Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

JILLA SUDDI ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
JILLA SUDDI ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ತುಳುನಾಡು ಮತ್ತು ಕಳರಿ ಮೇ 24ರಂದು ಕಟೀಲಿನಲ್ಲಿ ಚರ್ಚಾ ಗೋಷ್ಠಿ


ಕಟೀಲು: ಜಗತ್ತಿನ ಅತ್ಯಂತ ಪ್ರಾಚೀನ ಯೋಧಕಲೆ 'ತುಳುನಾಡು ಕಲರಿ' ಪುನರುಜ್ಜೀವನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ತುಳುವರ್ಲ್ಡ್ ಫೌಂಡೇಶನ್ ಹಾಗೂ ತುಳುವೆರೆ ಆಯನ ಕೂಟ (ರಿ) ಕುಡ್ಲ ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜ್ ಕಟೀಲ್ ಇವರ ಸಂಯುಕ್ತ ಆಶ್ರಯದಲ್ಲಿ "ತುಳುನಾಡ ಕಲರಿ ಮರುಸೃಷ್ಟಿ ಗೊಳಿಸುವ ಕಾರ್ಯಕ್ರಮಗಳ ಭಾಗವಾಗಿ "ತುಳುನಾಡು ಮತ್ತು ಕಲರಿ" ವಿಷಯಾಧಾರಿತ ಚರ್ಚಾ ಸಮ್ಮೇಳನ ಮೇ 24ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಪದವಿ ಕಾಲೇಜು, ಕಟೀಲಿನಲ್ಲಿ ನಡೆಯಲಿದೆ.

ಪದ್ಮಶ್ರೀ ಡಾ. ಹಾಸನ್ ರಘು, ಬಹುಭಾಷಾ ಚಿತ್ರಗಳ ಸಾಹಸ ನಿರ್ದೇಶಕರು ಹಾಗೂ ಭಾರತೀಯ ಸ್ವದೇಶಿ ಯೋಧಕಲೆಗಳ ಗುರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪೂಜ್ಯ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ, ತುಳುವರ್ಲ್ಡ್ ಫೌಂಡೇಶನ್ ಗೌರವ ಅಧ್ಯಕ್ಷರು, ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಅನುವಂಶಿಕ ಟ್ರಸ್ಟಿ ಶ್ರೀ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಪಾಲ್ಗೊಳ್ಳಲಿದ್ದಾರೆ.

ಚರ್ಚಾ ಗೋಷ್ಠಿಯಲ್ಲಿ ಭಾಗವಹಿಸುವ ತಜ್ಞರುಗಳಾದ ಡಾ. ಸತೀಶ್ ಸಿ.ಪಿ., ವಡಗರ – ಯೋಧಕಲೆ ಸಂಶೋಧಕರು, ಶ್ರೀ ಮಹಿತನ್ ಕೆ., ವಡಗರ – ತುಳುನಾಡ ಕಲರಿ ತಜ್ಞ, ಡಾ. ಸಿ. ಗಂಗಾಧರನ್, ಕಣ್ಣೂರು, ಕಳರಿ ನಿಘಂಟು ಮತ್ತು ರಾಮಾಯಣದಲ್ಲಿ ಯೋಧಕಲೆ ಗ್ರಂಥ ಕರ್ತೃ, ಡಾ. ಧನ ಮಹೇಶ್ ಗುರುಗಳು, ಪೂರ್ವಾಚಾರ್ಯ ಕಳರಿ ಮತ್ತು ಮರ್ಮ ಚಿಕತ್ಸಕ ಮಂಗಳೂರು, ಶ್ರೀ ಉಮೇಶ್ ಗೌಡ ಮಾಡತೆಲ್,  ತುಳುನಾಡ ಕಲರಿ ಸಂಶೋಧಕರು ಮೊದಲಾದವರು ಈ ಕಾರ್ಯಕ್ರಮದಲ್ಲಿ ತುಳುನಾಡ ಕಲರಿ  ಕಲೆಯ ಬಗ್ಗೆ ಚಿಂತನ-ಮಂಥನ ನಡೆಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಅಧ್ಯಕ್ಷರು ತುಳುವರ್ಲ್ಡ್ ಫೌಂಡೇಶನ್ ಕಟೀಲು, ಡಾ. ವಿಜಯಾ ವಿ., ಪ್ರಾಂಶುಪಾಲರು, ಎಸ್‌ಡಿಪಿಟಿ ಪದವಿ ಕಾಲೇಜು, ಕಟೀಲು, ಶ್ರೀಮತಿ ಶಮೀನ ಆಳ್ವ ಅಧ್ಯಕ್ಷರು, ತುಳುವೆರೆ ಆಯನ ಕೂಟ (ರಿ), ಡಾ. ರಾಜೇಶ್ ಆಳ್ವ ನಿರ್ದೇಶಕರು, ತುಳುವರ್ಲ್ಡ್ ಫೌಂಡೇಶನ್  ಮೊದಲಾದವರು ಉಪಸ್ಥಿತರಿರುವರು.

ತುಳುನಾಡು ಕಲರಿ ತುಳು ನಾಡಿನ ಪುರಾತನ ಪರಂಪರೆಯ ಯುದ್ಧ ಕೌಶಲ್ಯ, ಸ್ವರಕ್ಷಣೆ, ಮರ್ಮ ಚಿಕಿತ್ಸೆ, ಗಿಡಮೂಲಿಕೆ ಔಷಧಗಳು ಇತ್ಯಾದಿಗಳನ್ನೊಳಗೊಂಡ  ಅತ್ಯಪೂರ್ವ ವಿದ್ಯೆ. ತುಳುನಾಡ ಕಳರಿ ಹಲವು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ.  ಅದರಲ್ಲಿ ಪ್ರಮುಖವಾದದ್ದು ದೈಹಿಕ ವಿದ್ಯೆ, ಮನಶಾಸ್ತ್ರ ವಿದ್ಯೆ, ಸಮರ ವಿದ್ಯೆ, ಮರ್ಮ ಚಿಕಿತ್ಸೆ ಮತ್ತು ಗಿಡಮೂಲಿಕೆ ಚಿಕಿತ್ಸೆ.  ಜಗತ್ತಿನ ಅತ್ಯಂತ ಪುರಾತನ ಯೋಧಕಲೆಗಳಲ್ಲಿ ಒಂದು. ಇದರ ಬೇರುಗಳು ಪ್ರಾಚೀನ ತುಳುನಾಡಿನ ಭಾಗವಾದ ಕಣ್ಣೂರು, ವಡಕರ, ವಯನಾಡು, ದಕ್ಷಿಣ ಕನ್ನಡ ಭಾಗಗಳನ್ನು  ಒಳಗೊಂಡಿವೆ. 

ಇದು ಕೇವಲ ಯುದ್ಧ ಕಲೆ ಅಲ್ಲ – ದೀರ್ಘಕಾಲದ ನೋವು, ಮಾನಸಿಕ ಆರೋಗ್ಯ, ರೋಗನಿರೋಧಕ ಶಕ್ತಿ ಇತ್ಯಾದಿಗಳ ಮೇಲೂ ಪೋಷಕ ಪರಿಣಾಮವಿರುವ ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿದೆ. ಮರ್ಮಚಿಕಿತ್ಸೆಯು ದೇಹದ 108 ಪ್ರಮುಖ ಬಿಂದುಗಳನ್ನು ಅಧ್ಯಯನ ಮಾಡುವ ಮೂಲಕ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ.

ಪುನರುಜ್ಜೀವನದ ಅವಶ್ಯಕತೆ: ಕಲರಿ ಈಗ ತನ್ನ ಜನ್ಮಭೂಮಿಯಲ್ಲಿ ಸಂಪೂರ್ಣ ಕಣ್ಮರೆಯಾಗಿದ್ದು, ಈಗ ಅದು ಪುನಃಜೀವಂತಗೊಳ್ಳಬೇಕಾದ ಸಮಯ ಬಂದಿದೆ. ಗರಡಿಗಳು ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿದ್ದು, ಶ್ರೇಷ್ಠ ಯೋಧಕಲೆಯ ಜ್ಞಾನವೂ ಜನಜಾಗೃತಿಯಿಂದ ಮರೆಯಾಗುತ್ತಿದೆ. ಈ ಅತ್ಯಪೂರ್ವ ವಿದ್ಯೆಯನ್ನು ಮರು ಜೀವಗೊಳಿಸಿದರೆ 

ನಮ್ಮ ಯುವಜನತೆಗೆ ಶಿಸ್ತು, ದೇಶಭಕ್ತಿ ಹಾಗೂ ಉದ್ಯೋಗದ ದಾರಿ ಕಲರಿಯ ಮೂಲಕ ತೆರೆದುಕೊಳ್ಳಬಹುದು. ಸಮುದಾಯ ಆರೋಗ್ಯ, ಪರ್ಯಾಯ ಸ್ಥಳೀಯ ಚಿಕಿತ್ಸಾ ಪದ್ಧತಿ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆ. 

ಈ ನಿಟ್ಟಿನಲ್ಲಿ ತುಳುವರ್ಲ್ಡ್ ಫೌಂಡೇಶನ್ ಈ ಕಲೆಗಳನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ. ಆರ್ಕೈವ್ ಸಂಶೋಧನೆ, ಮೌಖಿಕ-ಲಿಖಿತ ದಾಖಲೆಗಳ ಸಂಗ್ರಹ, ತರಬೇತಿ ಶಿಬಿರಗಳು, ಕಲರಿ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ ಮುಂತಾದ ಯೋಜನೆಗಳನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದೆ.


ಈ ಮಹತ್ಕಾರ್ಯಕ್ಕೆ ಸಕಲ ಕಲಾಪ್ರೇಮಿಗಳು, ಕ್ರೀಡಾಪಟುಗಳು, ಸಾಹಸ ಕಲಾವಿದರು, ಸಂಶೋಧಕರು ಹಾಗೂ ಯುವ ಸಮುದಾಯದವರನ್ನು ಈ ಮಹತ್ವದ ಚರ್ಚಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹಾರ್ದಿಕವಾಗಿ ಆಹ್ವಾನಿಸಲಾಗಿದೆ ಎಂದು ತುಳುವರ್ಲ್ಡ್ ಫೌಂಡೇಶನ್ ನ ಪ್ರಧಾನ ಸಂಚಾಲಕರಾದ ಪ್ರಮೋದ್ ಸಪ್ರೆ ಅವರು ತಿಳಿಸಿದ್ದಾರೆ

Read Post | comments

ತೆನಸೇ ಮರ್ದ್ - ಕುಡುಅರಿ ( ಹುರುಳಿ )

ಕುಡು ತುಳುವೆರೆನ ರಡ್ದನೇ ಅರಿ ಅಂಚಾದೇ  ಕುಡುನು ಕುಡುಅರಿ ಪಂಡ್‌ದ್ ಲೆಪ್ಪುವೆರ್. ಅರಿ ಪಂಡ ಜೀವಸತ್ವ ಇತ್ತಿನವು, ಅವು ಇಜ್ಯಾಂದೆ ಬದ್ಕೆರೆ ಬಲ್ಲಿ ಪಂಡ್ದ್ ಅರ್ಥ.

ದಿನಲಾ ನಿಯಮಿತವಾದ್ ಕುಡುನ್ ತಿನ್ಪುನ  ಅಂಚನೆ ಬಳಕೆ ಮಲ್ಪುನಗ ಮಸ್ತ್ ಲಾಬೊಲು ಉಂಡು. ಆಯುರ್ವೇದೊಡುಲಾ ಉಂದು ಉಲ್ಲೇಖ ಉಂಡು, ಬೊಕ್ಕ ಉಂದೆನ್ ಸೇವನೆ ಮಲ್ಪುನಗ ಬೇತೆ ಬೇತೆ ಸೀಕ್ ಲೆನ್ ತಡೆಯೆರೆ ಸಾಧ್ಯೊ ಆಪುಂಡು. 

ನಮ ನಮ್ಮ ತಿನಸ್ - ಆಹಾರೊಡು ಮಸ್ತ್ ಬಗೆತ ಧಾನ್ಯೊಲೆನ್ ಸೇವನೆ ಮಲ್ಪುನವು ಸಹಜ. ಉಂದೆಟ್ ಉಪ್ಪುನ ಪೋಷಕಾಂಶೊಲು ಶರೀರೊಗು ಬಾರಿ ಎಡ್ಡೆ ಮಾತ್ರ ಅತ್ತಂದೆ ಸೀಕ್‌ರ್ದ್‌ಲಾ ರಕ್ಷಣೆ ಕೊರ್ಪುಂಡು. ಕೆಲವು ನಿರ್ದಿಷ್ಟವಾಯಿನ ಧಾನ್ಯೊಲೆನ್  ಪವಾಡದ ತಿನಸ್ ಪಂಡ್ದ್ ಲೆಪ್ಪುವೆರ್. ಅಂಚಿನ ಒಂಜಿ ಧಾನ್ಯ ಪಂಡ ಕುಡು. ಅಂಚಾದೇ ದುಂಬುದ ಕಾಲೋಡು ದೈವ ದೇಬೆರೆ ಸಾನೊಲೆಡ್ ಕುಡುನು ಪ್ರಸಾದವಾದ್ ಕೊರೊಂದಿತ್ತೆರ್. 

ಆಯುರ್ವೇದದ ಪ್ರಕಾರ ಕುಡುಟು ಕನೆರ್ ರಸ ಉಪ್ಪುಂಡು, ಉಂದೆನ್ ತಿಂದಿ ಬುಕ್ಕೊ ಪುಳಿ ರುಚಿ ಬರ್ಪುಂಡು. ಉಂದು ಶರೀರೊಡು ಉಷ್ಣೊನು ಸೃಷ್ಟಿ ಮಲ್ಪುಂಡು. ಕಫ ಬೊಕ್ಕ ವಾತನ್ ಕಮ್ಮಿ ಮಲ್ಪುಂಡು ಬೊಕ್ಕ ಪಿತ್ತ ಬೊಕ್ಕ ನೆತ್ತರ್ ವರ್ಧನೆ ಮಲ್ಪುಂಡು. ಕುಡುಟು ಪ್ರೋಟೀನ್ ಬೊಕ್ಕ ಪೋಷಕಾಂಶೊಲು ಎಚ್ಚ ಉಪ್ಪುಂಡು, ಬೊಕ್ಕ ಬೆಂದ್ ದ್  ಬಚ್ಚಿದ್ ಉಪ್ಪುನಕುಲು ಉಂದೆನ್ ಸೇವನೆ ಮಲ್ತ್ಂಡ ಬಚ್ಚೆಲ್ ಕಮ್ಮಿ ಆಪುಂಡು.

  • ಉಂದೆನ್ ಆಯುರ್ವೇದೊಡು ಅಸ್ಮರಿ ಛೇದಕ ಪನ್ಪೆರ್. ಮೂತ್ರಪಿಂಡದ ಕಲ್ಲುಲೆನ್ ರಟ್ಟಾವುಂಡು.
  • ಕುಡುಅರಿ ಸೇವನೆ ಮಲ್ತುಂಡ ಶರೀರ ಗಟ್ಟಿ ಆಪುಂಡು.
  • ವಾತನ್ ಒಂಜೇ ದಿಕ್ಕ್ ಗ್ ಕನಪುಂಡು, ಉಂದೆಡ್ದ್ ಮಲಬದ್ಧತೆ ಕಮ್ಮಿ ಆಪುಂಡು.
  • ಉಂದು ಗಂಟು ಮುಟ್ಟುಲೆನ್ ಗಟ್ಟಿ ಮಲ್ಪುಂಡು.
  • ಉಂದು ಕಣ್ಣ್ ದೃಷ್ಟಿಗ್ಲಾ ಎಡ್ಡೆ. ದೂರದೃಷ್ಟಿ ಬೊಕ್ಕ ಸಮೀಪದೃಷ್ಟಿನ್ ಸರಿ ಮಲ್ಪೊಂಡು. ಉಂದೆತ ಒಟ್ಟುಗು, ಸೊಪ್ಪು ತರಕಾರಿ ಬೊಕ್ಕ ವಿಟಮಿನ್ ಎ ಡ್ ಸಮೃದ್ಧವಾದ್ ಉಪ್ಪುನ ಆಹಾರೊಲೆನ್ ಸೇವನೆ ಮಲ್ತ್ಂಡ ಜೀರ್ಣಾಂಗ ವ್ಯವಸ್ಥೆ ಸುಧಾರಣೆ ಆಪುಂಡು.
  • ನೆತ್ತೆರ್ ಡ್ ಸಕ್ಕರೆದ ಮಟ್ಟೊನು ಕಮ್ಮಿ ಮಲ್ಪುಂಡು.
  • ಬೊಕ್ಕ  ಇನ್ಸುಲಿನ್ ಪ್ರತಿರೋಧೊನು ಕಮ್ಮಿ ಮಲ್ಪುಂಡು. ಉಂದು  ನೆತ್ತೆರ್ದ ಚೀಪೆದ ಮಟ್ಟೊನು ನಿಯಂತ್ರಣ ಮಲ್ಪೆರೆ ಸಹಾಯ ಮಲ್ಪುಂಡು.
  • ಕೊಲೆಸ್ಟ್ರಾಲ್ ಮಟ್ಟೊನು ಕಮ್ಮಿ ಮಲ್ಪೆರೆ ಸಹಾಯ ಮಲ್ಪುಂಡು ದಾರಾಳ ಫೈಬರ್ ಉಪ್ಪುಂಡು, ಉಂದು ನೆತ್ತೆರ್ದ ಬೊರ್ಚಾಂದಿ ಕೊಲೆಸ್ಟ್ರಾಲ್ ನ್ ನಿಯಂತ್ರಣ ಮಲ್ಪೆರೆ ಸಹಾಯ ಮಲ್ಪುಂಡು. ಉಂದು ಹೃದಯದ ನಾಳೊಲೆಡ್  ಉಪ್ಪುನ ಬೊರ್ಚಾಂದಿ ಕೊಲೆಸ್ಟ್ರಾಲ್ ನ್ ದೂರ ಮಲ್ಪುಂಡು ಬೊಕ್ಕ ಅಡಚಣೆದ ಅಪಾಯೊನು ಕಮ್ಮಿ ಮಲ್ಪುಂಡು. ಕುಡುಅರಿನ್ ನೆನೆತ್ ದೀದ್ ಮುಂಗೆ ಬರ್ಪಾದ್ ತಿಂದ್ಂಡ ಬುಕ್ಕಲ ಎಡ್ಡೆ.


Read Post | comments

ಸಾಮಾಜಿಕ ದೃಷ್ಟಿಯೆ ಭಾಷೆಯ ಶ್ರೀಮಂತಿಕೆ !

ಪಾಟು  ಐಲೇಸಾದ  ಮಹತ್ವಾಂಕಾಕ್ಷೆಯ  ಹಾಡು . 

ನಿನ್ನೆ   ಕಟಪಾಡಿಯಿಂದ  ಮಂಚ ಕಲ್ಲಿಗೆ   ಹೋಗುವ ದಾರಿಯ ಪಾಂಬೂರಿನಲ್ಲಿ ಸುಂದರ ಎಂ ಸಂಜೀವ, ರಮೇಶ್ ಗುಂಡಾವು,ಪಾಂಗಲ ಬಾಬು ಕೊರಗ ಹಾಗೂ ಕಮಲ ಪಾಂಬೂರು ಇವರ ಸಹಕಾರದಲ್ಲಿ ಕೊರಲ್  ಕಲಾ  ತಂಡ ಕುಡ್ಲ , ನವೋದಯ ಸಾಂಸ್ಕೃತಿಕ ಕಲಾತಂಡ   ಪಾಂಬೂರು   ಎಂಬೆರಡು ವಿಶೇಷ ಪರಿಣತಿಯ  ನೃತ್ಯ ತಂಡಗಳೊಂದಿಗೆ ಅದ್ಭುತವಾಗಿ ಚಿತ್ರೀಕರಣಗೊಂಡಿದೆ.

 ಸೆಪ್ಟೆಂಬರ್ 28ರಂದು  ನಿಟ್ಟೆ ಯೂನಿವರ್ಸಟಿಯಲ್ಲಿ  ಈ ಹಾಡು ಔಪಚಾರಿಕವಾಗಿ ಬಿಡುಗಡೆಗೊಳ್ಳಲಿದೆ.

 ಚಿತ್ರೀಕರಣದುದ್ದಕ್ಕೂ ಮೆಚ್ಚಿಕೊಳ್ಳುವಂತಹುದು  ಈ ತಂಡದ ತತ್ಪರತೆ , ನೃತ್ಯ ಕೌಶಲ್ಯ  ಮತ್ತು ಅವರೆಲ್ಲಾ ತಮ್ಮ ಭಾಷೆಯ ಬಗ್ಗೆ ಇಟ್ಟುಕೊಂಡಿದ್ದ ಸದಭಿಮಾನ.  ಆ ತತ್ಪರತಯಿಂದಲೆ  ಮಂಗಳೂರಿನಿಂದ ಉಡುಪಿಗೆ ಬಂದು  ಮಳೆಯೊಳಗೆ ನೆಂದು  ಈ ತಂಡ ಹಾಡಿನ ತಾಳಕ್ಕೆ ತಕ್ಕ  ಹೆಜ್ಜೆ ಹಾಕುವುದು ಸಾಧ್ಯವಾಗಿದೆ! 

ನಿರಂತರ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ  ನಾಗರೀಕ ಸಮಾಜದಲ್ಲಿ  ಈ ಆದಿ ಜನಾಂಗ  ಹೆಣ್ಣು ಮಗುವಿನ ಜನನವನ್ನು  ಸಂಭ್ರಮಿಸುವ ರೀತಿ   ಅನುಕರಣೀಯ .  . ಬಾಬು ಕೊರಗ ಅವರ  ಬರೆಹದಲ್ಲಿ ಅದು ಮೂಡಿದ ರೀತಿಯಂತೂ ಅನನ್ಯ. 

ಅಪ್ಪೆ ಚೂಕ್,ನನತ ಕೊಡಿನ್,ಆಸೆ ಜಿಟ್ಟಿಡ್

(=ತಾಯಿ ತನ್ನ ಕುಡಿಯನ್ನು  ಆಶಾ ದೃಷ್ಟಿಯಿಂದ ನೋಡಿದಳು) 

ಅನ್ನ ಅಂತ್ಯ ಕಾಲಗೊಂಜಿ ಆಧಾರಾಕತ!

(=ನನ್ನ ಅಂತ್ಯ ಕಾಲಕ್ಕೊಂದು  ಆಧಾರವಾಯಿತಲ್ಲ!) 

ರಡ್ಡು ಪೊರ್ತು ಗಂಜಿ ತೆಲಿ ಅಂಗ ತರ್ದತ.

(= ಎರಡು ಹೊತ್ತು ಗಂಜಿ ನನಗೆ ಕೊಡುವಳಲ್ವ   )

ಪೊನ್ನು ಕೂಜಿ, ಅನ್ನ ಪೆರಂಟ ಬೆರಿಯೆ ಬರ್ದತ||ಅಪ್ಪೆ|| 

(=ಹೆಣ್ಣು ಮಗಳು  ನನ್ನ ಬೆನ್ನ ಹಿಂದೆಯೆ ಕಾಯುವಳಲ್ವ {ಬರುವಳಲ್ವ})

ಭಾಷೆಯ ಶ್ರೀಮಂತಿಕೆ ತಿಳಿಯುವುದೆ  ಆ ಭಾಷೆ ಬೆಳೆಸಿಕೊಂಡ ಸಾಮಾಜಿಕ ಪ್ರಜ್ಞೆಯಿಂದ  . ಅದು ಕೊರಗ ಭಾಷೆಯಲ್ಲಿ ಪ್ರಕೃತಿದತ್ತವಾಗಿ  ವಿಪುಲವಾಗಿದೆ ಎನ್ನುವುದು ಈ ಹಾಡನ್ನು ಗಮನವಿಟ್ಟು ಕೇಳಿದಾಗ ತಿಳಿಯುವ ಸತ್ಯ .  

ಮುಗ್ಧ ಸಮುದಾಯದ  ಈ ಸಹಜ ದೃಷ್ಟಿ ಇದೆ ರೀತಿಯಲ್ಲಿ  ಮುಂದುವರಿಯಲಿ . ಆಧುನಿಕತೆಯ  ಮಹಾ ಮಾಯೆ ಅವರನ್ನು ಅತಿಯಾಗಿ ಕಾಡದಿರಲಿ , ಹುಚ್ಚು ಹೊಳೆಯಲ್ಲಿ ತಮ್ಮತನ ಕೊಚ್ಚಿ ಹೋಗದಂತೆ ಕಾಪಿಡಲಿ   ಎನ್ನುವ ಆಶಾ ಭಾವದೊಂದಿಗೆ    ನಿಮ್ಮಲ್ಲಿಗೆ  ಕೂಜಿನ ಪಾಟುವಿನೊಂದಿಗೆ ಬರುತ್ತಿದ್ದೇವೆ!. 

ಐಲೇಸಾ ತಂಡದ ಅಜೇಶ್ ಚಾರ್ಮಾಡಿ ಮತ್ತು ಗಾಯಕ ಪ್ರಕಾಶ್ ಪಾವಂಜೆಯವರ   ಮುತುವರ್ಜಿಯಲ್ಲಿ ನಡೆದ  ಚಿತ್ರೀಕರಣಕ್ಕೆ  ಆದಿತ್ಯ ಆಚಾರ್ಯ ಮತ್ತು ಅನೀಶ್ ಕಿನ್ನಿಗೋಳಿ ಸಮರ್ಥವಾಗಿ ಸಾಥ್ ನೀಡಿದರು.  

ಐಲೇಸಾ  ಸ್ಥಳೀಯ ತಂಡದೊಂದಿಗೆ ಬೆರೆತ  ಸಂಭ್ರಮಕ್ಕೆ ಕೊನೆಯಲ್ಲಿ  ತಂಡದೊಂದಿಗೆ ಅವರು ಕುಪ್ಪಳಿಸಿದ ರೀತಿಯೇ  ಸಾಕ್ಷಿ! . 

ಐಲೇಸಾದ  ಈ  ವಿಶೇಷ ಪ್ರಯತ್ನಗಳಿಗೆ  ಚಂದಾದಾರರಾಗುವ ಮೂಲಕ ಸಹಕರಿಸಿ . 

  • ಶಾಂತಾರಾಮ್ ಶೆಟ್ಟಿ 
  • *ಟೀಂ ಐಲೇಸಾ*

Read Post | comments

ಮಂದಾರ ರಾಮಾಯಣಕ್ಕೆ ಜನಪದೀಯ ಸೊಗಡು: ಡಾ.ಶ್ರೀನಾಥ್



ಮಂಗಳೂರು : ' ಮಂದಾರ ರಾಮಾಯಣವು ತುಳುವ ಮಣ್ಣಿನ ಜನಪದ ಸೊಗಡನ್ನು ಹೊಂದಿದ್ದು ಅದು ಅಂದಿಗೂ ಇಂದಿಗೂ ಪ್ರಸ್ತುತವಾಗಿದೆ. ಆದುದರಿಂದಲೇ ಮಂದಾರ ರಾಮಾಯಣ ಸಾಮಾನ್ಯ ಜನರಿಗೂ ಅತ್ಯಂತ ನಿಕಟವಾಗಿ ತೋರುತ್ತದೆ' ಎಂದು  ತುಳುವೆರೆ ಆಯನೊ ಕೂಟ ಬದಿಯಡ್ಕದ ಗೌರವ ಅಧ್ಯಕ್ಷ ಪ್ರೊ. ಎ. ಶ್ರೀನಾಥ್  ಅಭಿಪ್ರಾಯಪಟ್ಟರು.
      ಅವರು ಶಕ್ತಿನಗರ ತುಳುವೆರೆ ಚಾವಡಿಯಲ್ಲಿ ಜರಗಿದ  'ಏಳದೆ ಮಂದಾರ ರಾಮಾಯಣ: ಸುಗಿಪು - ದುನಿಪು' ಪ್ರವಚನ ಸಪ್ತಾಹದ ಐದನೇ ದಿನದ ಕಾರ್ಯಕ್ರಮಕ್ಕೆ  ದೀಪ ಬೆಳಗಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ ವಹಿಸಿದ್ದರು. ಉದ್ಯಮಿಗಳಾದ ಗಣೇಶ್ ಮಹಾಕಾಳಿ , ತುಳುವೆರೆ ಆಯನೊ ಕೂಟ ಕುಡ್ಲದ ಕಾರ್ಯದರ್ಶಿ ಯಾದವ ಕೋಟ್ಯಾನ್, ತುಳುವೆರೆ ಕೂಟ ಅಧ್ಯಕ್ಷೆ ಭಾರತಿ ಅಮೀನ್ ಅತಿಥಿಗಳಾಗಿದ್ದರು.
        ಮಂದಾರ ರಾಮಾಯಣ ಸಪ್ತಾಹದ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುವರ್ಲ್ಡ್ (ರಿ.) ಕುಡ್ಲ ಅಧ್ಯಕ್ಷ ಡಾ.ರಾಜೇಶ್ ಆಳ್ವ ಅತಿಥಿಗಳನ್ನು ಗೌರವಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ವಿದ್ಯಾಶ್ರೀ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.


    ಮಂದಾರ ರಾಮಾಯಣದ ಐದನೇ ದಿನದ ' ಪಟ್ಟೊಗು ಪೆಟ್ಟ್' ಕಾವ್ಯ ಭಾಗವನ್ನು ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ವಾಚಿಸಿದರು. ಡಾ. ದಿನಕರ್ ಎಸ್. ಪಚ್ಚನಾಡಿ ವ್ಯಾಖ್ಯಾನಿಸಿದರು. ಭೂಷಣ್ ಕುಲಾಲ್ ಸ್ವಾಗತಿಸಿ ಶೃತಿ ಹರ್ಷ ವಂದಿಸಿದರು.
Read Post | comments

ತುಳುನಾಡಿನ ಸಂಸ್ಕೃತಿಗೆ ವ್ಯವಸ್ಥಿತ ಧಾರ್ಮಿಕ ಚೌಕಟ್ಟು ಇದೆ: ಎ.ಕೆ.ಜಯರಾಮ ಶೇಖ


ಮಂಗಳೂರು: 'ತುಳುನಾಡಿನ ಪ್ರತಿಯೊಂ ದು ಸಾಂಸ್ಕೃತಿಕ ಜನಪದ ವೈವಿಧ್ಯತೆಗಳಿಗೆ ಧಾರ್ಮಿಕ ಚೌಕಟ್ಟಿನ ಅಡಿಪಾಯ ಇದೆ. ಆದುದರಿಂದಲೇ ಅಮೇರಿಕದಂತಹ ದೇಶಗಳಲ್ಲಿ ನಮ್ಮ ಯಕ್ಷಗಾನವನ್ನು ಪ್ರದರ್ಶಿದಾಗ ಸಭಾಂಗಣ ತುಂಬಿ ತುಳುಕಿ ಜನರು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಹಾಗೆಯೇ ಪ್ರತಿಯೊಬ್ಬರೂ ಇಲ್ಲಿನ ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕತೆಯನ್ನು ಅರಿತು ಅಳವಡಿಸಿಕೊಳ್ಳುವುದು ಒಳಿತು'  ಎಂದು ಇತ್ತೀಚೆಗೆ ಅಮೇರಿಕಾ ಪ್ರವಾಸ ಮಾಡಿ ಬಂದ ಹಿರಿಯ ಸಮಾಜಸೇವಕರು ಹಾಗೂ ಸಾರಿಗೆ ಉದ್ಯಮಿಗಳಾದ ಎ.ಕೆ.ಜಯರಾಮ ಶೇಖ ಹೇಳಿದರು.
    ತುಳು ವರ್ಲ್ಡ್ ಮತ್ತು ತುಳುವೆರೆ ಕೂಟ ಶಕ್ತಿನಗರ ಇವುಗಳ ಜಂಟಿ ಆಶ್ರಯದಲ್ಲಿ ಜರಗಿದ 'ಏಳದೆ ಮಂದಾರ ರಾಮಾಯಣ ಸುಗಿಪು-ದುನಿಪು ' ಕಾರ್ಯಕ್ರಮದ ಆರನೇ ದಿನದ ಪ್ರವಚನಕ್ಕೆ ದೀಪ ಬೆಳಗಿ ಚಾಲನೆ ನೀಡಿ ಅವರು ಮಾತನಾಡಿದರು.ಸಮಾರಂಭದಲ್ಲಿ ಮುತ್ತಪ್ಪ ಸೇವಾ ಸಮಿತಿಯ ಶಂಕರ್ ನಾಯರ್ ದಂಪತಿಗಳನ್ನು ಗೌರವಿಸಲಾಯಿತು. ಪದವು ಕ್ಲಬ್ಬಿನ ಅಧ್ಯಕ್ಷ ಕುಶಾಲ್ ಕುಮಾರ್, ತುಳುವೆರೆ ಕೂಟದ ಭಾರತಿ ಜಿ. ಅಮೀನ್, ಸುಧಾಕರ್ ಜೋಗಿ, ವಿಶ್ವನಾಥ್, ಹರ್ಷ ರೈ ಪುತ್ರಕಲ, ಭೂಷಣ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
       ಮಂದಾರ ರಾಮಾಯಣ ಸಪ್ತಾಹದ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ತುಳುವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು, ಶೃತಿ ಹರ್ಷ ಕಾರ್ಯಕ್ರಮ ನಿರ್ವಹಿಸಿದರು ‌


ತೆಲಿಪುನಡೆ ಬುಲಿಪು
  ‌   ಮಂದಾರ ರಾಮಾಯಣದ ಆರನೇ  ಅಧ್ಯಾಯ 'ತೆಲಿಪುನಡೆ ಬುಲಿಪು' ಕಾವ್ಯಭಾಗದ ವಾಚನವನ್ನು ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು ಮತ್ತು ಆಕಾಶವಾಣಿ ಕಲಾವಿದೆ ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ಹಾಗೂ ಪ್ರವಚನವನ್ನು ಜಾನಪದ ತಜ್ಞ ದಯಾನಂದ ಕತ್ತಲ್ ಸಾರ್ ನಡೆಸಿಕೊಟ್ಟರು.
Read Post | comments

ತುಳು ಕಾವ್ಯಗಳ ಪ್ರಚಾರಕ್ಕೆ ಕೈಜೋಡಿಸುವ : ತಾರಾನಾಥ ಶೆಟ್ಟಿ ಬೋಳಾರ



ತುಳುನಾಡಿನ ವಾಲ್ಮೀಕಿ ಎಂದೇ ಖ್ಯಾತರಾದ ಮಂದಾರ ಕೇಶವ ಭಟ್ಟರು ಬರೆದ ಮಂದಾರ ರಾಮಾಯಣ ವಾಚನ ಪ್ರವಚನ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾದುದು. ಇಂತಹ ಕೆಲಸಗಳು ತುಳುನಾಡಿನ ಪ್ರತಿ ದೇವಸ್ಥಾನಗಳಲ್ಲೂ ನಡೆಯಬೇಕು. ಮುಂದಿನ ವರ್ಷದಿಂದ ನಮ್ಮ ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಂದಾರ ರಾಮಾಯಣ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸುವೆ. ಹಾಗೆ ಪ್ರತಿಯೊಬ್ಬರು ತುಳುವಿನಲ್ಲಿರುವ ಮಹಾಕಾವ್ಯಗಳ ಪ್ರಸಾರಕ್ಕೆ ಕೈಜೋಡಿಸಬೇಕು. ಇವುಗಳನ್ನು ಮಾತ್ರ ಉಳಿಸಿ ಬೆಳೆಸಿದರೆ ತುಳುವಿಗೆ ಶ್ರೇಷ್ಠ ಸ್ಥಾನಮಾನಗಳು ಸಿಗುವುದು ಖಚಿತ ಎಂದು ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ಮೊಕ್ತೇಸರರಾದ ತಾರಾನಾಥ ಶೆಟ್ಟಿ ಬೋಳಾರ ಹೇಳಿದರು


ಅವರು ತುಳು ವರ್ಲ್ಡ್ ಮಂಗಳೂರು ಹಾಗೂ ತುಳುವೆರೆ ಕೂಟ ಶಕ್ತಿನಗರ ಇವರ ಸಂಯುಕ್ತ ಆಶ್ರಯದಲ್ಲಿ ಶಕ್ತಿನಗರದ ತುಳುವೆರೆ ಚಾವಡಿಯಲ್ಲಿ ನಡೆಯುತ್ತಿರುವ ಮಂದಾರ ರಾಮಾಯಣದ ಪ್ರವಚನ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರವಿಂದ ಮೋಟರ್ಸ್ ನ ಸೀನಿಯರ್ ಸೇಲ್ಸ್ ಮ್ಯಾನೇಜರ್ ರಾಜೇಶ್ ಗಟ್ಟಿ, ಮಹೇಶ್ ಮೋಟರ್ಸ್ ಮಾಲಕರಾದ ಜಯರಾಮ ಶೇಖ, ಸುರಭಿ ಹೋಟೆಲ್ ಮಾಲಕರಾದ ಕರುಣಾಕರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ದುರ್ಗಾ ಮೆನೋನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತುಳುಕೂಟಶ ಶಕ್ತಿನಗರದಉಪಾಧ್ಯಕ್ಷ ಎನ್ ವಿಶ್ವನಾಥ್ ಸ್ವಾಗತಿಸಿ ಡಾ ರಾಜೇಶ್ ಆಳ್ವ ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಂದಾರ ರಾಮಾಯಣದ ಮೂರನೇ ಅಧ್ಯಾಯ ಅಜ್ಜರೆ ಶಾಲೆ ಯ ವಾಚನವನ್ನು ಯಜ್ಞೇಶ್ ರಾವ್ ಹಾಗೂ ದಿವ್ಯ ಕಾರಂತ್ ನಡೆಸಿದರು. ಸರ್ಪಂಗಳ ಈಶ್ವರ ಭಟ್ ಪ್ರವಚನ ನಡೆಸಿದರು.
Read Post | comments

ಶಕ್ತಿನಗರದಲ್ಲಿ ಜುಲೈ 25ರಿಂದ 31 ರವರೆಗೆ ' ಏಳದೆ ಮಂದಾರ ರಾಮಾಯಣ - ತುಳು ಪ್ರವಚನ ಸಪ್ತಾಹ







ಮಂಗಳೂರು: ತುಳುನಾಡಿನ ಧಾರ್ಮಿಕ ಸಾಂಸ್ಕೃತಿಕತೆಗಳಲ್ಲಿ ಆಟಿ ತಿಂಗಳ ಕಷ್ಟ ಕೋಟಳೆಗಳ ನಿವಾರಣೆಗಾಗಿ ಪ್ರತಿಮನೆಯಲ್ಲೂ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಇಂದು ಕೂಡ ಹಲವು ಕಡೆ ಈ ಸಂಸ್ಕೃತಿಯು ನಡೆದುಕೊಂಡು ಬರುತ್ತಿದೆ. ಆದರೆ ತುಳು ಭಾಷೆಯ ಪಾರಾಯಣ ಯಾವುದೇ ಕಡೆ ನಡೆಯುತ್ತಿಲ್ಲ. ತುಳುವ ವಾಲ್ಮೀಕಿ ಎಂದೇ ಹೆಸರು ಪಡೆದ ಮಂದಾರ ಕೇಶವ ಭಟ್ ಅವರು ಬರೆದ ಮಂದಾರ ರಾಮಾಯಣ ನಮ್ಮ ನೆಲದ ಮಹಾಕಾವ್ಯಗಳಲ್ಲಿ ಒಂದು. ಇದನ್ನು ನಾಡಿನಾದ್ಯಂತ  ಪ್ರಸರಿಸಬೇಕು ಎಂಬ ಧ್ಯೇಯದಿಂದ ಅವರ ನೂರ ಒಂದನೇ ಜನ್ಮದಿನಾಚರಣೆ ಸಂದರ್ಭ ವಿಶೇಷ ಗೌರವ ನೀಡಬೇಕೆಂಬ ಉದ್ದೇಶದಿಂದ ಜುಲೈ 25ರಿಂದ 31ರವರೆಗೆ ಪ್ರತಿದಿನ ಸಂಜೆ 5ರಿಂದ 8ರವರೆಗೆ ತುಳುವೆರೆ ಚಾವಡಿ ಶಕ್ತಿನಗರದಲ್ಲಿ 'ಏಳದೆ ಮಂದಾರ ರಾಮಾಯಣ - ಸುಗಿಪು ದುನಿಪು' ಎಂಬ ತುಳು ಪ್ರವಚನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ತುಳುವರ್ಲ್ಡ್ ಮಂಗಳೂರು ಮತ್ತು ತುಳುವೆರೆ ಕೂಟ ಶಕ್ತಿನಗರ ಸಂಯುಕ್ತವಾಗಿ ಆಯೋಜಿಸುತ್ತಿದೆ.
*ನಾಂದಿ ಕಾರ್ಯಕ್ರಮ*:
ಜುಲೈ 25 ಗುರುವಾರದಂದು 'ಮಂದಾರ ರಾಮಾಯಣ' ನಾಂದಿ ಕಾರ್ಯಕ್ರಮ ನಡೆಯಲಿದ್ದು ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಸಿ ಭಂಡಾರಿ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುವರೆ ಆಯನ ಕೂಟದ ಗೌರವಾಧ್ಯಕ್ಷರಾದ ಡಾ.ಆರೂರು ಪ್ರಸಾದ್ ರಾವ್  ವಹಿಸುವರು. ನಮ್ಮ ತುಳುನಾಡು ಟ್ರಸ್ಟಿನ ಗೌರವಾಧ್ಯಕ್ಷರಾದ ಹರಿಕೃಷ್ಣ ಪುನರೂರು ನಾಂದಿ ದೀಪ ಬೆಳಗುವರು.ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಶಯ ಭಾಷಣ ಮಾಡುವರು. ತುಳು ವಾಲ್ಮೀಕಿ ಮಂದಾರ ನೆನಪನ್ನು ನಿವೃತ್ತ ಪ್ರಾಚಾರ್ಯ ಮತ್ತು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ನಡೆಸಿಕೊಡುವರು. ಅತಿಥಿಗಳಾಗಿ ಡಾ ಜಯ ಚಂದ್ರವರ್ಮ ರಾಜ ಮಾಯಿಪ್ಪಾಡಿ,ಎ. ಶಿವಾನಂದ ಕರ್ಕೇರ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ಸಂಘಟಕ ನವನೀತ್ ಶೆಟ್ಟಿ ಕದ್ರಿ, ನಿಟ್ಟೆ ಶಶಿಧರ್ ಶೆಟ್ಟಿ, ಮಂದಾರ ಶಾರದಾಮಣಿ, ಶಮೀನಾ ಆಳ್ವ ಮೂಲ್ಕಿ,ಡಾ. ರಾಜೇಶ್ ಆಳ್ವ, ಶ್ರೀಮತಿ ಭಾರತಿ ಜಿ ಅಮೀನ್, ಶ್ರೀಮತಿ ಶಾಂತ ಕುಂಟಿನಿ, ಚಂದ್ರಶೇಖರ ಕರ್ಕೇರ ಮೊದಲಾದವರು ಭಾಗವಹಿಸುವರು.

*ಸಪ್ತಾಹ ವಿಶೇಷ:*
ಏಳದೆ ಮಂದಾರ ರಾಮಾಯಣದ ಮೊದಲ ದಿನ 'ಪುಂಚದ ಬಾಲೆ' ಕಾವ್ಯ ಭಾಗದ ವಾಚನವನ್ನು ತೋನ್ಸೆ ಪುಷ್ಕಳ ಕುಮಾರ್ ಮತ್ತು ಮಂಜುಳ ಜಿ. ರಾವ್ ಇರಾ ಮಾಡಲಿದ್ದು, ಪ್ರವಚನವನ್ನು ಭಾಸ್ಕರ ರೈ ಕುಕ್ಕುವಳ್ಳಿ  ನಡೆಸಿಕೊಡುವರು

ಜುಲೈ 26ರಂದು ಶುಕ್ರವಾರದಂದು ತಿಮ್ಮಪ್ಪ ಶೆಟ್ಟಿ ನಿವೃತ್ತ ಭವಿಷ್ಯನಿಧಿ ಅಧಿಕಾರಿ ಹಾಗೂ ಶ್ರೀನಿವಾಸ ಪೂಜಾರಿ ಕುಂಟಲ್ಪಾಡಿ, ಎಸ್. ಸುದಾಕರ ಜೋಗಿ  ದೀಪ ಬೆಳಗಿಸುವರು. ಎರಡನೇ ದಿನದ 'ಬಂಗಾರ್ದ ತೊಟ್ಟಿಲ್' ಕಥನದ ವಾಚನವನ್ನು ಪ್ರಶಾಂತ ರೈ ಪುತ್ತೂರು ಮತ್ತು ಭವ್ಯಶ್ರೀ ಕುಲ್ಕುಂದ ಹಾಗೂ ಪ್ರವಚನವನ್ನು ನವನೀತ್ ಶೆಟ್ಟಿ ಕದ್ರಿ ನೆರವೇರಿಸುವರು.

ಜುಲೈ 27ರಂದು ಶನಿವಾರ ತಾರನಾಥ ಶೆಟ್ಟಿ ಬೋಳಾರ ಅಧ್ಯಕ್ಷರು ಹಳೆಕೋಟೆ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನ, ರಾಜೇಶ್ ಗಟ್ಟಿ ಸೀನಿಯರ್ ಸೇಲ್ಸ್ ಮೆನೇಜರ್ ಅರವಿಂದ ಮೋಟರ್ಸ್ ಹಾಗೂ ಎನ್. ವಿಶ್ವನಾಥ್ ಮೊದಲಾದವರು ದೀಪ ಬೆಳಗಿಸಲಿದ್ದಾರೆ. ಮೂರನೇ ದಿನದ  'ಅಜ್ಜೇರೆ ಶಾಲೆ' ಅಧ್ಯಾಯದ ವಾಚನವನ್ನು ಯಜ್ಞೇಶ್ ರಾವ್ ಮತ್ತು ದಿವ್ಯ ಕಾರಂತ್ ಹಾಗೂ ಪ್ರವಚನವನ್ನು ಸರ್ಪಂಗಳ ಈಶ್ವರ ಭಟ್ ನೆರವೇರಿಸಲಿದ್ದಾರೆ.

ಜುಲೈ 28ರಂದು ಆದಿತ್ಯವಾರ ಆರ್ಯಭಟ ಪ್ರಶಸ್ತಿ ವಿಜೇತ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮತ್ತು ಧಾರ್ಮಿಕ ಚಿಂತಕರಾದ ಬಸ್ತಿ ದೇವದಾಸ್ ಶೆಣೈ, ಯಕ್ಷಗಾನ ಕಲಾವಿದ ದಿನೇಶ್ ರೈ ಕಡಬ ಮೊದಲಾದವರು  ದೀಪ ಬೆಳಗಿಸಲಿದ್ದಾರೆ. ನಾಲ್ಕನೇ ದಿನದ ಕಥನ' ಮದಿಮೆದ ದೊಂಪ' ದ ವಾಚನವನ್ನು ಹರೀಶ್ ಶೆಟ್ಟಿ ಸೂಡ ಮತ್ತು ವಿಜಯಲಕ್ಷ್ಮಿ ಕಟೀಲು ಹಾಗೂ ಪ್ರವಚನವನ್ನು ಭಾಸ್ಕರ ರೈ ಕುಕ್ಕುವಳ್ಳಿ ನೆರವೇರಿಸಲಿದ್ದಾರೆ.

ಜುಲೈ 29 ಸೋಮವಾರ ಗಣೇಶ್ ಕೆ ಮಹಾಕಾಳಿ ಪಡ್ಪು  ಸಮಾಜಸೇವಕರು, ತುಳುವೆರೆ ಆಯನ ಕೂಟದ ಕಾರ್ಯದರ್ಶಿ ಯಾದವ್ ಕೋಟ್ಯಾನ್, ವಿದ್ಯಾಶ್ರೀ ಎಸ್ ಉಲ್ಲಾಳ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಶಿಕ್ಷಕಿ ಇವರು ದೀಪ ಬೆಳಗಿಸಲಿದ್ದಾರೆ. 5ನೇ ದಿನದ ಕಥನ 'ಪಟ್ಟೊಗು ಪೆಟ್ಟ್ ' ಇದರ ವಾಚನವನ್ನು ಶಿವಪ್ರಸಾದ್ ಎಡಪದವು ಮತ್ತು ಶಾಲಿನಿ ಹೆಬ್ಬಾರ್ ಹಾಗೂ ಪ್ರವಚನವನ್ನು ಡಾ ದಿನಕರ್ ಎಸ್ ಪಚ್ಚನಾಡಿ ನಡೆಸಿ ಕೊಡುವರು .

ಜುಲೈ 30 ಮಂಗಳವಾರ ಎ.ಕೆ. ಜಯರಾಮ ಶೇಖ ಮಾಲಕರು ಮಹೇಶ್ ಮೋಟರ್ಸ್ ಮಂಗಳೂರು, ವಿ. ಶಂಕರ್ ನಾಯರ್ ಮುತ್ತಪ್ಪ ಸೇವಾ ಸಮಿತಿ ಹಾಗೂ ಹರ್ಷ ರೈ ಪುತ್ರಕಲ ಮೊದಲಾದವರು ದೀಪ ಬೆಳಗಿಸಲಿದ್ದಾರೆ. ಆರನೇ ದಿನದ ಕಥನ 'ತೆಲಿಪುನಡೆ ಬುಲಿಪು ' ಇದರ ವಾಚನವನ್ನು ಮಹಾಬಲ ಶೆಟ್ಟಿ ಕೂಡ್ಲು ಮತ್ತು ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಹಾಗೂ ವಾಚನವನ್ನು ದಯಾನಂದ ಕತ್ತಲ್ಸಾರ್  ನಡೆಸಿಕೊಡಲಿದ್ದಾರೆ.
*ಸಪ್ತಾಹ ಸಮಾಪನ*:
ಜುಲೈ 31ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ. ಸುಬ್ಬಯ್ಯ ರೈ ಮಾಜಿ ಅಧ್ಯಕ್ಷರು ಕೇರಳ ತುಳು ಅಕಾಡೆಮಿ ಇವರು ವಹಿಸಲಿದ್ದಾರೆ. ಡಾ. ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಶ್ರೀಕ್ಷೇತ್ರ ಬಾಳೆಕೋಡಿ ದೀಪೋಜ್ವಲನ ಮಾಡುವರು. ಸಮಾರೋಪ ಭಾಷಣವನ್ನು ಹಿರಿಯ ಲೇಖಕಿ ಚಂದ್ರಕಲಾ ನಂದಾವರ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಂದಾರ ಲಕ್ಷ್ಮೀನಾರಾಯಣ ಭಟ್, ರಂಗಕರ್ಮಿ ಮತ್ತು ಪತ್ರಕರ್ತರಾದ ಪರಮಾನಂದ ಸಾಲ್ಯಾನ್, ಶ್ರೀಮತಿ ಸೇಸಮ್ಮ, ಉರ್ದು ಹಿರಿಯ ಪ್ರಾಥಮಿಕ ಶಾಲೆ,  ಕಲ್ಲಾಪು, ಟೈಂಸ್ ಅಫ್ ಕುಡ್ಲ ಸಂಪಾದಕರು ವಾಮನ ಇಡ್ಯಾ, ಪೂವರಿ ತುಳು ಪತ್ರಿಕೆ ಸಂಪಾದಕರು ವಿಜಯಕುಮಾರ್ ಬಂಡಾರಿ ಹೆಬ್ಬಾರ ಬೈಲು, ಮಂಗಳೂರು ವಿಶ್ವವಿದ್ಯಾಲಯದ ತುಳುಪೀಠ ಸದಸ್ಯ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ಲ್ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಮಂದಾರ ಕೇಶವ ಭಟ್ ಅವರ ಮಕ್ಕಳಿಗೆ ಮತ್ತು ಮಂದಾರ ರಾಮಾಯಣಕ್ಕೆ ಸೇವೆ ಸಲ್ಲಿಸಿದ ಹಿರಿಯರಿಗೆ ಗೌರವಾರ್ಪಣೆ ನಡೆಯಲಿದೆ.
ಕೊನೆಯ ಏಳನೇ ದಿನದ ಆಖ್ಯಾನ 'ಮೋಕೆದ ಕಡಲ್ ' ಇದರ ವಾಚನವನ್ನು ತೋನ್ಸೆ ಪುಷ್ಕಳ ಕುಮಾರ್ ಮತ್ತು ಸಂಗೀತ ಬಾಲಚಂದ್ರ ಹಾಗೂ ಪ್ರವಚನವನ್ನು ಭಾಸ್ಕರ ರೈ ಕುಕ್ಕುವಳ್ಳಿ ಇವರು ನಡೆಸಿಕೊಡಲಿದ್ದಾರೆ.
      ಕಾರ್ಯಕ್ರಮಕ್ಕೆ ಸ್ಥಳೀಯ ಸಂಘಟನೆಗಳು ಮತ್ತು ತುಳು ಪರ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಲಿವೆ ಎಂದು ತುಳುವರ್ಲ್ಡ್ ಹಾಗೂ ತುಳುವೆರೆ ಕೂಟ ಪ್ರಕಟಣೆಯಲ್ಲಿ ತಿಳಿಸಿವೆ.
Read Post | comments

ನೇಪಾಳದಲ್ಲಿ ತುಳು-ಕನ್ನಡ ಕಲರವ ಶಂಕರಾಚಾರ್ಯರಿಂದ ಪಶುಪತಿನಾಥನಿಗೆ ದ್ರಾವಿಡ ಆಚಾರದ ಪೂಜೆ : ರಾವಲ್ ಗಣೇಶ್ ಭಟ್ಟ.



ಪಶುಪತಿನಾಥನ ಪೂಜಾ ವಿಧಾನಗಳು ಸಂಪೂರ್ಣವಾಗಿ ವೈವಿಧ್ಯ ವಾಗಿದೆ. ಕರ್ನಾಟಕ ಆಂಧ್ರ ಮತ್ತು ತಮಿಳುನಾಡಿನ ಬ್ರಾಹ್ಮಣರ ಮೂಲಕ ಪೂಜಾವಿಧಾನವನ್ನು ನೆರವೇರಿಸಬೇಕೆಂದು ಶಂಕರಾಚಾರ್ಯರು ನೇಪಾಳದ ರಾಜನಿಗೆ ಮಾರ್ಗದರ್ಶನ ನೀಡಿದರು. ಆದಕಾರಣವೇ ತುಳುನಾಡಿನ ಮೂಲದವರಾದ ಶಿವಳ್ಳಿ ಬ್ರಾಹ್ಮಣರಿಗೆ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ತುಳು ಮತ್ತು ಕನ್ನಡ ಭಾಷೆ ಪರಸ್ಪರ ಅನ್ಯೋನ್ಯವಾಗಿದ್ದು ಪ್ರಧಾನ 2 ದ್ರಾವಿಡ ಭಾಷೆಗಳು ಇರುವ ಮಾದರಿ ರಾಜ್ಯವಾಗಿದೆ ಕರ್ನಾಟಕ. ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆ ತುಳು ವಾಗಿದ್ದು ಅದಕ್ಕೆ ತಕ್ಕುದಾದ ಸ್ಥಾನಮಾನಗಳು ದೊರೆಯದ್ದು ವಿಷಾದನೀಯ. ಆದುದರಿಂದ ಕನ್ನಡಿಗರು ಸೇರಿ ತುಳು ಭಾಷೆಯ ಸ್ಥಾನಮಾನಕ್ಕೆ ಪ್ರಯತ್ನಿಸಿ ತಮ್ಮದೇ ರಾಜ್ಯದ ಇನ್ನೊಂದು ಭಾಷೆಗೆ ಸ್ಥಾನಮಾನ ದೊರಕುವಲ್ಲಿ ಪ್ರಯತ್ನಿಸಿದರೆ ತುಳು-ಕನ್ನಡ ಭಾಷೆಯ ಸಹೋದರತ್ವ ಶಾಶ್ವತವಾಗಿ ಉಳಿಯುತ್ತದೆ ಎಂದು ನೇಪಾಳದ ಕಟ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ರಾವಲ್ ಗಣೇಶಭಟ್ಟ ಅವರು ಹೇಳಿದರು. ಅವರು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ತುಳು-ಕನ್ನಡ ಸ್ನೇಹ ಸಮ್ಮೇಳನವನ್ನು ತುಳು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡಿ ಹಣತೆಗಳನ್ನು ಬೆಳಗಿಸಿ ಉದ್ಘಾಟಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜರವರು ಮಾತನಾಡಿ ಪ್ರಾದೇಶಿಕತೆ ಉಳಿದರೆ ಮಾತ್ರವೇ ದೇಶಿಯತೆ ಉಳಿಯುತ್ತದೆ ಪ್ರಾದೇಶಿಕತೆ ಉಳಿಯಬೇಕಿದ್ದರೆ ಪ್ರಾದೇಶಿಕ ಸಂಸ್ಕೃತಿ ಮತ್ತು ಭಾಷೆಗಳನ್ನು ಮೇಲೆತ್ತುವ ಪ್ರಯತ್ನವಾಗಬೇಕು. ಪ್ರಾದೇಶಿಕತೆಯನ್ನು ಅರಿಯದೆ ಯುವಕರು ಜಾಗತಿಕ ಮಟ್ಟವನ್ನು ಪ್ರವೇಶಿಸಿದರೆ ಜೀವನದ ಸಮತೋಲನವನ್ನು ಕಾಪಾಡುವಲ್ಲಿ ವಿಫಲರಾಗುತ್ತಾರೆ. ನಾನು ಮಂಗಳೂರಿನಲ್ಲಿ ಹಲವು ವರ್ಷಗಳ ಕಾಲ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೇನೆ. ತುಳುವರ ಭಾಷಾಬಾಂಧವ್ಯವನ್ನು ಅನ್ಯೋನ್ಯತೆಯನ್ನು ಚೆನ್ನಾಗಿ ತಿಳಿದಿರುವೆನು. ಆದುದರಿಂದಲೇ ನೇಪಾಳದಂತಹ ರಾಷ್ಟ್ರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗಿದೆ ಎಂದರು. 

ತುಳುವರ್ಲ್ಡ್ ಮಂಗಳೂರು ಮತ್ತು ಸಂಭ್ರಮ ಬೆಂಗಳೂರು ಇವರು ಸಂಯುಕ್ತವಾಗಿ ಆಯೋಜಿಸಿದ ಅಂತರರಾಷ್ಟ್ರೀಯ ತುಳು ಮತ್ತು ಕನ್ನಡ ಸ್ನೇಹ ಸಮ್ಮೇಳನದ ಉದ್ಘಾಟನಾ ಸಮಾರಂಭ ನೇಪಾಳದ ಕಟ್ಮಂಡುವಿನಲ್ಲಿ ಅಮ-ದಬ್ಲಮ್ ಹೋಟೆಲ್ನಲ್ಲಿ ನಡೆಯಿತು. ಕೇರಳ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ನ್ಯಾ. ಸುಬ್ಬಯ್ಯ ರೈ, ಶ್ರೀಮತಿ ಮಂಜುಳಾ ಗಣೇಶ್ ಭಟ್ ನೇಪಾಳ, ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ಇದರ ಪ್ರಾಧ್ಯಾಪಕರಾದ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ, ಮೂಲ್ಕಿ ವಿಜಯ ಕಾಲೇಜಿನ ಟ್ರಸ್ಟಿಗಳಾದ ಶ್ರೀಮತಿ ಶಮೀನಾ ಆಳ್ವಾ, ಮಂಗಳೂರು ವಿಶ್ವವಿದ್ಯಾಲಯದ ತುಳು ಪೀಠದ ಸದಸ್ಯರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ಲ್, ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶಾಂತ ಕುಂಟಿನಿ, ಚಲನಚಿತ್ರ ನಟಿಯರಾದ ಕುಮಾರಿ ಚೈತ್ರ ಶೆಟ್ಟಿ,  ಲಕ್ಷ್ಯ ಶೆಟ್ಟಿ, ಸನಾತನಧರ್ಮ ಪ್ರಚಾರಕರಾದ ನವೀನ್ ಕುಮಾರ್, ಉದ್ಯಮಿಗಳಾದ ಲಯನ್ ಗಣೇಶ್ ಶೆಟ್ಟಿ, ಕೋಡ್ದಬ್ಬು ದೈವಸ್ಥಾನ ಪದ್ದೊಡಿ ಇದರ ಅಧ್ಯಕ್ಷರಾದ ಅಶೋಕ್ ಮಾಡ, ಭೂಷಣ್ ಕುಲಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೇಪಾಳದ ಹುಡುಗಿ ರೇಷ್ಮಾ ಅವರು ಕನ್ನಡದಲ್ಲಿ ಮಾತನಾಡಿ ಕನ್ನಡದ ಗೀತೆಗಳನ್ನು ಹಾಡಿ ನೇಪಾಳಿಗರ ಕನ್ನಡ ಪ್ರೀತಿಯ ಕಂಪನ್ನು ಮೆರೆಸಿದಳು. ಹಾಗೂ ಮೂಡುಬಿದಿರೆಯ ಹೆರಾಲ್ಡ್ ತಾವ್ರೋ ಅವರು ತುಳುವಿನಲ್ಲಿ ಗಣೇಶನ ಪ್ರಾರ್ಥನೆ ಹಾಡಿ ಸೌಹಾರ್ದತೆಗೆ ಮುನ್ನುಡಿ ಬರೆದರು. ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಬರೆದ ದೇಶದ ಚಿತ್ತ ಯುವಜನರತ್ತ ಪುಸ್ತಕವನ್ನು ನೇಪಾಳದ ಮಂಜುಳಾ ಗಣೇಶ್ ಭಟ್ ಅವರು ಬಿಡುಗಡೆಗೊಳಿಸಿದರು. ಹಾಗೂ ತುಳು ಕನ್ನಡ ಭಾಷೆಗೆ ಕೊಡುಗೆ ನೀಡಿದ ಹಲವು ಗಣ್ಯರಿಗೆ ಇಂಡೋ ನೇಪಲ್ ತುಳು ಕನ್ನಡ ಸ್ನೇಹ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಾಸ್ತಾವಿಕವಾಗಿ ತುಳುವರ್ಲ್ಡ್ ಅಧ್ಯಕ್ಷರಾದ ಡಾ. ರಾಜೇಶ್ ಆಳ್ವ ಮಾತನಾಡಿ ತುಳುನಾಡಿನ ಅದೆಷ್ಟೋ ಕನ್ನಡಿಗರು ದೇಶವಿದೇಶಗಳಲ್ಲಿ ನೆಲೆಸಿರುತ್ತಾರೆ. ಇವರು ತುಳು ಮತ್ತು ಕನ್ನಡ ಭಾಷೆಗೆ ಹಲವು ಕೊಡುಗೆಗಳನ್ನು ನೀಡಿರುತ್ತಾರೆ. ಇವರ ಭಾಷಾ ಪ್ರೇಮವನ್ನು  ಸಮ್ಮಿಲಿಸ ಬೇಕು ಎಂಬ ಉದ್ದೇಶದಿಂದ ತುಳು ಕನ್ನಡ ಸ್ನೇಹ ಸಮ್ಮೇಳನವನ್ನು ದೇಶವಿದೇಶಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಈ ರೀತಿಯಾಗಿ ಭಾಷಾ ವೈಷಮ್ಯವನ್ನು ಮರೆಮಾಚಬಹುದು ಎಂಬುದು ನಮ್ಮ ಧ್ಯೇಯ ಎಂದರು. ಸಂಭ್ರಮ ಬೆಂಗಳೂರು ಇದರ ಅಧ್ಯಕ್ಷರಾದ ಜೋಗಿಲ ಸಿದ್ದರಾಜು ಅವರು ಸ್ವಾಗತಿಸಿ ತುಳುವರ್ಲ್ಡ್ ಕಾರ್ಯದರ್ಶಿ ಹರ್ಷ ರೈ ಪುತ್ರಕಳ ವಂದಿಸಿದರು. ಶೃತಿ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ವಿವಿಧ ಗೋಷ್ಠಿಗಳು  ಹಾಡು ನೃತ್ಯಗಳೊಂದಿಗೆ ಸಂಪನ್ನಗೊಂಡಿತು.
Read Post | comments

ಜುಲೈ 25ರಿಂದ 31ರ ವರೆಗೆ “ಏಳದೆ ಮಂದಾರ ರಾಮಾಯಣ ಪಾರಾಯಣ”



ಆಟಿ ತಿಂಗಳು ತುಳುನಾಡಿನ ಧಾರ್ಮಿಕ ಸಂಸ್ಕøತಿಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಆಟಿ ತಿಂಗಳು ಅನಿಷ್ಠಗಳ ಕಾಲ, ರೋಗರುಜಿನಗಳ ಕಾಲ, ಪ್ರಾಕೃತಿಕ ವಿಕೋಪಗಳು ಉಂಟಾಗುವ ಕಾಲ. ಈ ಸಮಯದಲ್ಲಿ  ಜನರ ಕಷ್ಟಕಾರ್ಪಣ್ಯಗಳನ್ನು ಕಳೆಯಲು ಮತ್ತು ಧೈರ್ಯ ಯಶಸ್ಸು ಲಭಿಸಲು ಪ್ರತಿ ಮನೆಗಳಲ್ಲಿ ರಾಮನಾಮ ಜಪ- ರಾಮಾಯಣ ಪಾರಾಯಣಗಳು ನಡೆಯುತ್ತಿತ್ತು. ಈಗಲೂ ಹಲವು ಕಡೆ ಈ ಸಂಪ್ರದಾಯ ನಡೆದು ಬರುತ್ತಿದೆ. ಅದರೆ ಅನ್ಯ ಭಾಷಾ ವ್ಯಾಖ್ಯಾನ-ವಾಚನಗಳು ತುಳುನಾಡಿಗರಿಗೆ ಅರಗಿಸಿಕೋಳ್ಳಲು ಕಷ್ಟ. ಈ ನಿಟ್ಟಿನಲ್ಲಿ ತುಳುವ ವಾಲ್ಮೀಕಿ ಎಂದೇ ಪ್ರಸಿಧ್ಧರಾದ ಮಂದಾರ ಕೇಶವ ಭಟ್ಟರು ಬರೆದ ಪ್ರಸಿದ್ದ ತುಳು ಕಾವ್ಯ ಮಂದಾರ ರಾಮಾಯಣ ತುಳುನಾಡಿಗೆ ದೊಡ್ಡ ಕೊಡುಗೆ. ಅಲ್ಲದೆ ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರ ಮಹಾ ಕಾವ್ಯಕ್ಕೆ ಮನ್ನಣೆ ನೀಡಬೇಕೆಂಬ ಉದ್ದೇಶದಿಂದ  ತುಳುವರ್ಲ್ಡ್ ಕುಡ್ಲ ತುಳುವೆರೆ ಕೂಟ ಶಕ್ತಿನಗರ ಇದರ ಸಹಯೋಗದೊಂದಿಗೆ (ಏಳದೆ ಮಂದಾರ ರಾಮಾಯಣ) ಮಂದಾರ ರಾಮಾಯಣ ಪಾರಾಯಣ ಸಾಪ್ತಾಹ ತುಳು ವ್ಯಾಖ್ಯಾನ-ವಾಚನ ಆಯೋಜಿಸಲಾಗಿದೆ.

ಜುಲೈ 25ರಿಂದ 31ರ ವರೆಗೆ ತುಳುವ ಚಾವಡಿ -ತುಳುವೆರೆ ಕೂಟ ಶಕ್ತಿನಗರದಲ್ಲಿ ಜರಗುವ “ಏಳದೆ ಮಂದಾರ ರಾಮಾಯಣ”ದಲ್ಲಿ ನಾಡಿನ ಹೆಸರಾಂತ ವಿವಿಧ ವಾಚನಕಾರರು ಮತ್ತು ವ್ಯಾಖ್ಯಾನಕಾರರಿಂದ ವ್ಯಾಖ್ಯಾನ-ವಾಚನ ನಡೆಯಲಿದೆ, ಜುಲೈ 25ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು  ಜುಲೈ 31ರಂದು ಸಮಾರೋಪಗೊಳ್ಳಲಿದೆ, ಸಮಾರಂಭದಲ್ಲಿ ಧಾರ್ಮಿಕ, ಸಾಹಿತ್ಯಿಕ ಚಿಂತಕರಾದ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾಗೂ ಮಂದಾರ ರಾಮಾಯಣದ ಪ್ರಸಾರಕ್ಕೆ ಶ್ರಮಿಸುತ್ತಿರುವವರಿಗೆ ಮಂದಾರ ಸನ್ಮಾನ ನೀಡಿ ಗೌರವಿಸಲಾಗುವುದು. ಈ ಬಗ್ಗೆ ಶಕ್ತಿನಗರ ತುಳುವೆರೆ ಚಾವಡಿಯಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಭಾರತಿ ಜಿ. ಅಮಿನ್ ವಹಿಸಿದರು, ಡಾ. ರಾಜೇಶ್ ಆಳ್ವ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದರು. ಸಭೆಯಲ್ಲಿ ಎನ್. ವಿಶ್ವನಾಥ್, ಎಸ್. ಸುಧಾಕರ ಜೋಗಿ, ರಮೇಶ್ ಕುಮಾರ್, ಶ್ರೀಮತಿ ಸುಂದರಿ, ಶ್ರೀಮತಿ ವಿಮಲ, ಉದಯ ಕುಮಾರ್ ನಾಯ್ಕ್, ಸುರೇಶ್ ಕುಕ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Read Post | comments

ಭಾರತದ ಸಂವಿಧಾನಕ್ಕೆ ತುಳುನಾಡಿನ ಆಡಳಿತ ಮಾದರಿ. : ವರ್ಧಮನ್ ದುರ್ಗಾಪ್ರಸಾದ್ ಶೆಟ್ಟಿ


ಭಾರತದ ಸಂವಿಧಾನ ರಚಿಸುವಾಗ ಅದೆಷ್ಟು ತುಳುನಾಡಿನ ಆಡಳಿತ ಮಾದರಿಯನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಆದುದರಿಂದಲೇ ಸಂವಿಧಾನ ರಚಿಸುವಾಗ ತುಳುನಾಡಿನ ಪ್ರಮುಖರು ಮುಂಚೂಣಿಯಲ್ಲಿದ್ದರು. ತುಳುನಾಡಿನ ಬೀಡು ಗುತ್ತು ಪರೀಕ್ಷೆಗಳ ತ್ಯಾಗಗಳು ಮಹತ್ತರವಾದದ್ದು. ತಮ್ಮ ಕೈಯಲ್ಲಿರುವ ಎಲ್ಲಾ ಆಸ್ತಿಗಳನ್ನು ಅಡವಿಟ್ಟಆದರು ಧರ್ಮ ದೈವಗಳಿಗೆ ಧರ್ಮಕ್ಕೆ ಚ್ಯುತಿ ಬರದಂತೆ ನೇಮ ಕೋಲ, ತಂಬಿಲಗಳನ್ನು ಕೊಟ್ಟು ಆಯಾ ಗ್ರಾಮಗಳನ್ನು ಸಂರಕ್ಷಿಸುತ್ತಾರೆ. ಗುತ್ತು ಎಂಬುದು ಬರೆ ಮನೆತನವರಿಗೆ ಸಂಬಂಧಪಟ್ಟದ್ದಲ್ಲ ಅದು ಆಯಾ ಊರು ಗ್ರಾಮಗಳಿಗೆ, ರಾಜ್ಯಗಳಿಗೆ ಸಂಬಂಧಪಟ್ಟದ್ದು. ಇಲ್ಲಿನ ಆಡಳಿತ ರೀತಿ ನಿಸ್ವಾರ್ಥ ರಹಿತವಾದದ್ದು. ಗುತ್ತುಗಳು ಕೇವಲ ಒಂದು ಜನಾಂಗಕ್ಕೆ ಮಾತ್ರ ಮೀಸಲಾಗಿದೆ ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಗುತ್ತುಗಳ ಆಡಳಿತ ಗಳನ್ನು ನಡೆಸಿಕೊಂಡು ಬಂದವರು.ಆದುದರಿಂದಲೇ ಭಾರತವು ಈಗ ಪ್ರಾಚೀನ ಭಾರತದ ಆಡಳಿತ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬರಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಎಲ್ಲಾ ಬಿಡು ಗೊತ್ತು, ಬಾರಿಕೆ, ಭಾವ, ಪರಡಿ, ಮತ್ತು ಮಾಗಂದಡಿಗಳ ಮತ್ತು ಇನ್ನಿತರ ಧರ್ಮ ಆಡಳಿತ ವ್ಯವಸ್ಥೆಗಳನ್ನು ಒಟ್ಟುಸೇರಿಸಿ ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಸಮಿತಿಯನ್ನು ರೂಪಿಕರಿಸಲಾಗಿದೆ. ಈ ರೀತಿಯಲ್ಲಿ ಪ್ರಾಚೀನ ಧರ್ಮ ಆಡಳಿತಕ್ಕೆ ಒಂದು ವೇದಿಕೆ ನಿರ್ಮಾಣವಾದಂತಿದೆ ಎಂದು ಗೊಳಿದಡಿ ಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಅವರು ಹೇಳಿದರು. ಅವರು ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಭೆಯಲ್ಲಿ ಜಗದೀಶ್ ಅಧಿಕಾರಿ ಕೆಲ್ಲಪುತ್ತಿಗೆ, ಮಹೇಶ್ ಶೆಟ್ಟಿ ತಿಮರೋಡಿ ಬಿಡು, ರೋಹಿತ್ ಕುಮಾರ್ ಕಟೀಲು ಮಂಜಲೊಟ್ಟು ಬಿಡು, ಸತೀಶ್ ಕಾವ ಬೆಲ್ಲಿಬೆಟ್ಟು ಗುತ್ತು, ಮನೋಜ್ ಕುಮಾರ್ ಕುಂಜರ್ಪ ಮನೆ, ಪ್ರದೀಪ್ ಪೂಜಾರಿ ಪಟ್ರಬೆಟ್ಟು ಬಾರಿಕೆ, ಕಿರಣ ಆಳ್ವಾ ಕುತ್ಯಾರು ಕುತ್ಯಾರು ಮಾಗಂದಡಿ, ಸೀತಾರಾಮ ಕರ್ಕೇರ ಪಾವೂರು ಭಂಡಾರ ಮನೆ, ನವೀನ್ ಶೆಟ್ಟಿ ಪೆರ್ಮರ ಗುತ್ತು, ನವೀನ್ ಶೆಟ್ಟಿ ಎಡ್ಮೆಮಾರು, ಕಿರಣ ಹೆಗ್ಡೆ ಬೀರಣ್ಣ ಶೆಟ್ರ ಮನೆ ಮುಕ್ಕ, ಮೋಹನ್ ದಾಸ್ ಶೆಟ್ಟಿ ನೈಮುಗೇರು ಬಾರಿಕೆ, ಡಾ. ರಾಜೇಶ್ ಆಳ್ವ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು
ದಿವಾಕರ ಸಾಮಾನಿ ಚೆಳ್ಯಾರು ಗುತ್ತು ಸ್ವಾಗತಿಸಿ, ಪರಮಾನಂದ ಸಾಲ್ಯಾನ್ ಹೆಜಮಾಡಿ ದೊಡ್ಡಮನೆ ವಂದಿಸಿದರು.  ಮುಂದಿನ ಸಭೆಯನ್ನು ಆಗಸ್ಟ್ 6ರಂದು ಬೆಳ್ತಂಗಡಿ ತಾಲೂಕಿನ ಗಡಿಕಾರರಾದ ಕಂಚಿ ಪೂವಣಿ ಯಾನೆ ಜೀವಂಧರ್ ಕುಮಾರ್ ಜೈನ್ ಅವರ ಪದ್ಯೋಡಿ ಗುತ್ತುವಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.
Read Post | comments

ಪಗ್ಗು 18 ಸಿರಿ ದಿನಾಚರಣೆ ಬಲೇ ಸಿರಿ ಭೂಮಿ ಬುಲೇಪಾಗ ತುಳುನಾಡಿನ ಬನ(ವನ) ಸಂಸ್ಕೃತಿಯು ಅದು ಜಗತ್ತಿಗೆ ಮಾದರಿ. : ಉದಯ ಕುಮಾರ್ ಶೆಟ್ಟಿ





ಮಂಗಳೂರು : ತುಳುನಾಡಿನ ಬನ ಸಂಸ್ಕೃತಿಯು ಅದು ಜಗತ್ತಿಗೆ ಮಾದರಿ ಆದುದರಿಂದಲೇ ಇವತ್ತಿಗೂ ತುಳುನಾಡಿನ ಸಂಸ್ಕೃತಿಯಲ್ಲಿ ಬನಗಳು ಅಚ್ಚಳಿಯದೆ ಉಳಿದಿದೆ. ಆದರೆ ಧಾರ್ಮಿಕತೆಯ ಹೆಸರಿನಲ್ಲಿ ಇದ್ದ ಬನಗಳನ್ನು ಕಡಿದು ಕಾಂಕ್ರೀಟ್ ಸ್ಮಾರಕಗಳಾಗಿ ಮಾಡುವುದು ಖೇದಕರ. ಕೇಪುಳ ಹೂವನ್ನು ನಿರಂತರವಾಗಿ ದೇವರಿಗೆ ಅರ್ಪಿಸುವುದರಿಂದ ಮತ್ತು ಅದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲಿ ಅದ್ಭುತವಾದಂತಹ ತಪೂಶಕ್ತಿಯು ಉಂಟಾಗುತ್ತದೆ. ಇಂತಹ ಹಲವು ಗಿಡಮೂಲಿಕೆಗಳನ್ನು ಕಡೆಗಣಿಸಿ ಆಡಂಬರದ ಹೆಸರಿನಲ್ಲಿ ಏನೇನೋ ವಸ್ತುಗಳನ್ನು ದೇವರಿಗೆ ಅರ್ಪಿಸುತ್ತಿದ್ದೇವೆ. ಬನ ವೆಂದರೆ ವನ ಎಂದರ್ಥ ಇಂತಹ ವನ ಸಂಸ್ಕೃತಿಯನ್ನು ಬೆಳೆಸಲು ಸಮಾಜ ಮುಂದಾಗಬೇಕಾಗಿದೆ ಎಂದು ಪಿಲಿಕುಳ ನಿಸರ್ಗಧಾಮ ಸಸ್ಯಕಾಶಿಯ ಮೇಲ್ವಿಚಾರಕರಾದ ಉದಯ ಕುಮಾರ್ ಶೆಟ್ಟಿ ಅವರು ಹೇಳಿದರು.
ಅವರು ನಗರದ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ನಡೆದ ಪಗ್ಗು 18 ಸಿರಿ ದಿನಾಚರಣೆ ಮತ್ತು ಬಲೆ ಸಿರಿಭೂಮಿ ಬುಳೆಪಾಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟರ ಯಾನೆ ನಾಡವರ ಸಂಘ ಮಹಿಳಾ ವಿಭಾಗ ಮತ್ತು ತುಳುವರ್ಲ್ಡ್ (ರಿ) ಕುಡ್ಲ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ವಹಿಸಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಜುಳಾ ಶೆಟ್ಟಿ ಅವರು ಮಾತನಾಡಿ ಪ್ರಕೃತಿ ಮತ್ತು ಸಂಸ್ಕೃತಿ ಪರಸ್ಪರ ಪೂರಕವಾಗಿರಬೇಕು ಸಂಸ್ಕೃತಿ ಹೆಸರಲ್ಲಿ ವಿಕೃತಿಯನ್ನು ಸೃಷ್ಟಿಸಿದರೆ ಮುಂದೊಂದು ದಿನ ಮೃತ್ಯು ಖಂಡಿತ ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಡಾ. ಆಶಾಜ್ಯೋತಿ ರೈ ಅವರು ಮಾತನಾಡಿ ಸಿರಿ ನಮ್ಮ ಸಂಸ್ಕೃತಿಯ ಪ್ರತೀಕ, ಸಿರಿ ಅಂದರೆ ಅದು ಪ್ರಕೃತಿ ಎಂದರ್ಥ ಆದುದರಿಂದ ಪ್ರಕೃತಿ ಮತ್ತು ಸಂಸ್ಕೃತಿ ಒಂದಾಗುವ ದಿವಸವನ್ನು ಪಗ್ಗು 18 ಸಿರಿ ದಿನಾಚರಣೆಯೆಂದು ಆಚರಿಸುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಹಣ ಸಂಪತ್ತನ್ನು ಬಿಟ್ಟು ಹೋಗದೆ ಹಿರಿಯರು ಕೊಟ್ಟ ಪ್ರಕೃತಿಯನ್ನು ಮರಳಿ ಕೊಡುವುದು ನಮ್ಮೆಲ್ಲರ ದ್ಯೆಯೋದ್ದೇಶ ಆಗಬೇಕು. ಆದುದರಿಂದ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಈ ಯೋಜನೆಯನ್ನು ಎಲ್ಲೆಲ್ಲಿ ಖಾಲಿ ಭೂಮಿ ಬನ ದೇವಸ್ಥಾನ ಶಾಲೆ ವಠಾರಗಳು ಹಾಗೂ ತಮ್ಮ ಮನೆ ಪರಿಸರಗಳಲ್ಲಿ ಆದಷ್ಟು ಸಸಿಗಳನ್ನು ನೆಡುವ ಮತ್ತು ನಿರಂತರವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರತಿಜ್ಞೆಯನ್ನು ಸ್ವೀಕರಿಸಬೇಕು ಎಂದು ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಂಗಳೂರು ವಿಭಾಗದ ವಿವಿಧ ಮಹಿಳಾ ಘಟಕಗಳು ಬಲೇ ಸಿರಿ ಭೂಮಿ ಬುಲೇಪಾಗ
ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತ ಗೊಳಿಸುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಕ ಮಾಧವ ಉಳ್ಳಾಲ್ ಅವರು ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸುತ್ತಮುತ್ತ ಹಲವಾರು ಮರಗಿಡಗಳನ್ನು ನೀಡುವಲ್ಲಿ ಮುತುವರ್ಜಿ ವಹಿಸಿದರು. ರಾಮಕೃಷ್ಣ ವಿದ್ಯಾರ್ಥಿ ನಿಲಯದ ಉಷಾ ಬಳ್ಳಾಲ್, ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
Read Post | comments

NANA THUVODU Natakada Shubha Muhurtha

Manjeshvara Jul 10 : Vaishnavi kalavider Manjeshvara mukulu abhinaya malpuna ee varshada noothana kala kanike Nana Thuvodu panpina natakada shubha muhurtha enchipag nadathnd. Kande Badaje Shree Mahaganapathi Devasthanad muhurthada kajjo nadathnd. Averd bokka Udyavara Mada da Bhandarada ellad nadathina sabha karyakraman Sanjeeva Shetty Mada udipana malther. Udyavara Mada da Shree Raja Belchappada lesda gurkarme vahisdither. Kootada Nataka kalavider Bokka Ooruda malla binnernakulu upasthitheritther.
Read Post | comments

March 29 g Perlad Suggida Sugipu

Perla: Tuluvere ayano koota bokka Shree kshethra Darmasthala gramabhivriddi yojane perla valaya mukulena seriged March 29 g Perlada Padre sabha bhavanad nadapuna Suggida Sugipu kajjoda leppolen Tuluvere ayano kootada gurikkare Dr. Shreenidhi Saralayer Krishi Melvicharake Chidanadereg kord budugade malther. Manjeshvara Block Panchayath sadasyerayina Shankara M S gurkarme vahisditter. Ee porthudu Dr. Rajesh Alva Badiadka, Ravikantha Kesari Kadar, Sundara Baradka, Harsha Rai Puthrakala,  Jyothipushpa Saralaya, Vanajakshi Chembrakana mukulu poora upasthitheritter. B P Sheni edkondu Raghavendra Ammannaya Solme sandayer. 
Read Post | comments

Vishwa Tuluvere Parbada Mugitalada Leas


Adyar Dec14: Pariyere per koryernda parodanda lote bodu athande kali pern ovvandala paathro ejjande pariyere sadhya ejji. Anchane tulu samskrithi ejjande tulu base oriyere sadhya ejji. Anchad nama tulu samskrithin oripayere bodad kelasa malpodu anchanda mathra tulu base buleyere sadhya pand Pejavara matatha malla swamiji Sri Sri Vishweshwara theertha swamijiyer pander. Aar vishwa tuluvere parbada mugithalada lesn udipana malth patheryer.

    Ee porthudu Darmasthalada poojya kavander Dr. D Veerendra Heggader, Kudlada samsaderayina Nalin Kumar Kateel, Karnataka sarakarada manthrilayina Bi Ramanatha Rai, U T Khadar enchitthi malla malla binner pal padeditter. Dharmapala U Devadiga lesda gurkarme vahisditter. Ikala Hareesh Shetty edkondu, Nitte Shashidhara Shetty solme sandayer. Manoharaprasad sudarike malther. 
Read Post | comments

Chandragiri Kannada Dinapathrike Budugade

Badiadka: Pathrikelu samajogu kannadiyavodu, samajika kalakalid kelasamalpodu ,pathrika dharman palane malpodu anchanda mathra samajada yelige sadya pand Edaneer samsthanada Shree Shree Shree Keshvananda Bharathee swamiji pander.
Aar Uplery Shree Manthramoorthy Guliga sannidhid dakshina tulunadeda kannada dinapathrike Chandragirin budugade malthd asheervachana malther. Ee porthudu Kasaragodu M L A N A Nellikunnu ,Mahin Kelot, Dr. Shreenidhi Saralaya, Chandragiri kannada dinapathrikeda gourava sampadake  Dr. Rajesh Alva Badiadka, Chandragiri Malayala pathrikeda Ramlath Abdulla, Chandragiri kannada dinapathrikeda sampadake Jaya Maniyampare, sanchalake Harsha Rai Puthrakala mukulu poora upasthitheritther.
Read Post | comments

Upleri Manthramoorthy Guliga Sannidid Darmothsava


Badiadka : Tulunadeda karanika mann Upleri Shree Manthramoorthy Guliga sannidid 5 varsogora nadapuna kolothsava bari gougid march 1,2, 3 tharikg Dharmothsava bokka Sarvadharmasammelanada ottugu nadapere undu. March 1g kande ganapathi homadottugu suruvapina kajjodu hasiruvani horekanike meravanige ,madyana vanas  3ganteg yakshagana thalamaddale, bayyag 6 ganteg darmothsavada udipane nadapere undu. aveded bokka bethe bethe samskrithika karyakramolu bokka kanakattodchi tulu nataka pradarshana nadapere undu . March 2g kande 10ganteg yathisangama madyana 2 ganteg mathre sangama bayyag 7 ganteg sarvadharmasammelana bokka yakshagana bayalata nadapere undu.March 3g Shree Manthramoorthy Guliga daivada kolothsava nadapereundu ee lesd poojya swamijinakulu samskrithika rajakeeya netharer palpadeper pand pathrikagoshtid theripader. Uplery sannidhida pradana karmi Gopalakrishna Kulal Vanthicchal, Uthsava samithida permeda gurikkare Dr,Shreenidhi Saralaya Badiadka, Rakshadikari Karimbila Lakshmana Prabhu bokka Purushothama Acharya mukulupoora upasthitheritther.
Read Post | comments

Shringery Swamijilen Sarakary Maryaded Kadapuded Koryer


Badiadka : Karina kelavu dinadedinchi kerala yathreditthina shringery jagadguru shree Bharathytheertha mahaswamilen somavara Malla shree Durgaparameshwary devasthanodudhu sarakary maryadedottugu kadapududh koryer.
Aani kande malla shaleda suvarnamahothsava kattanogu shilanyasa malthi bokka swamileg malla kshethrodu bhakthereded padapooje bokka gurubhiokshe nadathnd.
Swamijilen kadapudud korpuna porthudu Manjeshwara shasakerayina P B Abdull Razak, Malla kshethroda mukthesare Aanemajalu Vishnu Bhatt, Dr. Rajesh Alva Badiadka, Jagannatha Rai Korekkana,Rajarama Perla, Gopalakrishna Kulal Vanthicchalu, Krishna Belchappada mukulupura upasthitheritther.
Read Post | comments

Shree Shringery Jagadguruleg Badiadkad Poornakumbha Swagatha

Badiadka : Dakshinamnaya Shree Sharadapeeta Shringeri Jagadhguru Shree Shree Bharathitheertha Mahaswamijilena kerala yathreda porthudu Feb 23, ayitharadani kerala marati sharadothsava samithi, oorda path samasther bokka shree gurusadana dakl ottad badiadkad jagadgurukuleg poornakumbha swagatha malpere thermanisader. Bayyag 3.30 ganteg nadapuna ee karyakramodu jagadgurukuleg padapooje bokka jagadgurukuleded aashirvachana nadapere undu pand sangataker pathrika goshtid theripader.
Read Post | comments

Badiadka Press Forum Udipano

Badiadka Press Forum Udipane

Badiadka Press Forum Udipane

Badiadka : Patrakarther yerenala otthadogu baliyayere balli,nisvarthavad kelasa  malpodu , gadinadeda patrakarther oggattavodu agathya savalatthuleg bidad horata malpodu pand hiriya sahithilayina Mohammad Baddoor pander. Aar badiadkada Press Forumn udipana malthd patheryer.
Ee porthudu hiriya sahithilayina Kelu Master Agalpady, hiriya pathrakartherayina Radakrishna Uliyathadka, Umesh Salyan Kasaragod, Yogish Sharma Ballapadavu,Dr.Rajesh Alva Badiadka mukulupura upasthitheritther.

Read Post | comments

Balekodi Shilanjana Kshethrodu Varsoda Kolothsava

Balekodid Koragajja daivoda kola

Balekodi swamijileg abhinandane

Balekodid Kallurty daivoda kola

Balekodi Kalabairava daivoda kola
Vitla : Bantvala thalukuda kanyana gramoda balekodi shree kashikalabhairaveshvara shilanjana kshethrodu varshavadi kolothsavo bari goujid nadathnd. Kshethroda Shree Shree Sadguru Shashikanthamani Swamijilena margadarshanodu nadathina kolothsavodu kshethroda aaradhya daivolayina Kalabhairava,Kallurty, Koragajja daivoleg narthanaseve nadathnd. Bhari sankyeda bhakthadilena seriged nadathina kolothsavoda porthudu Indo-Nepal Sadhbhavana prashasthi paded batthina poojya swamijilen kshethroda trustda padadikarilu abhinandisayer.

Read Post | comments

SUDDI

tuluworld

TULUWORLD CHANNEL

Popular Posts

ANAVARANA

KATHE

PADHO-KABITHE

BARAVU

 

Copyright © 2011 Tuluworld - All Rights Reserved