Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಅಸನಿಯಾಗ ಕಾಂತಗ ಜೋಗಿ ತುಳು ಕಾವ್ಯಯಾನ-2 ಹಾಗೂ ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ ಸಮಾರೋಪ



ತುಳುವಿನ ಮಹಾ ಕವಿಗಳಲ್ಲಿ ಒಬ್ಬರಾದ ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗ ಕಾಂತಗ ಜೋಗಿ ಕಾವ್ಯದ ವಾಚನ ಮತ್ತು ಪ್ರವಚನ ಕಾರ್ಯಕ್ರಮವು ಫೆಬ್ರವರಿ 1ರಂದು ಮಂಗಳೂರಿನ ಪೆÇಲೀಸ್ ಲೇನ್ ನಲ್ಲಿರುವ ಮುನೀಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 2:00 ಗಂಟೆಯಿಂದ ನಡೆಯಲಿದೆ. ತುಳುವಲ್ರ್ಡ್ ಮಂಗಳೂರು ನೇತೃತ್ವದಲ್ಲಿ ನಡೆಯುವ ತುಳು ಕಾವ್ಯಯಾನದ  ದ್ವಿತೀಯ ಕಾರ್ಯಕ್ರಮದ ಜೊತೆಗೆ ಪ್ರಜ್ವಲ್ ಆಕ್ಟಿಂಗ್ ಕ್ಲಾಸಿನ ಸಮಾರೋಪ ಸಮಾರಂಭವು ಈ ಸಂದರ್ಭದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ನಿರ್ವಹಿಸಲಿದ್ದಾರೆ. ತುಳು ಕಾವ್ಯಯಾನದ ಉದ್ಘಾಟನೆಯನ್ನು ಮಂಜುನಾಥ ಶೆಟ್ಟಿ, ಅಸಿಸ್ಟೆಂಟ್ ಕಮಿಷನರ್ ಆಫ್ ಪೆÇಲೀಸ್ ಮಂಗಳೂರು ಅವರು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರವೀಣ್ ಕುಮಾರ್ ಕೊಡಿಯಲ್ ಬೈಲ್, ಸದಸ್ಯರು ತುಳು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಅವರು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಸಿನಿಮಾ ನಟ ಬೋಜರಾಜ್ ವಾಮಂಜೂರು, ನಟ ನಿರ್ದೇಶಕ ರೂಪೇಶ್ ಶೆಟ್ಟಿ, ದಿವಾಕರ ಪಾಂಡೇಶ್ವರ, ತಾರನಾಥ ಶೆಟ್ಟಿ ಬೋಳಾರ್, ಸಿನಿಮಾ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಸಿನಿಮಾ ನಟ ಪವನ್ ಹೆಗ್ಡೆ, ಕಲಾವಿದ ಶರತ್ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ.

ತುಳುವಲ್ರ್ಡ್ ಸನ್ಮಾನ್
ಫಾರೆಸ್ಟ್ ಅಂಡ್ ಎನ್ವಿರೋ ಕ್ರಿಯೇಟರ್ಸ್ ಫೌಂಡೇಶನ್ ಗುಜರಾತ್ ಇದರ ಸ್ಥಾಪಕ. ಭಾರತದಾದ್ಯಂತ ಸುಮಾರು ನಲವತ್ತಕ್ಕೂ ಹೆಚ್ಚು ಬಂಜರು ಭೂಮಿಗಳಲ್ಲಿ ಕಾಡುಗಳನ್ನು ಬೆಳೆಸಿದ ಪರಿಸರಸ್ನೇಹಿ, ಗುಜರಾತಿನಲ್ಲಿ ಸುಮಾರು 16 ಸಾವಿರಕ್ಕಿಂತ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ ಮಾಡಿಕೊಟ್ಟ, ತುಳುನಾಡಿನ ಮುಟ್ಟಾಳೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಿದ ಡಾ. ಆರ್. ಕೆ. ನಾಯರ್ ಹಾಗೂ ತುಳು ರಂಗಭೂಮಿಯ ಭೀಷ್ಮ, ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸನ್ಮಾನಿತ ವಿಜಯ್‍ಕುಮಾರ್ ಕೊಡಿಯಾಲ್‍ಬೈಲ್ ಅವರಿಗೆ ತುಳುವಲ್ರ್ಡ್ ಸಮ್ಮಾನ್ ನೀಡಿ ಗೌರವಿಸಲಾಗುವುದು. ಡಾ. ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಬಾಳೆಕೋಡಿಮಠ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು.
ತುಳುವಲ್ರ್ಡ್ ಪ್ರಜ್ವಲ್ ಆಕ್ಟಿಂಗ್ ಕ್ಲಾಸ್ ತರಬೇತುದಾರರಾದ ಡಾ. ಅಶೋಕ್ ಕುಮಾರ್ ಕಾಸರಗೋಡು, ಜಿ. ಎ. ಬೋಳಾರ್, ಪ್ರಜ್ವಲ್ ಪೂಜಾರಿ, ರೂಪೇಶ್ ರೋಹಿತ್ ಶೆಟ್ಟಿ, ಅನ್ವಿತಾ ಅರವಿಂದ್ ಮೊದಲಾದವರನ್ನು ಗೌರವಿಸಲಾಗುವುದು. ಕೆದಂಬಾಡಿ ಜತ್ತಪ್ಪ ರೈಗಳ ಅಸನಿಯಾಗ ಕಾಂತಗಜೋಗಿ ಕಾವ್ಯದ ವಾಚನವನ್ನು ಪ್ರಶಾಂತ್ ರೈ ಪುತ್ತೂರು ಮತ್ತು ಅಮೃತ ಅಡಿಗ ಪಾಣಾಜೆ ಹಾಗೂ ಪ್ರವಚನವನ್ನು ಭಾಸ್ಕರ್ ರೈ ಕುಕ್ಕುವಳ್ಳಿ ನಡೆಸಿಕೊಡಲಿದ್ದಾರೆ. ತುಳುವಲ್ರ್ಡ್ ಆಯೋಜಿಸಿರುವ ಸಾಧಕ ವ್ಯಕ್ತಿಗಳ ಬಗ್ಗೆ ಪತ್ರಕರ್ತ ರವಿ ನಾಯ್ಕಪು ಅವರ ನಿರೂಪಣೆಯಲ್ಲಿ ದಾಖಲೀಕರಣ ಮಾಡಲಿರುವ ಅನಾವರಣದ ಪ್ರಥಮ ಸಂಚಿಕೆಯ ಬಿಡುಗಡೆಯನ್ನು  ಝೆಡ್. ಎ. ಕೈಯಾರ ಅವರು ನಿರ್ವಹಿಸಲಿದ್ದಾರೆ. ಎಂದು ತುಳುವಲ್ರ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ, ಮತ್ತು ಸದಸ್ಯರಾದ ಮುರಳಿ ಉಪ್ಪಂಗಳ, ಮಾಧವ ಭಂಡಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share on :

SUDDI

 

Copyright © 2011 Tuluworld - All Rights Reserved