Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

JILLA SUDDI ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
JILLA SUDDI ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ತುಳುವರ್ಲ್ಡ್ ಫೌಂಡೇಷನ್ ಚಟುವಟಿಕೆಗೆ ಕಟೀಲಿನಿಂದ ಚಾಲನೆ, ತುಳುವಿಗಾಗಿ ಸಮಗ್ರ ತುಳುನಾಡ ಜನತೆ ಕೈಜೋಡಿಸಬೇಕು: ಸರ್ವೋತ್ತಮ ಶೆಟ್ಟಿ ಆಹ್ವಾನ

ಕಟೀಲು(ಸೆ.4) : ತುಳು ಭಾಷಾ ಸಂಸ್ಕೃತಿಯ ಅಭ್ಯುದಯಕ್ಕಾಗಿ ಕಾಳಜಿಯ ಕಾಯಕ ನಿರವಾಗುವ ಧ್ಯೇಯೋದ್ದೀಶದಿಂದ ಅಸ್ತಿತ್ವಕ್ಕೆ ಬಂದಿರುವ ತುಳು ವರ್ಲ್ಡ್ ಫೌಂಡೇಷನ್ ಚಟುವಟಿಕೆಗಳಿಗೆ 
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಚಾಲನೆಯಾಯಿತು. 
ಕಟೀಲು ಕ್ಷೇತ್ರದ ಅರ್ಚಕ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣರ ಉಪಸ್ಥಿತಿ ಮತ್ತು ಗೌರವಾಧ್ಯಕ್ಷತೆಯ ಸಂಘಟನೆಯ ಸೃಜನಶೀಲ ಚಟುವಟಿಕೆಯ ಮುನ್ನಡೆಗೆ ಕಟೀಲು ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂಬಂಧ ಕಟೀಲು ಕ್ಷೇತ್ರದಲ್ಲಿ ನಡೆದ ಫೌಂಡೇಷನ್ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣರು "ಪಂಚ ದ್ರಾವಿಡ ಭಾಷೆಗಳಲ್ಲೇ ಪ್ರಾಚೀನವಾದ ತುಳು ಭಾಷೆಯಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಆ ಕುರಿತು ಅರಿತು ಅಭಿಮಾನ ಪಡಬೇಕು. ತುಳು ಎಂದರೆ ಕೇವಲ ಮನೋರಂಜನಾ ಪ್ರದರ್ಶನಗಳಲ್ಲ. ಅದು ಬದುಕಿನ ಸಂಸ್ಕೃತಿ. ಇದರ ರಕ್ಷಣೆಗಾಗಿ ಜಗತ್ತಿನ ತುಳುವರೆಲ್ಲರೂ ಒಂದೇ ಕೊಡೆಯಡಿ ನೆರೆದು, ಒಂದೇ ಕುಟುಂಬದವರಂತೆ ದುಡಿಯಬೇಕು" ಎಂದರು.

ತುಳುವಿಗಾಗಿ ಕೈಜೋಡಿಸಿ
ಫೌಂಡೇಷನ್ ಅಧ್ಯಕ್ಷ ಅಬುದಾಬಿಯ ಸರ್ವೋತ್ತಮ ಶೆಟ್ಟಿ ಮಾತನಾಡಿ "ತುಳುವರಲ್ಲಿ ಒಗ್ಗಟ್ಟಿನ ಕೊರತೆ ಇದೆ. ತುಳು ಎಂದರೆ ಕೆಲವು ಜನಾಂಗದ ಭಾಷೆಯಲ್ಲ, ಅದು ಕರಾವಳಿಯ ಜನತೆಯ ಜೀವನ ಸಂಸ್ಕೃತಿ. ಈ ಕುರಿತು ಅರಿಯಬೇಕು, ಅಭಿಮಾನದಿಂದ ಜಗತ್ತಿನ ತುಳುವರೆಲ್ಲರೂ ಒಗ್ಗೂಡಬೇಕು. ತುಳುವಿನ ಬಹುಕಾಲದ ಬೇಡಿಕೆಗಳು  ಈಡೇರಬೇಕು" ಎಂದರು.


ಫೌಂಡೇಷನಿಗೆ ಕಟೀಲು ಆಸ್ಥಾನ

 ಜಾಗತಿಕ ತುಳು ಫೌಂಢೇಷನಿನ    ಔದ್ಯೋಗಿಕ ಉದ್ಘಾಟನಾ ಸಮಾರಂಭ ಶೀಘ್ರವೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೌಂಡೇಷನಿನ ಕೇಂದ್ರ ಕಛೇರಿ ಕಾರ್ಯಾಚರಿಸಲು ಕಟೀಲು ಕಾಲೇಜಿನ ಕೋಣೆಯೊಂದನ್ನು ಉಚಿತವಾಗಿ ನೀಡಲಾಗುವುದೆಂದು ಸಭೆಯಲ್ಲಿ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ ಆಸ್ರಣ್ಣರು ಘೋಷಿಸಿದರು.

ಕಟೀಲಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿಂದು ಫೌಂಢೇಷನ್ ಸ್ಥಾಪಕ, ನಿರ್ದೇಶಕ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ಅಗತ್ಯ, ಅನಿವಾರ್ಯತೆ, ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಫೌಂಢೇಷನ್ ಪ್ರಧಾನ ಕಾರ್ಯದರ್ಶಿ, ಲೇಖಕ, ಚಿಂತಕ ಪ್ರೊ. ಪುರುಷೋತ್ತಮ ಬಲ್ಯಾಯ ಬೆಳ್ಮಣ್ಣು, ಗೌ. ಸದಸ್ಯರಾದ ಲೇಖಕಿ ವಿಜಯಲಕ್ಷ್ಮಿ ಶೆಟ್ಟಿ, ಡಾ. ಮಾಧವ ಎಂ.ಕೆ, ಉಪಾಧ್ಯಕ್ಷೆ ತಾರಾ ಆಚಾರ್ಯ ಉಡುಪಿ, ಉಪಾಧ್ಯಕ್ಷ ಪ್ರೊ. ಡಿ.ಯದುಪತಿ ಗೌಡ ಬೆಳ್ತಂಗಡಿ,  ಚಂದ್ರಹಾಸ  ದೇವಾಡಿಗ ಮೂಡಬಿದ್ರೆ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ನಾ. ಚಂಬಲ್ತಿಮಾರ್, ಶಂಕರ ಸ್ವಾಮೀಕೃಪ, ಸುಖಾಲಾಕ್ಷಿ ವೈ. ಸುವರ್ಣ, ಸಂಚಾಲಕಿ ಆಶಾ ಶೆಟ್ಟಿ ಅತ್ತಾವರ, ಕಾರ್ಯದರ್ಶಿ ಭಾಸ್ಕರ್ ಕುಂಬ್ಳೆ, ಮುರಳೀ ಭಟ್ ಉಪ್ಪಂಗಳ,  ಮೊದಲಾದವರು ಉಪಸ್ಥಿತರಿದ್ದರು.
ತುಳು ಭಾಷೆ, ಸಂಸ್ಕೃತಿ ಕುರಿತು ಜಾಗತಿಕ ತುಳುವರನ್ನು ಸಂಘಟಿಸುವುದರ ಜತೆಯಲ್ಲೇ ತುಳುವಿನ ಕುರಿತಾದ ಅಧ್ಯಯನಾತ್ಮಕ ದಾಖಲೀಕರಣ ಮತ್ತು ಅಕಾಡೆಮಿಕ್ ಕೆಲಸಗಳು ನಡೆಯಬೇಕೆಂದು ಸಭೆ ನಿರ್ಧರಿಸಿತು.
ಈ ದೃಷ್ಟಿಯಲ್ಲಿ ಫೌಂಡೇಷನ್ ಮುಂದಿಡುವ ಹೆಜ್ಜೆಗೆ ವಿಶ್ವದ ಸರ್ವ ತುಳುವರ ಬೆಂಬಲ ಬೇಕೆಂದು ಬಯಸಲಾಯಿತು

Read Post | comments

ಉಜೆ ಭಸ್ಮ

                  ಉಜೆ ಪನ್ಪಿ   ಈ ಸವ್ದ ಇತ್ತೆದ ಎಚ್ಚಿನಕ್ಲೆಗ್ ತೆರಿದಿಪ್ಪೆರೆ ಸಾಧ್ಯ ಇಜ್ಜಿ . ದಾಯೆ ಪಂಡ ಉಂದು ದೈವದ ಪ್ರಧಾನ ಚಾಕಿರಿ ಭಾಗ ಆಯಿನ ಮಡ್ಯೆಲೆರೆಗ್ ಮಾತ್ರ ತೆರಿದುಪ್ಪೆರೆ ಸಾಧ್ಯ . ದುಂಬುದ ಕಾಲೊಡು ಇತ್ತೆದಲೆಕ ಸಾಬೂನು ,ಸರ್ಪು ಪೊಡಿ ಇಜ್ಜಾನ್ಡ್ . ಅಪಗ ಅಕ್ಲು ಬೊಲ್ದು ಕುಂಟು ಅರ್ದಿ ಬೊಕ್ಕ ಕುಂಟು ಪೂರ ಸೊಚ್ಚೊ ಆಯೆರೆ ಉಜೆ ಭಸ್ಮೊ ಮುರ್ಕಯಿ  ನೀರ್ಗ್ ಪಾಡೊಂತೆರ್ ನ್ದ್ ಏರೋ ಪಂಡಿ ನೆಂಪು . ಅಂಚನೆ ಪ್ರಧಾನವಾದ್ ಈ ಬೊನ್ಯೊನು ಭಸ್ಮದ ಒರಟು ದೈವೊದ ಮುಂಡ್ಯೆಗ್ ಗಲಸುನ ದಲ್ಯೊ ಪಂಡ ಬೊಲ್ದು ಕುಂಟುನು ಸುದ್ದ ಮಲ್ಪೆರೆ ಗಲಸೊಂತೆರ್.  ತಾರೆದ  ಕೊತ್ತಲಿಂಗೆ ನುಂಗಾದ್ ಅವೆತ ಚೋಲಿ ದೆತ್ತ್ದ್ ,ಪೊತ್ತಾದ್ ಬೊನ್ಯ ಮಲ್ತ್ದ್ ,ಬಾರೆದ ಕೈಲ್ಡ ದಂಡ್ ನ್ ನುಂಗಾದ್ ಪೊತ್ತಾದ್ ಬೊನ್ಯ ಮಲ್ತ್ದ್ ,ಪೆತ್ತದ ಅಂಬಿದ ಬೆಜಂಟ್ ನ್ ನುಂಗಾದ್ ಪೊತ್ತಾದ್ ಬೊನ್ಯ ಮಲ್ತ್ದ್ ಈ ಮೂಜಿ ನಮ್ಮ ಸುತ್ತ ಮುತಲಿಗೆಡ್ ತಿಕ್ಕುನ ವಸ್ತುಲೆದ ನುಂಗಾದ್ ಪೊತ್ತಾಯಿ ಬೊನ್ಯೊನು ಒಟ್ಟು ಬಿರಾದ್ ಒಂಜಿ ಮಡಿ ದಲ್ಯ ಪಂಡ ಬೊಲ್ದು ಕುಂಟುಡು ಸುತ್ತುದು ನೀರ್ಡ್ ಮುರ್ಕಾದ್ ದೆತ್ತ್ ನೆಕ್ "ಉಜೆ ಭಸ್ಮ" ಪನ್ಪಿ ಪುದರ್ . ಉಜೆತೊಟ್ಟುಗು ತಿಕ್ಕಿ ಕುಂಟು ನುಂಗಾದ್, ಉದ್ದೊಗು ಬುಡ್ಪಾಯಿ ಕುಂಟುಗು, ಬಂಗಾರ್ದ ಸರಿಯೆ ದೀದ್ ,ಮಡಿ ಮಲ್ತಿ ಕುಂಟು ನುಂಗಿ ಬೊಕ್ಕ ಉದ್ದದ ಪಲಯಿಡ್ ದೀದ್ ಪೂಜೊಡು . ಬೊಕ್ಕ ಉರುಂಟಾದ್ ಸುತ್ತುದು ಕುಂಟುನು ಮಡಿತ್ ದೀಪುನಡೆ ಮಡಿ ಸುದ್ದ ಆಂಡ್ ನ್ದ್ ಲೆಕ್ಕ . 
                                  ಬಾರೆದ ಕೈಲ್ನ್ ತಿಗ್ತ್ದ್ ,ನುಂಗಾದ್ ಪೊತ್ತಾದ್ ಬೊನ್ಯ ಮಲ್ತ್ದ್ ಭಸ್ಮ ಮಲ್ಪುನಿ
     
       ನನೊಂಜಿ ಅಭಿಪ್ರಾಯೊನು ತೂಪುಂಡ ಉಜ್ಜಿ  ಭಸ್ಮೊನು ಸುದ್ದ ಕಾರ್ಯೊಗು ಗಲಸೊಂತೆರ್ಗೆ . ಬೆಜನ್ಟ್ ದ ಬೊನ್ಯ ಅತ್ತ್ ನ್ಡ  ಕೇವ್ ಬೊನ್ಯೊನು ಗಾಲ್ತ್ ದ್ ಕಮ್ಮೆನೊಗು ದೂಪದ ಬೊನ್ಯ ಕೂಟೊಂದು ಬೊಲ್ದು ಕುಂಟುಡು ಸುತ್ತುದು ದೀವೊಂತೆರ್ಗೆ . ದುಂಬು ಪೊಣ್ಣು ಪೋದು ಪೊಂಜೊವಾಯಲ್ದ,ಪೊಂಜನಕ್ಲೆ ಆಮೆ ಸೂತಕೊಗು ಮಡ್ಡೆಲೆರ್ ಬತ್ತ್ ದ್ ಈ ಭಸ್ಮ ಕಲತ್ದ್ ,ತಲಿತ್ದ್ ಸುದ್ದ ಮಲ್ತೊನ್ತೆರ್ಗೆ . ಬಟ್ರ್ ನಕುಲ್ಲಾ ಉಂದೇ ಸುದ್ದಾಚಾರೊಗುಂದು ಮಡ್ಯೆಲೆರ್ನ ಇಲ್ಲಡೆ ಬತ್ತ್ದ್ ಉಜೆ ಭಸ್ಮ ಕೊನೊ ವೊಂತೆರ್ಗೆ,ಸುದ್ದ ಕಾರ್ಯೋಗು ಮಾತ್ರ ಗಲಸೊನ್ತೆ ರ್ಗೆ . ದುಂಬು ಮಡ್ಯೆ ಲೆರ್ ಆಮೆ ಬೆನ್ಯೆರೆ ೫ ಟ್ ಬತ್ತೆರ್ಡ ಆಮೆ ಬೆಂದ್ ದ್ ಪೋನಗ ಆಯೆ ಬಾಲೆಗ್ ಈ ಭಸ್ಮೊನು ಇಡೀ ಮೆಯ್ಕ್ ಪೂಜಿದ್ ಮೀಪಾಲೆಂದ್ ಕೊರ್ದು ಪೋವೊಂತೆಗೆ . ಉಂದು ಉಜೆ ಭಸ್ಮ . ಆಂಡ ಇತ್ತೆ ಮಡ್ಯೆ ಲೆರ್ ಆಮೆ ಬೆನ್ರೆ ಬರ್ಪಿನ ಕಿರಮ ಇಜ್ಜಿ. ಅಕ್ಲೆಗ್ ಇತ್ತೆ  ಆಮೆ ಸೂತಕೊಗು ಪನ್ಪುನಕುಲ್ಲ ಇಜ್ಜಿ . ಇತ್ತೆ ದೇವೆರೆ ನೀರ್ ಕನತ್ ದ್ ತಲಿತ್ ನಡೆ ಆಮೆ ಸುದ್ದಾನ್ಡ್ ಪಂಡ್ ದ್ ಎನ್ಯುವೆರ್ . ಇತ್ತೆ ದುಂಬುದ ತುಳುವ ನಾಡ್ ದ ಸಂಪ್ರದಾಯ ಪೂರ ನಾಶ ಆವೊಂದಿಪ್ಪುನವು ದುರಂತ .
                         ಕೊತ್ತಲಿಂಗೆನ್ ನುಂಗಾದ್ ಚೋಲಿ ದೆತ್ತ್ದ್ ಚೋಲಿನ್ ಪೊತ್ತಾದ್ ಬೊನ್ಯ ಮಲ್ತ್ದ್ ಭಸ್ಮ ಮಲ್ಪುನಿ

          ಈ ಉಜೆ ಭಸ್ಮ ಕಾಸಿ ಬಾಗೀರ್ತಿ ಸೀರ್ತೋರ್ದ್ ಲ ಜಾಸ್ತಿ ಮಾನಾದಿಗೆ ಪಡೆದಿತ್ತ್ ನ್ಡ್ . ಆಂಡ ದೈವ ಸಾನದ ಉಲಯಿ ಪೋದು ಚಾಕಿರಿ ಮಲ್ತೊನ್ತಿನ ಮಡ್ಯೆಳೆರ್ ಸಾನೊರ್ದು ಪಿದಾಯಿ ಬೂರ್ದು ದೈವದ ಮುಗ ಪತ್ತ್ದ್ ದರಿಪುಲೆಕಾನ್ಡ್ . ಒವ್ವೆ ದೈವ ಚಾಕಿರಿದ ಕಲೊಟು ಅಕ್ಲ್ ಬೊಲ್ದುದ ಶುದ್ಧದ ದುತ್ತೈ ತ ಬುಡ್ದು ಬೇತೆ ತುತ್ತಯೆರ್ .೧೦-೧೧ ತಿಂಗೊಲು ಇಜ್ಜಾ ವರ್ಸೊಡು ನಡಪೊಡಾಯಿನ ಬಾಲೆ ನಡತ್ ಜಿಂಡ ಮಲ್ಪೊಡಾಯಿನ ಬೇಲೆನ್ ಬಾಲೆ ಮಲ್ತಿಜಿಂಡ ಆ ಬಾಲೆಗ್ ಆಮೆ ಸೊಂಕ್ದ್ ನ್ಡ್ ನ್ದ್,ಮುಟ್ಟಿ ಚಟ್ಟೆ ಆತ್ ನ್ಡ್ ,ಆ ಬಾಲೆನ್ ಮಡ್ಡೆಲ ಕಲ್ಲ್ ಡ್ ಕುಲ್ಲಾದ್  ಮೀಪಾವೊಡುಂದು ಪನೊಂತೆರ್ . ನರಮಾನಿ ಸೊರೊ ಕೇನುನ ದುಂಬು ಪುಲ್ಯಕಲೊಗು ಮಡಿ ತೊಯ್ಪುನ ಮಡ್ಯೆಲೆ ಮಡ್ಯೆಲ ಕಲ್ಲ್ ದ ಮಿತ್ತ್ ಬಾಲೆನ್ ಕುಲ್ಲದ್ ಆ ಬಾಲೆನ್ ಆಯೆ  ಮೀಪಂಡ ಮುಟ್ಟಿಚಟ್ಟೆ  ದೋಸ ದೂರಾದ್ ಬಾಲೆಗ್ ನಡಪೆರೆ ಕೈಕಾರ್ ಸರಿ  ಬರ್ಪುಂಡು . ಆತ್ ಶಕ್ತಿ ಇಪ್ಪೆದ್ ನ್ಡ್ ಮಡ್ಯೆಲೆರ್ ಬಾಲೆನ್ ಮೀಪಾವುನ ನೀರ್ಗ್ .ಮಡಿ ಮಲ್ಪುನ ಮಡ್ಯೆಲೆರೆಡ ಇನಿಲಾ ಉಜೆ ಭಸ್ಮ ಕೇಂಡ ಅಕ್ಲು ಖಂಡಿತ ಕೊರ್ಪೆರ್ . 
                   

                                                                ಪೆತ್ತದ ಅಂಬಿದ ಬೆಜಂಟ್

        ದೈವದ  ಪಟ್ಟದ ಮುಗ ದೀಯೆರೆ ದಲ್ಯ ಪಾಡೆರೆ ,ಮುಂಡ್ಯೆಡ್ ಮುಗ ದೀಯೆರೆ ದಲ್ಯ ಪಾಡೆರೆ ,ಕೊಡಿಯಡಿತ ಮುಗ ಮೂರ್ತಿ ದೀಪುನ ದಲ್ಯ ಪಾಡೆರೆ ,ಸಿಂಗದನ ದಲ್ಯ ಪಾಡೆರೆ ಸುದ್ದೊಗು ಉಜೆ ಭಸ್ಮ ಗಲಸುವೆರ್.ದೈವದ ದಲ್ಯೊಗು ಪಂಡ ಬೊಲ್ದು ಕುಂಟುಗು ಉಜೆ ಭಸ್ಮ ಅಗತ್ಯ . ದೈವದ ಕೊಡಿಯಡಿತ ಮೇಲ್ಕಾಪಾವಡ್ [ಬಾಲುಲಿ ],ಮಕರ ಚೋರ್ನದ ದಲ್ಯ ಆವಡ್ ಅವೆನ್ ಮಡ್ಯೆಲೆರೇ ಪಾಡುನಿ . ದುಂಬುದ ಕಾಲೊಡು ಮಡ್ಯೆಲೆರೆ ಪೌರಹಿತ್ಯೋಡು ತುಳುನಾಡ ಮದ್ಮೆಲು ನಡತೊಂತ .ಇನಿ ಅಡೆ ವೈದಿಕತೆ ಬತ್ತ್ ನ್ಡ್ . ಮದ್ಮೇದ ದೊಂಪಡ್ ಮಡ್ಯೆಲೆರಿತ್ತೆರ್ ಪಂಡ ಉಜೆ ಭಸ್ಮದ ಸುದ್ಧತೆ ಆ ಜಾಗೆಡಿತ್ತಿಲೆಕೊನೆನ್ದ್ ನಂಬಿನಕ್ಲ್ ತುಳುವೆರಾದಿತ್ತೆರ್ . ಇನಿ ವೈದಿಕ ದೇವೆರೆ ಸೀರ್ತೊಗು ಉಜೆ ಭಸ್ಮ ಬಿರಾದ್ ಆಮೆ ಸೂತಕ ಕಳೆಯೆರೆ ತಲಿಪುನ ಕಿರಮ ಕೆಲವು ತಿಕ್ಕ್ ಡ್ ತೋಜುಂಡು. ಇಂಚ ಮಲ್ಪುನವು ತಪ್ಪು . ಉಜೆ ಭಸ್ಮೊಗು ಅವೆತನೇ ಆಯಿನ ಪಾವಿತ್ರ್ಯ ಉಂಡು  . ಉಂದು ಉಜೆ ಭಸ್ಮದ ಮಾನಾದಿಗೆ .

ಕೆ. ಮಹೇಂದ್ರನಾಥ್ ಸಾಲೆತ್ತೂರು

ಲೇಖನೊಗು ಸಕಾಯೊ :-
ಉಮೇಶ್ ಶಿರಿಯ
ಪ್ರಶಾಂತ್ ಬಂಗೇರ        
         
Read Post | comments

ತುಳು ಎಂಟನೇ ಪರಿಚ್ಛೇದಕ್ಕೆ ಸೇರಿದರೆ ಲಾಭ ಕರ್ನಾಟಕಕ್ಕೆ : ಮಲ್ಲಿಕಾರ್ಜುನಯ್ಯ ಸ್ವಾಮಿ ಮಹಾಮನೆ - ಬೆಂಗಳೂರಿನಲ್ಲಿ ತುಳು-ಕನ್ನಡ ಸ್ನೇಹ ಸಮ್ಮೇಳನಕ್ಕೆ ತಯಾರಿ



ಈಗಾಗಲೇ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುವರು ನಿರಂತರ ಹೋರಾಟ ಮಾಡುತ್ತಾರೆ. ಅವರ ಹೋರಾಟಕ್ಕೆ ಕನ್ನಡಿಗರಾದ ನಾವೆಲ್ಲರೂ ಕೈಜೋಡಿಸಬೇಕು. ಈಗಾಗಲೇ ಕೇರಳ ಸರಕಾರವು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ ಪಡುತ್ತಿದೆ. ತುಳು ಕರ್ನಾಟಕದಲ್ಲಿ ಅಧಿಕೃತ ಭಾಷೆಯಾದರೆ ಭಾಷೆಗೆ ಸಿಕ್ಕುವ ಎಲ್ಲಾ ಸವಲತ್ತುಗಳು ಕರ್ನಾಟಕದ ಪಾಲಾಗುತ್ತದೆ. ಈ ಭಾಷೆಗೆ ಸಿಕ್ಕುವ ಆರ್ಥಿಕ ಬೆಂಬಲದಿಂದ ಕರ್ನಾಟಕದ ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ನಮ್ಮ ಸಂಸ್ಕೃತಿ ಭಾಷೆ ಅನ್ಯರ ಪಾಲು ಆಗುವುದಕ್ಕಿಂತ ಮೊದಲು ರಾಜ್ಯ ಎಚ್ಚೆತ್ತುಕೊಳ್ಳಬೇಕು ಎಂದು ಖ್ಯಾತ ರಂಗನಿರ್ದೇಶಕ ಮಲ್ಲಿಕಾರ್ಜುನಯ್ಯ ಸ್ವಾಮಿ ಮಹಾಮನೆ ಅಭಿಪ್ರಾಯಪಟ್ಟರು.
ಅವರು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ರಾಜಧಾನಿಯಲ್ಲಿ ತುಳುವರ್ಲ್ಡ್ ಮಂಗಳೂರು ಮತ್ತು ಸಂಭ್ರಮ ಬೆಂಗಳೂರು ಇವುಗಳ ಆಶ್ರಯದಲ್ಲಿ ನಡೆಯಲಿರುವ ತುಳು-ಕನ್ನಡ ಸ್ನೇಹ ಸಮ್ಮೇಳನದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜಗೋಪಾಲ ರೈ ಮಂಗಳೂರು  ಡಾ. ಕೆಎನ್ ಅಡಿಗ,ಭಾಸ್ಕರ ಕಾಸರಗೋಡು, ವೇಣುಗೋಪಾಲ್ ಆಚಾರ್ಯ ಕಾಸರಗೋಡು, ಪುರುಷೋತ್ತಮ ಚೇಂಡ್ಲ,  ಚಂದ್ರಹಾಸ ಎಸ್, ಎನ್ನೇಬಿ ಮೊಗ್ರಾಲ್ ಪುತ್ತೂರು, ರಾಮಚಂದ್ರ ಸೂರಂಬೈಲು,ರಾಜಾರಾಮ್ ಶೆಟ್ಟಿ ಉಪ್ಪಳ, ದಯಾನಂದ ಕೆಬಿ ಕುಂಬಳ, ವಿಜಯಕುಮಾರ್ ಕುಲಶೇಖರ, ಸುಂದರ್ ರಾಜ್ ರೈ, ಮಂಜುನಾಥ ಅಡಪ್ಪ, ಜಯಂತ್ ರಾವ್, ಉಷಾ ಬೆಂಗಳೂರು,  ಸತೀಶ ಅಗಪಲ್, ಭರತ್ ಕರವೇ, ಆಶಾನಂದ ಕುಲಶೇಖರ, ಎಲ್ ಸುಧಾ ಬೆಂಗಳೂರು, ಚೆನ್ನಕೇಶವ ಮೂರ್ತಿ ಬೆಂಗಳೂರು, ಪದ ದೇವರಾಜ್, ಮಂಜುನಾಥ್ ಎನ್ ಬೆಂಗಳೂರು.  ಮೊದಲಾದವರು ಉಪಸ್ಥಿತರಿದ್ದರು. ಸಂಭ್ರಮ ಬೆಂಗಳೂರು ಅಧ್ಯಕ್ಷ ಜೋಗಿಲ ಸಿದ್ದರಾಜು  ಸ್ವಾಗತಿಸಿ, ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ  ಕಾರ್ಯಕ್ರಮ ನಿರೂಪಿಸಿದರು.

Read Post | comments

ತುಳು ಕಾವ್ಯಯಾನ ಭಾಷೆಯ ಬೆಳವಣಿಗೆಗೆ ಪೂರಕ : ಹರಿಕೃಷ್ಣ ಪುನರೂರು (ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ)


ವಿಜಯಕುಮಾರ್ ಕೊಡಿಯಾಲಬೈಲ್ ಅವರಿಗೆ ತುಳು ವರ್ಲ್ಡ್ ಸಮ್ಮಾನ್



ಡಾಆರ್ಕೆನಾಯರ್ ಅವರಿಗೆ ತುಳು ವರ್ಲ್ಡ್ ಸಮ್ಮಾನ್

        ತುಳುವರ್ಲ್ಡ್ ಸಂಸ್ಥೆಯು ತುಳು ಕಾವ್ಯಯಾನವನ್ನು ಆರಂಭಿಸಿರುವುದು ಶ್ಲಾಘನೀಯ ತುಳು ಕಾವ್ಯಗಳ ಅಧ್ಯಯನ ಮತ್ತು ವಾಚನ ಪ್ರವಚನಗಳಿಂದ ತುಳುಭಾಷೆಯ ವ್ಯಾಕರಣ ಮತ್ತು ಶಬ್ದಭಂಡಾರ ಗಳ ಪರಿಚಯ ಆಗುತ್ತದೆ ಎಂದು ಹರಿಕೃಷ್ಣ ಪುನರೂರು ಅವರು ಅಭಿಪ್ರಾಯಪಟ್ಟರು.ಅವರು ತುಳುವಿನ ಮಹಾ ಕವಿಗಳಲ್ಲಿ ಒಬ್ಬರಾದ ಕೆದಂಬಾಡಿ ಜತ್ತಪ್ಪ ರೈಗಳ ಅಸನಿ ಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ ಕಾರ್ಯಕ್ರಮವನ್ನು ಮಂಗಳೂರಿನ ಪೊಲೀಸ್ ಲೇನ್ನಲ್ಲಿರುವ ಮುನೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತುಳುವರ್ಲ್ಡ್ ಮಂಗಳೂರು ನೇತೃತ್ವದಲ್ಲಿ ನಡೆದ ತುಳು ಕಾವ್ಯಯಾನ ೨ ಮತ್ತು ಪ್ರಜ್ವಲ್ ಆಕ್ಟಿಂಗ್ ಕ್ಲಾಸಿನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರವೀಣ್ ಕುಮಾರ್ ಕೊಡಿಯಲ್ ಬೈಲ್, ಸದಸ್ಯರು ತುಳು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾತನಾಡಿ ತುಳು ಭಾಷೆಯ ಬಗ್ಗೆ ಮಾತನಾಡುವವರು ಜಾಸ್ತಿ ವಿನಹ ಕಾರ್ಯಪ್ರವೃತ್ತರಾಗುವ ಸಂಖ್ಯೆ ಬಹಳ ಕಡಿಮೆ, ಪ್ರತಿಯೊಬ್ಬರೂ ಒಮ್ಮತದಿಂದ ಹೋರಾಟ ಮನೋಭಾವದಿಂದ ಕಾರ್ಯಪ್ರವೃತ್ತರಾದರೆ ಮಾತ್ರ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಖ್ಯಾತ ತುಳು ವಿದ್ವಾಂಸ ಡಾ. ವೈ ಎನ್ ಶೆಟ್ಟಿ ಮಾತನಾಡಿ ತುಳುವಿನ ಲಿಪಿ ಮತ್ತು ಸಂಸ್ಕೃತಿಯನ್ನು ಎರಕಹೊಯ್ದ ಕೇರಳ ಇಂದು ಜಗತ್ತಿನಲ್ಲಿ ಶ್ರೇಷ್ಠ ನಾಗರೀಕತೆಯನ್ನು ಹೊಂದಿದೆ. ನಮ್ಮ ತಂಞನ (ತಂಗಳನ್ನ) ಮಲಯಾಳದಲ್ಲಿ ಪಯಾಂಕಂಜಿ ಅದಕ್ಕೆ ಯುನೆಸ್ಕೊ ಜಗತ್ತಿನ ಅತ್ಯಂತ ಶ್ರೇಷ್ಠ ಉಪಹಾರ ಎಂದು ಮಾನ್ಯತೆ ನೀಡಿದೆ. ಇಂದು ತುಳು ಭಾಷೆ ಯುವಜನರನ್ನು ತುಂಬಾ ಆಕರ್ಷಿಸುತ್ತಿದೆ ಇಂಗ್ಲೀಷ್‌ ಬಿಟ್ಟು ತುಳುವಲ್ಲಿ ಮಾತನಾಡಲು ಅಭಿಮಾನ ಪಡುತ್ತಿದ್ದಾರೆ ಇದು ತುಳು ಭಾಷೆಯ ಬೆಳವಣಿಗೆಯ ಲಕ್ಷಣ ಎಂದರು.
ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ,, ಸಿನಿಮಾ ನಟ ಪ್ರಣವ್ ಹೆಗ್ದೆ, ಕಲಾವಿದ ಕುಮಾರ್ ಸಾಲ್ಮಾರ್, ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಅಕಾಡೆಮಿಯ ಝೆಡ್. . ಕೈಯಾರ ಕಲಾವಿದ ಶರತ್ ಆಳ್ವ ರಾಷ್ಟ್ರೀಯ ಕನ್ನಡಸಿರಿ ಉತ್ಸವದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಜಾನಪದ ಪರಿಷತ್ ಬೆಂಗಳೂರು ಇದರ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎ.ಆರ್ ಸುಬ್ಬಯ ಕಟ್ಟೆ, ಮಾಧವ ಭಂಡಾರಿ, ಮುರಳಿ ಉಪ್ಪಂಗಳ ಮೊದಲಾದವರು ಉಪಸ್ಥಿತರಿದ್ದರು.

ತುಳುವರ್ಲ್ಡ್ ಸಮ್ಮಾನ್
ಫಾರೆಸ್ಟ್ ಅಂಡ್ ಎನ್ವಿರೋ ಕ್ರಿಯೇಟರ್ಸ್ ಫೌಂಡೇಶನ್ ಗುಜರಾತ್ ಇದರ ಸ್ಥಾಪಕ. ಭಾರತದಾದ್ಯಂತ ಸುಮಾರು ನಲವತ್ತಕ್ಕೂ ಹೆಚ್ಚು ಬಂಜರು ಭೂಮಿಗಳಲ್ಲಿ ಕಾಡುಗಳನ್ನು ಬೆಳೆಸಿದ ಪರಿಸರಸ್ನೇಹಿ, ಗುಜರಾತಿನಲ್ಲಿ ಸುಮಾರು 16 ಸಾವಿರಕ್ಕಿಂತ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ ಮಾಡಿಕೊಟ್ಟ. ತುಳುನಾಡಿನ ಮುಟ್ಟಾಳೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸಿದ ಡಾ. ಆರ್. ಕೆ. ನಾಯರ್ ಹಾಗೂ ತುಳು ರಂಗಭೂಮಿಯ ಭೀಷ್ಮ. ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸನ್ಮಾನಿತ ವಿಜಯಕುಮಾರ್ ಕೊಡಿಯಾಲಬೈಲ್ ಅವರಿಗೆ ತುಳು ವರ್ಲ್ಡ್ ಸಮ್ಮಾನ್ ನೀಡಿ ಗೌರವಿಸಲಾಯಿತು.
        ತುಳುವರ್ಲ್ಡ್ ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ ತರಬೇತುದಾರರಾದ ಡಾ. ಅಶೋಕ್ ಕುಮಾರ್ ಕಾಸರಗೋಡು, ಜಿ. . ಬೋಳಾರ್, ಪ್ರಜ್ವಲ್ ಪೂಜಾರಿ, ರೂಪೇಶ್ ರೋಹಿತ್ ಶೆಟ್ಟಿ, ಅನ್ವಿತಾ ಅರವಿಂದ್ ಇವರನ್ನು ಅಭಿನಂದಿಸಲಾಯಿತು. ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗಿ ಕಾಂತಗ ಜೋಗಿ ಕಾವ್ಯದ ವಾಚನವನ್ನು ಪ್ರಶಾಂತ್ ರೈ ಪುತ್ತೂರು ಮತ್ತು ಅಮೃತಾ ಅಡಿಗ ಪಾಣಾಜೆ ಇವರ ಸುಶ್ರಾವ್ಯ ಕಂಠದಲ್ಲಿ ವಾಚಿಸಿದರೆ, ತುಳುನಾಡಿನಲ್ಲಿ ನಡೆದ ಘಟನೆಯಂತೆ ಇರುವ ಕಾವ್ಯದ ಪ್ರವಚನವನ್ನು ಭಾಸ್ಕರ್ ರೈ ಕುಕ್ಕುವಳ್ಳಿ ಮನೋಜ್ಞವಾಗಿ ಮನವರಿಕೆ ಮಾಡಿದರು ಮತ್ತು ಮದ್ದಳೆಯಲ್ಲಿ ಕೌಶಲ್ ಮೂಡಬಿದ್ರೆ ಸಹಕರಿಸಿದರು. ಸಂದರ್ಭದಲ್ಲಿ ತುಳು ವರ್ಲ್ಡ್ ಚಾನಲ್ ನಲ್ಲಿ ಪ್ರಸಾರವಾಗುವ ಅನಾವರಣ ಕಾರ್ಯಕ್ರಮದ ಬಿಡುಗಡೆ ನಡೆಯಿತು. ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜೇಶ್ ಆಳ್ವ ಸ್ವಾಗತಿಸಿದರು.

Read Post | comments

ಅಸನಿಯಾಗ ಕಾಂತಗ ಜೋಗಿ ತುಳು ಕಾವ್ಯಯಾನ-2 ಹಾಗೂ ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ ಸಮಾರೋಪ



ತುಳುವಿನ ಮಹಾ ಕವಿಗಳಲ್ಲಿ ಒಬ್ಬರಾದ ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ ಕಾರ್ಯಕ್ರಮವು ಫೆಬ್ರವರಿ 1ರಂದು ಮಂಗಳೂರಿನ ಪೆÇಲೀಸ್ ಲೇನ್ ನಲ್ಲಿರುವ ಮುನೀಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 2:00 ಗಂಟೆಯಿಂದ ನಡೆಯಲಿದೆ. ತುಳುವಲ್ರ್ಡ್ ಮಂಗಳೂರು ನೇತೃತ್ವದಲ್ಲಿ ನಡೆಯುವ ತುಳು ಕಾವ್ಯಯಾನದ  ದ್ವಿತೀಯ ಕಾರ್ಯಕ್ರಮದ ಜೊತೆಗೆ ಪ್ರಜ್ವಲ್ ಆಕ್ಟಿಂಗ್ ಕ್ಲಾಸಿನ ಸಮಾರೋಪ ಸಮಾರಂಭವು ಈ ಸಂದರ್ಭದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ನಿರ್ವಹಿಸಲಿದ್ದಾರೆ. ತುಳು ಕಾವ್ಯಯಾನದ ಉದ್ಘಾಟನೆಯನ್ನು ಮಂಜುನಾಥ ಶೆಟ್ಟಿ, ಅಸಿಸ್ಟೆಂಟ್ ಕಮಿಷನರ್ ಆಫ್ ಪೆÇಲೀಸ್ ಮಂಗಳೂರು ಅವರು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವೀಣ್ ಕುಮಾರ್ ಕೊಡಿಯಲ್ ಬೈಲ್, ಸದಸ್ಯರು ತುಳು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಅವರು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಸಿನಿಮಾ ನಟ ಬೋಜರಾಜ್ ವಾಮಂಜೂರು, ನಟ ನಿರ್ದೇಶಕ ರೂಪೇಶ್ ಶೆಟ್ಟಿ, ದಿವಾಕರ ಪಾಂಡೇಶ್ವರ, ತಾರನಾಥ ಶೆಟ್ಟಿ ಬೋಳಾರ್, ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಸಿನಿಮಾ ನಟ ಪವನ್ ಹೆಗ್ಡೆ, ಕಲಾವಿದ ಶರತ್ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ.

ತುಳುವಲ್ರ್ಡ್ ಸನ್ಮಾನ್
ಫಾರೆಸ್ಟ್ ಅಂಡ್ ಎನ್ವಿರೋ ಕ್ರಿಯೇಟರ್ಸ್ ಫೌಂಡೇಶನ್ ಗುಜರಾತ್ ಇದರ ಸ್ಥಾಪಕ. ಭಾರತದಾದ್ಯಂತ ಸುಮಾರು ನಲವತ್ತಕ್ಕೂ ಹೆಚ್ಚು ಬಂಜರು ಭೂಮಿಗಳಲ್ಲಿ ಕಾಡುಗಳನ್ನು ಬೆಳೆಸಿದ ಪರಿಸರಸ್ನೇಹಿ, ಗುಜರಾತಿನಲ್ಲಿ ಸುಮಾರು 16 ಸಾವಿರಕ್ಕಿಂತ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ ಮಾಡಿಕೊಟ್ಟ, ತುಳುನಾಡಿನ ಮುಟ್ಟಾಳೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಿದ ಡಾ. ಆರ್. ಕೆ. ನಾಯರ್ ಹಾಗೂ ತುಳು ರಂಗಭೂಮಿಯ ಭೀಷ್ಮ, ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸನ್ಮಾನಿತ ವಿಜಯ್‍ಕುಮಾರ್ ಕೊಡಿಯಾಲ್‍ಬೈಲ್ ಅವರಿಗೆ ತುಳುವಲ್ರ್ಡ್ ಸಮ್ಮಾನ್ ನೀಡಿ ಗೌರವಿಸಲಾಗುವುದು. ಡಾ. ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಬಾಳೆಕೋಡಿಮಠ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು.
ತುಳುವಲ್ರ್ಡ್ ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ ತರಬೇತುದಾರರಾದ ಡಾ. ಅಶೋಕ್ ಕುಮಾರ್ ಕಾಸರಗೋಡು, ಜಿ. ಎ. ಬೋಳಾರ್, ಪ್ರಜ್ವಲ್ ಪೂಜಾರಿ, ರೂಪೇಶ್ ರೋಹಿತ್ ಶೆಟ್ಟಿ, ಅನ್ವಿತಾ ಅರವಿಂದ್ ಮೊದಲಾದವರನ್ನು ಗೌರವಿಸಲಾಗುವುದು. ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗ ಕಾಂತಗಜೋಗಿ ಕಾವ್ಯದ ವಾಚನವನ್ನು ಪ್ರಶಾಂತ್ ರೈ ಪುತ್ತೂರು ಮತ್ತು ಅಮೃತ ಅಡಿಗ ಪಾಣಾಜೆ ಹಾಗೂ ಪ್ರವಚನವನ್ನು ಭಾಸ್ಕರ್ ರೈ ಕುಕ್ಕುವಳ್ಳಿ ನಡೆಸಿಕೊಡಲಿದ್ದಾರೆ. ತುಳುವಲ್ರ್ಡ್ ಆಯೋಜಿಸಿರುವ ಸಾಧಕ ವ್ಯಕ್ತಿಗಳ ಬಗ್ಗೆ ಪತ್ರಕರ್ತ ರವಿ ನಾಯ್ಕಪು ಅವರ ನಿರೂಪಣೆಯಲ್ಲಿ ದಾಖಲೀಕರಣ ಮಾಡಲಿರುವ ಅನಾವರಣದ ಪ್ರಥಮ ಸಂಚಿಕೆಯ ಬಿಡುಗಡೆಯನ್ನು  ಝೆಡ್. ಎ. ಕೈಯಾರ ಅವರು ನಿರ್ವಹಿಸಲಿದ್ದಾರೆ. ಎಂದು ತುಳುವಲ್ರ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ, ಮತ್ತು ಸದಸ್ಯರಾದ ಮುರಳಿ ಉಪ್ಪಂಗಳ, ಮಾಧವ ಭಂಡಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Read Post | comments

ಮುಂಬೈಯಲ್ಲಿ ಗೀತೋತ್ಸವ 2020 ಹೊರನಾಡ ಸಮ್ಮೇಳನ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ


ಮುಂಬೈಯಲ್ಲಿ ಜನವರಿ 11, 12 ರಂದು ನಡೆಯುವ ಗೀತೋತ್ಸವ 2020 ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಎರಡು ದಿನಗಳ ಕಾರ್ಯಕ್ರಮಗಳ ರೂಪುರೇಷೆಗಳನ್ನು ನೋಡಿ ಕಾರ್ಯಕ್ರಮ ಸಂಘಟಕರನ್ನೂ ಅಭಿನಂದಿಸಿ ಶುಭ ಹಾರೈಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಇದರ ಮತ್ತು ಮಹಾರಾಷ್ಟ್ರ ಘಟಕದ ಸಂಯುಕ್ತಾಶ್ರಯದಲ್ಲಿ ಜನವರಿ 11 ಮತ್ತು 12 ರಂದು ಮುಂಬೈಯ ರಾಧಾಬಾಯಿ ಸಭಾಭವನ ಬಂಟರ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಸಮ್ಮೇಳನ ಅಧ್ಯಕ್ಷತೆಯನ್ನು ಡಾ. ಜಯಶ್ರೀ ಅರವಿಂದ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಹಿಮೆಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರು ನೆರವೇರಿಸಲಿದ್ದಾರೆ. ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಗೀತೋತ್ಸವ 2020 ಸ್ವಾಗತ ಸಮಿತಿ ಅಧ್ಯಕ್ಷ ಡಾ. ಆರ್. ಕೆ. ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ. ಆರ್. ಸುಬ್ಬಯ ಕಟ್ಟೆ , ಡಾ. ರಾಜೇಶ್ ಆಳ್ವ ಬದಿಯಡ್ಕ, ಹರಿದಾಸ ಕೆಆರ್ ಜಯಾನಂದ, ಕರ್ನಾಟಕ ಸುಗಮ ಸಂಗೀತ ಪರಿಷತ್ ಮಹಾರಾಷ್ಟ್ರ ಘಟಕದ ಸಂಚಾಲಕ ಕೃಷ್ಣ ಬಿ ಶೆಟ್ಟಿ, ಗೌರವ ಸಲಹೆಗಾರರು ಭಾಸ್ಕರ್ ಸುವರ್ಣ ಸಸಿಹಿತ್ಲು, ನಿಲೇಶ್ ಶೆಟ್ಟಿಗಾರ್ ಉದ್ಯಮಿ ಮೊದಲಾದವರು ಉಪಸ್ಥಿತರಿದ್ದರು.
Read Post | comments

ಏಳದೆ ಮಂದಾರ ರಾಮಾಯಣ: ಸುಗಿಪು - ದುನಿಪು' ಉದ್ಘಾಟನೆ ಮಂದಾರ ರಾಮಾಯಣ ತುಳುನಾಡಿನ ಅಸ್ಮಿತೆಯನ್ನು ಸಾರುವ ಮಹಾಕಾವ್ಯ : ಡಾ. ಪ್ರಭಾಕರ ಜೋಶಿ


ಮಂಗಳೂರು: 'ಮೂಲ ರಾಮಾಯಣದ ಕಥೆಯನ್ನೇ ಆಧರಿಸಿ ಮಂದಾರ ಕೇಶವ ಭಟ್ಟರು ರಾಮಾಯಣ ಬರೆದಿದ್ದರೂ ಸನ್ನಿವೇಶಗಳೆಲ್ಲವೂ ಮನಸ್ಸಿಗೆ ಮುಟ್ಟುವಂತೆ ಹಾಗೂ ಸುಲಭವಾಗಿ ಅರ್ಥವಾಗುವಂತೆ ಮಂದಾರ ರಾಮಾಯಣ ಮೂಡಿಬಂದಿದೆ. ಮೂಲತಹ ಕರಾಡ ಭಾಷಿಕರಾಗಿದ್ದರೂ ಅವರ ತುಳುವಿನ ಪ್ರೇಮ ಈ ಗ್ರಂಥದಲ್ಲಿ ಪ್ರಜ್ವಲಿಸುತ್ತಿದೆ. ತುಳುವಿನ ಭಾಷಾ ಪ್ರೌಢಿಮೆ ಶಬ್ದ ಭಂಡಾರಗಳು ಹಾಗೂ ತುಳುನಾಡಿನ ಆಚಾರ ವಿಚಾರ,ಪ್ರಕೃತಿ ಸೌಂದರ್ಯ ಈ ತುಳು ಮಹಾಕಾವ್ಯದಲ್ಲಿ ಎದ್ದು ತೋರುವುದರಿಂದ ಇದು ತುಳುನಾಡಿನ ಅಸ್ಮಿತೆಯನ್ನು ಸಾರುವ ಮೇರು ಕೃತಿ' ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಮತ್ತು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ. 



          ತುಳುವರ್ಲ್ಡ್ ಕುಡ್ಲ ಹಾಗೂ ತುಳುವೆರೆ ಕೂಟ ಶಕ್ತಿನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಕ್ತಿನಗರದ ತುಳುವೆರೆ ಚಾವಡಿಯಲ್ಲಿ ನಡೆಯುತ್ತಿರುವ 'ಏಳದೆ ರಾಮಾಯಣ: ಸುಗಿಪು - ದುನಿಪು' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂದಾರ ಕೇಶವ ಭಟ್ಟರ ಕುರಿತು ಅವರು ಮಾತನಾಡಿದರು. 'ಪ್ರತಿಯೊಂದು ಅಧ್ಯಾಯಕ್ಕೂ ತುಳುವಿನ ಸೂಕ್ತವಾದ ಶಿರೋನಾಮೆಯನ್ನು ನೀಡುವಲ್ಲಿ ಕೇಶವ ಭಟ್ಟರು ತನ್ನ ಸಾಹಿತ್ಯ ಪ್ರೌಢಿಮೆಯನ್ನು ತೋರಿಸಿದ್ದಾರೆ. ಇಂತಹ ಮಹಾನ್ ಗ್ರಂಥವು ಯಾವುದೇ ಭಾರತೀಯ ಮಹಾಕಾವ್ಯಗಳಿಗೆ ಕಡಿಮೆಯಲ್ಲ. ಮಂದಾರ ಕೇಶವ ಭಟ್ಟರ 101ನೇ ಜನ್ಮ ವರ್ಷದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜವಾಗಲೂ ಶ್ಲಾಘನೀಯ,' ಎಂದವರು ಸಂಘಟಕರನ್ನು ಅಭಿನಂದಿಸಿದರು.
      ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ  ಅಕಾಡೆಮಿಯ ಅಧ್ಯಕ್ಷರಾದ ಎ ಸಿ ಭಂಡಾರಿ ಉದ್ಘಾಟಿಸಿದರು. ತುಳುವೆರೆ ಆಯನ ಕೂಟ ಮಂಗಳೂರು ಇದರ ಗೌರವಾಧ್ಯಕ್ಷ ಡಾ. ಆರೂರು ಪ್ರಸಾದ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ತುಳುನಾಡು ಟ್ರಸ್ಟ್ ಇದರ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ವಾಚನ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಜಯಚಂದ್ರ ವರ್ಮಾ ರಾಜ ಮಾಯಿಪ್ಪಾಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರ, ಸಂಘಟಕ ನವನೀತ ಶೆಟ್ಟಿ ಕದ್ರಿ, ಮಂದಾರ ಶಾರದಾಮಣಿ, ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮುಲ್ಕಿ, ಬಿಕರ್ನಕಟ್ಟೆ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ತುಳುವೆರೆ ಕೂಟದ ಉಪಾಧ್ಯಕ್ಷ ಯನ್  ವಿಶ್ವನಾಥ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾ ಮೆನನ್, ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಮಂದಾರ ಸಮ್ಮಾನ್
 ಈ ಸಂದರ್ಭದಲ್ಲಿ ಡಾ. ಆರೂರು ಪ್ರಸಾದ್ ರಾವ್, ಎ ಸಿ ಭಂಡಾರಿ, ಡಾ. ಎಂ. ಪ್ರಭಾಕರ ಜೋಶಿ, ಹರಿಕೃಷ್ಣ ಪುನರೂರು, ಡಾ. ಜಯಚಂದ್ರ ವರ್ಮ ರಾಜ ಮಾಯಿಪ್ಪಾಡಿ ದಂಪತಿ  ಇವರನ್ನು ಮಂದಾರ ಸಮ್ಮಾನ್ ನೀಡಿ ಗೌರವಿಸಲಾಯಿತು. ಮಂದಾರ ರಾಮಾಯಣ ಸಪ್ತಾಹ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಶಯ ಭಾಷಣ ಮಾಡಿ ಸನ್ಮಾನಿತರನ್ನು ಅಭಿನಂದಿಸಿದರು.
      ತುಳು ವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುವೆರೆ ಕೂಟ ಶಕ್ತಿನಗರದ ಅಧ್ಯಕ್ಷೆ ಭಾರತಿ ಜಿ. ಅಮೀನ್ ಸ್ವಾಗತಿಸಿದರು. ತುಳುವೆರೆ ಕೂಟದ ಕಾರ್ಯದರ್ಶಿ ಸುಧಾಕರ ಜೋಗಿ ವಂದಿಸಿದರು. ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು.



ನಾಂದಿ ವಾಚನ: ಪುಂಚದ ಬಾಲೆ
       ಉದ್ಘಾಟನಾ ಸಮಾರಂಭದ ಬಳಿಕ ನಾಂದಿ ವಾಚನಕ್ಕಾಗಿ  ಮಂದಾರ ರಾಮಾಯಣ ಗ್ರಂಥದ ಪ್ರತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ ಸಿ ಭಂಡಾರಿ ಪ್ರವಚನಕಾರರಿಗೆ ಹಸ್ತಾಂತರಿಸಿದರು. ನಂತರ 'ಏಳದೆ ಮಂದಾರ ರಾಮಾಯಣ'ದ ಪ್ರಥಮ ಅಧ್ಯಾಯ 'ಪುಂಚದ ಬಾಲೆ'  ಸುಗಿಪು - ದುನಿಪು ನಡೆಯಿತು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರವಚನ ನಡೆಸಿಕೊಟ್ಟರು;   ತೋನ್ಸೆ ಪುಷ್ಕಳ ಕುಮಾರ್ ಹಾಗೂ ಮಂಜುಳಾ ಜಿ. ರಾವ್ ಇರಾ ಕಾವ್ಯವನ್ನು ವಾಚಿಸಿದರು.

Read Post | comments

ಪಗ್ಗು 18 ಸಿರಿ ದಿನಾಚರಣೆ ಬಲೇ ಸಿರಿ ಭೂಮಿ ಬುಲೇಪಾಗ ತುಳುನಾಡಿನ ಬನ(ವನ) ಸಂಸ್ಕೃತಿಯು ಅದು ಜಗತ್ತಿಗೆ ಮಾದರಿ. : ಉದಯ ಕುಮಾರ್ ಶೆಟ್ಟಿ





ಮಂಗಳೂರು : ತುಳುನಾಡಿನ ಬನ ಸಂಸ್ಕೃತಿಯು ಅದು ಜಗತ್ತಿಗೆ ಮಾದರಿ ಆದುದರಿಂದಲೇ ಇವತ್ತಿಗೂ ತುಳುನಾಡಿನ ಸಂಸ್ಕೃತಿಯಲ್ಲಿ ಬನಗಳು ಅಚ್ಚಳಿಯದೆ ಉಳಿದಿದೆ. ಆದರೆ ಧಾರ್ಮಿಕತೆಯ ಹೆಸರಿನಲ್ಲಿ ಇದ್ದ ಬನಗಳನ್ನು ಕಡಿದು ಕಾಂಕ್ರೀಟ್ ಸ್ಮಾರಕಗಳಾಗಿ ಮಾಡುವುದು ಖೇದಕರ. ಕೇಪುಳ ಹೂವನ್ನು ನಿರಂತರವಾಗಿ ದೇವರಿಗೆ ಅರ್ಪಿಸುವುದರಿಂದ ಮತ್ತು ಅದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲಿ ಅದ್ಭುತವಾದಂತಹ ತಪೂಶಕ್ತಿಯು ಉಂಟಾಗುತ್ತದೆ. ಇಂತಹ ಹಲವು ಗಿಡಮೂಲಿಕೆಗಳನ್ನು ಕಡೆಗಣಿಸಿ ಆಡಂಬರದ ಹೆಸರಿನಲ್ಲಿ ಏನೇನೋ ವಸ್ತುಗಳನ್ನು ದೇವರಿಗೆ ಅರ್ಪಿಸುತ್ತಿದ್ದೇವೆ. ಬನ ವೆಂದರೆ ವನ ಎಂದರ್ಥ ಇಂತಹ ವನ ಸಂಸ್ಕೃತಿಯನ್ನು ಬೆಳೆಸಲು ಸಮಾಜ ಮುಂದಾಗಬೇಕಾಗಿದೆ ಎಂದು ಪಿಲಿಕುಳ ನಿಸರ್ಗಧಾಮ ಸಸ್ಯಕಾಶಿಯ ಮೇಲ್ವಿಚಾರಕರಾದ ಉದಯ ಕುಮಾರ್ ಶೆಟ್ಟಿ ಅವರು ಹೇಳಿದರು.
ಅವರು ನಗರದ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ನಡೆದ ಪಗ್ಗು 18 ಸಿರಿ ದಿನಾಚರಣೆ ಮತ್ತು ಬಲೆ ಸಿರಿಭೂಮಿ ಬುಳೆಪಾಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟರ ಯಾನೆ ನಾಡವರ ಸಂಘ ಮಹಿಳಾ ವಿಭಾಗ ಮತ್ತು ತುಳುವರ್ಲ್ಡ್ (ರಿ) ಕುಡ್ಲ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ವಹಿಸಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಜುಳಾ ಶೆಟ್ಟಿ ಅವರು ಮಾತನಾಡಿ ಪ್ರಕೃತಿ ಮತ್ತು ಸಂಸ್ಕೃತಿ ಪರಸ್ಪರ ಪೂರಕವಾಗಿರಬೇಕು ಸಂಸ್ಕೃತಿ ಹೆಸರಲ್ಲಿ ವಿಕೃತಿಯನ್ನು ಸೃಷ್ಟಿಸಿದರೆ ಮುಂದೊಂದು ದಿನ ಮೃತ್ಯು ಖಂಡಿತ ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕವಾಗಿ ಡಾ. ಆಶಾಜ್ಯೋತಿ ರೈ ಅವರು ಮಾತನಾಡಿ ಸಿರಿ ನಮ್ಮ ಸಂಸ್ಕೃತಿಯ ಪ್ರತೀಕ, ಸಿರಿ ಅಂದರೆ ಅದು ಪ್ರಕೃತಿ ಎಂದರ್ಥ ಆದುದರಿಂದ ಪ್ರಕೃತಿ ಮತ್ತು ಸಂಸ್ಕೃತಿ ಒಂದಾಗುವ ದಿವಸವನ್ನು ಪಗ್ಗು 18 ಸಿರಿ ದಿನಾಚರಣೆಯೆಂದು ಆಚರಿಸುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಹಣ ಸಂಪತ್ತನ್ನು ಬಿಟ್ಟು ಹೋಗದೆ ಹಿರಿಯರು ಕೊಟ್ಟ ಪ್ರಕೃತಿಯನ್ನು ಮರಳಿ ಕೊಡುವುದು ನಮ್ಮೆಲ್ಲರ ದ್ಯೆಯೋದ್ದೇಶ ಆಗಬೇಕು. ಆದುದರಿಂದ ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಈ ಯೋಜನೆಯನ್ನು ಎಲ್ಲೆಲ್ಲಿ ಖಾಲಿ ಭೂಮಿ ಬನ ದೇವಸ್ಥಾನ ಶಾಲೆ ವಠಾರಗಳು ಹಾಗೂ ತಮ್ಮ ಮನೆ ಪರಿಸರಗಳಲ್ಲಿ ಆದಷ್ಟು ಸಸಿಗಳನ್ನು ನೆಡುವ ಮತ್ತು ನಿರಂತರವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಪ್ರತಿಜ್ಞೆಯನ್ನು ಸ್ವೀಕರಿಸಬೇಕು ಎಂದು ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಂಗಳೂರು ವಿಭಾಗದ ವಿವಿಧ ಮಹಿಳಾ ಘಟಕಗಳು ಬಲೇ ಸಿರಿ ಭೂಮಿ ಬುಲೇಪಾಗ
ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತ ಗೊಳಿಸುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಕ ಮಾಧವ ಉಳ್ಳಾಲ್ ಅವರು ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸುತ್ತಮುತ್ತ ಹಲವಾರು ಮರಗಿಡಗಳನ್ನು ನೀಡುವಲ್ಲಿ ಮುತುವರ್ಜಿ ವಹಿಸಿದರು. ರಾಮಕೃಷ್ಣ ವಿದ್ಯಾರ್ಥಿ ನಿಲಯದ ಉಷಾ ಬಳ್ಳಾಲ್, ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
Read Post | comments

SUDDI

tuluworld

TULUWORLD CHANNEL

Popular Posts

ANAVARANA

KATHE

PADHO-KABITHE

BARAVU

 

Copyright © 2011 Tuluworld - All Rights Reserved