಯಲ್ಲಿ ಕುಟುಂಬದ ಕಾರ್ಯಕ್ರಮದಲ್ಲಿ  ಉಪಯೋಗ ಮತ್ತು ಉಪಕಾರ ಆಗುವಂತಹ ವಸ್ತುಗಳನ್ನು(ಪಾತ್ರೆಗಳು,ಅಡುಗೆ ಸಾಮಾಗ್ರಿಗಳು, ಮುಂತಾದ) ನೀಡಿರಿ.
ಹಾಗೆಯೇ ವರ್ಷದ ಒಂದು ಭಾರಿ ನಮ್ಮ ಹೆಸರಲ್ಲಿ ಕುಟುಂಬದ ನಾಗ ಬೆರ್ಮರಿಗೆ ತನು ಎರೆಯುವುದು,ತಂಬಿಲ ಕಟ್ಟುವುದು.
ಕುಟುಂಬದ ವೆಂಕಟರಾಮನ ದೇವರ ಮುಡಿಪುವಿಗೆ ಹುಂಡಿ ಹಣ ಹಾಕುವುದು.
ಕುಟುಂಬದ ಹೆಚ್ಚಿನ ಮನೆಯಲ್ಲಿ ಕಲ್ಲುರ್ಟಿ ಪಂಜುರ್ಲಿ ಮತ್ತು ರಾವುಕುಲೆ ದೈವ ಕುಟುಂಬದ ದೈವಗಳಾಗಿ ನಮಗೆ ಕಾಣ ಸಿಗುತ್ತವೆ. ಹಾಗಿದ್ದರೆ ಕಲ್ಲುರ್ಟಿಗೆ ಹೆಣ್ಣು ಹೆಂಟೆ ಕೋಳಿ (ಲಾಕಿ ಪೆರಡೆ)
ಕುಟುಂಬದ ಪಂಜುರ್ಲಿಗೆ ಹುಂಜ ಕೋಳಿ.
ರಾವು ಕುಲೆಗೆ(ಈಗ ರಾವುಗುಳಿಗ ಸಂಭೊದಿಸುತ್ತಾರೆ) ಒಂದು ಹುಂಜ ಕೋಳಿ. ಹಿರಿಯರಿಗೆ ಅಗೆಲು ಸಮ್ಮನಕ್ಕೆ ಒಂದು ಕೋಳಿ.
ಉಳಿದಂತೆ ಇತರ ದೈವಗಳಿಗೆ ನಿಮ್ಮ ನಿಮ್ಮ ಕುಟುಂಬದಲ್ಲಿ ಪದ್ದತಿಯಂತೆ ನಡೆದು ಬಂದ ರೀತಿಯಲ್ಲಿ  ಕೋಳಿ ಅಕ್ಕಿ ತೆಂಗಿನಕಾಯಿ ಕೊಡುವ ಸೇವೆ ನೀಡುವುದು.
ಉಳಿದಂತೆ ಜಾಗದ ಧರ್ಮಚಾವಡಿಯಲ್ಲಿರುವ ದೈವಗಳಿಗೆ ಇಷ್ಟನು ಭಕ್ತಿಯ ಸೇವೆ ಕಡ್ಡಾಯವಾಗಿ ಕೊಡಬೇಕು.
ವರ್ಷದಲ್ಲಿ ಒಂದು ಸಾರಿ ಚೌತಿ ಹಬ್ಬ,ದೀಪಾವಳಿಗೆ ಬಳೆಕ್ಕಿ ಮರ ಹಾಕುವ ಹಬ್ಬ ಇದ್ದರೆ ಇವಕ್ಕೆ ನಿಮ್ಮಿಂದ ಆಗುವ ಸೇವೆ ನೀಡಿರಿ‌.
ಕುಟುಂಬದ ಕಿರಿಯರು,ಎಲ್ಲಾ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದು ಮತ್ತು ಬಡ ಜೀವಗಳಿಗೆ ನಮ್ಮ ಕೈಯಲ್ಲಿ ಆಗುವಷ್ಟು ಸಣ್ಣ ಮಟ್ಟಿನ ಧನಸಹಾಯ ನೀಡುವುದು,ಅವರ ಆಶೀರ್ವಾದ ಪಡೆಯುವುದು ಒಳ್ಳೆಯದು.
ಇದೊಂದು ಕುಟುಂಬದ ಮನೆಯಲ್ಲಿ ನಡೆದುಕೊಂಡು ಬಂದ ಹಳೆಯ ಸಂಪ್ರದಾಯ.
ಕುಟುಂಬದ ಮನೆ ಹೇಗಿರಬೇಕು ಎಂದರೆ
ಕುಟುಂಬದ ಮನೆ ಎಂಬುವುದು  ನಮಗೆ ಸಂಸ್ಕಾರ, ಸಂಸ್ಕೃತಿ,ಶಿಸ್ತು, ಸಂಪ್ರದಾಯ ಕಳಿಸುವ ಕೇಂದ್ರವಾಗಬೇಕು.ಆಳಿದು ಹೋದ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು ಅಚಾರ ವಿಚಾರವನ್ನು ಮತ್ತೆ ನೆನಪಿಸುವ ತಾಣವಾಗಬೇಕು.
ಹಿಂದಿನ ಯಜಮಾನ ಪದ್ದತಿ ಈಗ ಇಲ್ಲದೇ ಇರುವುದರಿಂದ ಕುಟುಂಬದ ಮನೆಯ ನಾಯಕತ್ವ ವಹಿಸಿಕೊಂಡ ಹಿರಿಯ ವ್ಯಕ್ತಿ  ಸಹಿಷ್ಣು ಆಗಿರುಬೇಕು. ಎಲ್ಲಾರನ್ನು ಜತೆಯಾಗಿ ಒಗ್ಗೂಡಿಸಿಕೊಂಡು ಹೋಗುವ ಮನೊಧರ್ಮ ಇರಬೇಕು.ಎಲ್ಲಾರೊಂದಿಗೆ ಪ್ರೀತಿ ಪಾತ್ರದಿಂದ ಇದ್ದರೆ ತುಂಬಾ ಉತ್ತಮ.ಸಹಬಾಳ್ವೆ ಅವನಿಗೆ ತಿಳಿದಿರಬೇಕು.ಒಂದು ಕುಟುಂಬದ ಮನೆಯಲ್ಲಿ ಬಡವ ಶ್ರೀಮಂತ ಎರಡು ವರ್ಗದ ಜನರೂ ಇರುತ್ತಾರೆ.ಹಾಗೆ ಇರುವಾಗ ಯಾರಿಗೂ ತಾರತಮ್ಯ ಮಾಡದೇ, ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿದರೆ ತುಂಬಾ ಉತ್ತಮ.ವಂತಿಗೆ ವಿಚಾರದಲ್ಲಿ ಈ ಇಬ್ಬರನ್ನು ಯಾವತ್ತಿಗೂ ಒಂದೇ ತಕ್ಕಡಿಯಲ್ಲಿ ತೂಗಬಾರದು.
ಅವನ ಅನುಕೂಲ ನೋಡಿ ವಂತಿಗೆ ಬರೆಯಬೇಕು.
ಕುಟುಂಬಿಕರ ಕೈಯಿಂದ ಕೇವಲ ಹಣವಂತಿಗೆ ಪಡೆದು ದೈವ ದೇವರ ಕಾರ್ಯವನ್ನು ಗಮ್ಜಾಲ್ ಮಾಡಿ,ಕೈತೊಳೆದುಕೊಂಡು ಕುಳಿತು ಮತ್ತೆ ಬರುವ ಕಾಲಾವಧಿ ಉತ್ಸವಕ್ಕೆ ವಂತಿಗೆ ಸಂಗ್ರಹಕ್ಕೆ ಕಾದು ಕುಳಿತರೆ ಕುಟುಂಬದ ಮನೆಗೆ ಬರುವ ಕುಟುಂಬಿಕನ ಆಸಕ್ತಿಯೂ ಕುಂಟಿತ ಅಗುತ್ತದೆ.ವರ್ಷ ಇಡೀ ಕುಟುಂಬದ ಯುವಸದಸ್ಯರನ್ನು ಒಗ್ಗೂಡಿಸಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ, ಕ್ರೀಯಾಶೀಲವಾಗಿದ್ದರೆ ತುಂಬಾ ಉತ್ತಮ.ಕುಟುಂಬದ ಮನೆಯನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು.
ಹಾಗೆಯೇ ಬಂಧುಗಳಲ್ಲಿ ಒಂದು ವಿನಂತಿ ಏನೆಂದರೆ ಕುಟುಂಬದ ಮನೆ ಎಂಬುವುದು
 ಪ್ರತಿಯೊಬ್ಬ ಕುಟುಂಬಿಕನು ಒಂದು ದಿನ ಕುಟುಂಬದ ಮನೆಗೆ ಬಂದು ಕೈಮುಗಿದು ಅಲ್ಲಿನ ದೃಶ್ಯಗಳನ್ನು ಮೊಬೈಲ್ ವಿಡಿಯೋ ತೆಗೆದುಕೊಂಡು ಸ್ಟೆಟಸ್ ಹಾಕುವ ತಾಣ ಅಗಬಾರದು.ಅದು ನಮ್ಮ ಹಿರಿತನವನ್ನು ಉಳಿಸಿಕೊಂಡು ನಮ್ಮ ಕುಟುಂಬದ  ಮನೆತನದ ಗೌರವ ಇತಿಹಾಸ ಹಿನ್ನಲೆಯನ್ನು ಉಳಿಸಿಕೊಂಡು ಬಂದ ದೇಗುಲವಾಗಬೇಕು.
ನಾವು ಈಗಲೂ ಗಮನಿಸಿದಬಹುದಾದ ಸಂಗತಿ ಏನೆಂದರೆ,
ಕೆಲವೊಬ್ಬರಿಗೆ ಕುಟುಂಬದ ಸಿಗದೇ ಹುಡುಕಾಟದಲ್ಲಿ ಇರುವವರನ್ನು ಕಂಡಿದ್ದೆವೆ.
ಕೆಲವೊಬ್ಬರಿಗೆ ಕುಟುಂಬದ ಮನೆ ಇದ್ದರೂ ಅಸ್ತಿ ಕಲಹದಲ್ಲಿ ಅ ಮನೆ ಅಜೀರ್ಣ ಸ್ಥಿತಿಯನ್ನು ಹೊಂದಿರುವುದನ್ನು ನೋಡಿದ್ದೆವೆ.
ಕುಟುಂಬದ ಮನೆ ಇದ್ದು ಕುಟುಂಬಿಕರು ಇಲ್ಲದೇ ಅನಾಥವಾದ ಕುಟುಂಬದ ಮನೆಯನ್ನು ಕಂಡಿದ್ದೆವೆ.
ಕುಟುಂಬದ ಮನೆ ಮತ್ತು ಕುಟುಂಬಿಕರು ಎರಡು ಇದ್ದು ಅವರು ಬಡವರಾಗಿ,ಅನಾನುಕೂಲವಂತರಾಗಿ ಇದ್ದೂ,ಯಾವುದೊ ಕಾರಣದಿಂದ ಅಲ್ಲಿ ದೈವಗಳು ಅಸ್ತವ್ಯಸ್ತತೆ ಇರುವುದನ್ನು ಕಾಣುತ್ತೇವೆ.
ಕುಟುಂಬದ ‌ಮನೆ ಇದ್ದು ಅಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುವಾಗ ನಾನು ಹೋಗದಿದ್ದರೂ,ನಾನಗ್ಯಾವ ದೈವ ಭಾದೆಯೂ ಇಲ್ಲ ಎಂದು ಮನೆಯಲ್ಲಿ ಕುಳಿತ ಕುಟುಂಬಿಕರನ್ನು ಕಾಣುತ್ತೇವೆ.
ಕುಟುಂಬದ ಮನೆ ಇದ್ದು, ಹಣವಂತರಿದ್ದೂ,ಅಗರ್ಭ ಶ್ರೀಮಂತರಿದ್ದೂ ಅ ಕಡೆ ತಲೆ ತಿರುಗಿಸಿ ನೋಡದವರನ್ನು ಕೂಡ ನಾವು ಕಾಣಬಹುದು.
ಅದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಇರುವವರ ನಡುವೆ ನಮಗೆ ಇರುವ ಕುಟುಂಬದ ಮನೆಗೆ ತಪ್ಪಾದೇ  ಬನ್ನಿ,ದೈವ ದೇವರ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು,ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗಿ.
ದೈವಗಳ ಬಗ್ಗೆಯೂ,ತಮ್ಮ ಕುಟುಂಬದ ಹಿನ್ನಲೆಯ ಬಗ್ಗೆಯೂ ಹಿರಿಯರಲ್ಲಿ ಚೆನ್ನಾಗಿ ತಿಳಿದುಕೊಂಡು ದೈವ ದೇವರ ಮತ್ತು ಕುಟುಂಬದ ಗುರುಕಾರ್ನವರ ಅನುಗ್ರಹಕ್ಕೆ ಪಾತ್ರರಾದ್ರೆ ಮಾತ್ರ ಕುಟುಂಬದ ಮನೆ ಹಳೆಯ ಕಾಲದಲ್ಲಿದ್ದ ಘನತೆ,ಗೌರವದಿಂದ ಮತ್ತು ಕುಟುಂಬದ ಕಾರ್ಯಕ್ರಮ ಸಹಬಾಳ್ವೆಯಿಂದ ಮುನ್ನಡೆಯುತ್ತದೆ.
🙏🏽🙏🏽🙏🏽🙏🏽
Read Post | comments

SUDDI

tuluworld

TULUWORLD CHANNEL

Popular Posts

ANAVARANA

KATHE

PADHO-KABITHE

BARAVU

 

Copyright © 2011 Tulu World - All Rights Reserved